ಪ್ರಧಾನ ಮಂತ್ರಿಯವರ ಕಛೇರಿ

ವಿಪತ್ತು ಗಂಡಾಂತರ ನಿಯಂತ್ರಣಕ್ಕಾಗಿ ಸೆಂಡೈ ಮಾರ್ಗಸೂಚಿಯ ಮಧ್ಯಂತರ(ಮಧ್ಯಕಾಲೀನ) ಪರಾಮರ್ಶೆ (2015-2030)


ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಭಾರತೀಯ ನಿಯೋಗದ ಮುಖ್ಯಸ್ಥ ಡಾ.ಪಿ.ಕೆ. ಮಿಶ್ರಾ ಭಾಷಣ

Posted On: 18 MAY 2023 10:30PM by PIB Bengaluru

ಗೌರವಾನ್ವಿತ ಗಣ್ಯರೆ,

ಭಾರತದಲ್ಲಿ, ನಾವು ವಿಪತ್ತು ಗಂಡಾಂತರಗಳ ನಿಯಂತ್ರಣ ಸಮಸ್ಯೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಒಪ್ಪುತ್ತೇವೆ; ಇದು ಕೇಂದ್ರ ಸರ್ಕಾರದ ಸಾರ್ವಜನಿಕ ನೀತಿಯ ವಿಷಯವಾಗಿದೆ.

ನಾವು ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಮೀಸಲಿಟ್ಟ ಹಣವನ್ನು ಗಮನಾರ್ಹವಾಗಿ ಹೆಚ್ಚಿಸಿದ್ದೇವೆ. ವಿಪತ್ತು ಅಪಾಯ ನಿರ್ವಹಣೆಯ ಅಗತ್ಯಗಳ ಸಂಪೂರ್ಣ ಶ್ರೇಣಿಯನ್ನು ಬೆಂಬಲಿಸಲು ನಾವು ನಮ್ಮ ಹಣಕಾಸು ವಾಸ್ತುಶಿಲ್ಪದಲ್ಲಿ ಹೆಗ್ಗುರುತು ಬದಲಾವಣೆಗಳನ್ನು ತಂದಿದ್ದೇವೆ ಅವೆಂದರೆ - ವಿಪತ್ತು ಅಪಾಯ ತಗ್ಗಿಸುವಿಕೆ, ಸನ್ನದ್ಧತೆ, ಸ್ಪಂದನೆ, ಚೇತರಿಕೆ ಮತ್ತು ಪುನರ್ನಿರ್ಮಾಣ. ನಮ್ಮ ದೇಶ ಮತ್ತು ಸ್ಥಳೀಯ ಸರ್ಕಾರಗಳು 5 ವರ್ಷಗಳಲ್ಲಿ (2021-2025) ವಿಪತ್ತು ಅಪಾಯವನ್ನು ತಗ್ಗಿಸಲು ಸುಮಾರು  6 ಬಿಲಿಯನ್‌ ಡಾಲರ್ ನಿಧಿ ಹೊಂದಿವೆ. ಇದು ಸನ್ನದ್ಧತೆ, ಪ್ರತಿಸ್ಪಂದನೆ ಮತ್ತು ಚೇತರಿಕೆಗಾಗಿ ಹೊಂದಿರುವ 23 ಶತಕೋಟಿ ಡಾಲರ್  ಸಂಪನ್ಮೂಲದ ಜತೆಗಿನ ಹೆಚ್ಚುವರಿ ಮೊತ್ತವಾಗಿದೆ.

ಕೇವಲ ಒಂದು ದಶಕದಲ್ಲಿ ನಾವು ಚಂಡಮಾರುತಗಳಿಂದ ಜೀವಹಾನಿಯನ್ನು 2%ಗಿಂತ  ಕಡಿಮೆ ಮಾಡಲು ಸಾಧ್ಯವಾಗಿದೆ. ಭೂಕುಸಿತಗಳು, ಹಿಮಚ್ಛಾದಿತ ಸಾಗರ ಸರೋವರಗಳು, ಪ್ರಕೋಪ ಪ್ರವಾಹಗಳು, ಭೂಕಂಪಗಳು, ಅರಣ್ಯ ಬೆಂಕಿ, ಶಾಖದ ಅಲೆಗಳು ಮತ್ತು ಮಿಂಚು – ಈ ರೀತಿಯ ಎಲ್ಲಾ ಅಪಾಯಗಳಿಂದ ನಷ್ಟದ ಅಪಾಯ  ಕಡಿಮೆ ಮಾಡಲು ನಾವು ಈಗ ಮಹತ್ವಾಕಾಂಕ್ಷೆಯ ನಿಯಂತ್ರಣ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ.

ಮುನ್ನೆಚ್ಚರಿಕೆಗಳ ಅಪಾಯಗಳನ್ನು ಸುಧಾರಿಸಲು ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ನಾವು ಸಾಮಾನ್ಯ ಎಚ್ಚರಿಕೆ ಶಿಷ್ಟಾಚಾರವನ್ನು ಅನುಷ್ಠಾನಗೊಳಿಸುತ್ತಿದ್ದೇವೆ, ಇದು ವಿಪತ್ತು ನಿರ್ವಾಹಕರು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಅಲರ್ಟ್ ಜನರೇಟಿಂಗ್ (ಮುನ್ನೆಚರಿಕೆ ನೀಡುವ) ಏಜೆನ್ಸಿಗಳನ್ನು ಸಂಯೋಜಿಸುತ್ತದೆ. ಇದು ನಮ್ಮ ದೇಶದ 1.3 ಶತಕೋಟಿ ನಾಗರಿಕರಲ್ಲಿ ಪ್ರತಿಯೊಬ್ಬರನ್ನು ತಲುಪಲು ಪ್ರಾದೇಶಿಕ ಭಾಷೆಗಳಲ್ಲಿ ಜಿಯೋ-ಉದ್ದೇಶಿತ ಎಚ್ಚರಿಕೆಗಳ ಪ್ರಸಾರವನ್ನು ಖಚಿತಪಡಿಸುತ್ತದೆ. '2027ರ ವೇಳೆಗೆ ಎಲ್ಲರಿಗೂ ಮುನ್ನೆಚ್ಚರಿಕೆ' ಕುರಿತು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅವರ ಉಪಕ್ರಮವನ್ನು ನಾವು ಶ್ಲಾಘಿಸುತ್ತೇವೆ. ಈ ಸಕಾಲಿಕ ಜಾಗತಿಕ ಉಪಕ್ರಮವು ನಿಗದಿಪಡಿಸಿದ ಗುರಿ ಸಾಧಿಸಲು ನಮ್ಮೆಲ್ಲಾ ಪ್ರಯತ್ನಗಳು ಕೊಡುಗೆ ನೀಡುತ್ತವೆ.

ಗೌರವಾನ್ವಿತ ಗಣ್ಯರೆ,

ಭಾರತದ ಅಧ್ಯಕ್ಷತೆಯಲ್ಲಿ, ಜಿ20 ಸದಸ್ಯ ದೇಶಗಳು ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಕಾರ್ಯಕಾರಿ ಗುಂಪು ಸ್ಥಾಪಿಸಲು ಒಪ್ಪಿಕೊಂಡಿದ್ದಾರೆ. ಜಿ20 ಕಾರ್ಯಕಾರಿ ಗುಂಪು ಗುರುತಿಸಿರುವ 5 ಆದ್ಯತೆಗಳೆಂದರೆ - ಎಲ್ಲರಿಗೂ ಮುನ್ನೆಚ್ಚರಿಕೆ, ಚೇತರಿಕೆಯ  ಮೂಲಸೌಕರ್ಯ, ಡಿಆರ್ ಆರ್ ನ ಸುಧಾರಿತ ಹಣಕಾಸು ವ್ಯವಸ್ಥೆಗಳು ಮತ್ತು ಪ್ರತಿಸ್ಪಂದನಾ ಸಾಮರ್ಥ್ಯಗಳು, ಉತ್ತಮವಾಗಿ ಮರುನಿರ್ಮಾಣ' ಮತ್ತು ಡಿಆರ್ ಆರ್ ಗೆ ಪರಿಸರ ವ್ಯವಸ್ಥೆ ಆಧಾರಿತ ವಿಧಾನಗಳು ಹೆಚ್ಚಿನ ಪ್ರಚೋದನೆ ನೀಡುತ್ತದೆ, ಜಾಗತಿಕವಾಗಿ ಸೆಂಡೈ ಮಾರ್ಗಸೂಚಿಗಳ ಗುರಿಗಳ ಸಾಧನೆಗೆ ನೆರವಾಗುತ್ತದೆ.

ಇದರ ಜತೆಗೆ, ಪ್ರಸ್ತುತ ಭಾರತ ಮತ್ತು ಅಮೆರಿಕ ಸಹ-ನೇತೃತ್ವದ ವಿಪತ್ತು ಚೇತರಿಕೆಯ ಮೂಲಸೌಕರ್ಯ ಒಕ್ಕೂಟವು 21ನೇ ಶತಮಾನದಲ್ಲಿ ಮೂಲಸೌಕರ್ಯ ವ್ಯವಸ್ಥೆಗಳನ್ನು ಯೋಜಿಸುವ, ವಿನ್ಯಾಸಗೊಳಿಸುವ, ನಿರ್ಮಿಸುವ ಮತ್ತು ನಿರ್ವಹಿಸುವ ರೀತಿಯಲ್ಲಿ ರೂಪಾಂತರ ತರುತ್ತಿದೆ. ಮೂಲಸೌಕರ್ಯ ಯೋಜನೆಗಳು ದೀರ್ಘಾವಧಿಯ ಹೂಡಿಕೆಗಳಾಗಿವೆ. ಈ ಮೂಲಸೌಕರ್ಯ ಹೂಡಿಕೆಗಳು ದೀರ್ಘಾವಧಿಯ ಚೇತರಿಕೆಯನ್ನು ಉಂಟು ಮಾಡಬಹುದು.

ಗೌರವಾನ್ವಿತರೆ, ಇಂದು ಬೆಳಗ್ಗೆ, ಟರ್ಕಿಯಲ್ಲಿ ಉಂಟಾದ ಭೂಕಂಪದಿಂದ ಬದುಕುಳಿದವರ ದುರ್ಘಟನೆಯನ್ನು ನಾವು ಕೇಳಿದ್ದೇವೆ.

ಈ ನಿಟ್ಟಿನಲ್ಲಿ ಮತ್ತು ವಿಶ್ವವನ್ನು ಒಂದು ದೊಡ್ಡ ಅಂತರ್-ಸಂಪರ್ಕಿತ ಕುಟುಂಬವಾಗಿ ನೋಡುವ ವಸುಧೈವ ಕುಟುಂಬಕಮ್‌ನ ಉತ್ಸಾಹದಲ್ಲಿ, ಭಾರತ ಸರ್ಕಾರವು ಟರ್ಕಿ ಮತ್ತು ಸಿರಿಯಾದಿಂದ ನಮ್ಮ ಸಹೋದರ ಸಹೋದರಿಯರಿಗೆ ಆಸ್ಪತ್ರೆಗಳು, ಶೋಧ ಮತ್ತು ಪಾರುಗಾಣಿಕಾ ತಂಡಗಳನ್ನು ಕಳುಹಿಸುವ ಮೂಲಕ ತಕ್ಷಣದ ಸಹಾಯ ನೀಡಿತು. ವೈದ್ಯಕೀಯ ಪರಿಹಾರ ವಸ್ತು. ಮಾನವ ಕೇಂದ್ರಿತ ಜಾಗತಿಕ ಅಭಿವೃದ್ಧಿ ವಿಧಾನಕ್ಕೆ ಇದು ನಿಜವಾದ ಸಾಕ್ಷಿ!

ಗೌರವಾನ್ವಿತ ಗಣ್ಯರೆ,

ಕೊನೆಯದಾಗಿ, ಮನೆಯಿಂದ ಹಿಡಿದು ಮತ್ತು ಪೃಥ್ವಿಯ ಎಲ್ಲೆಡೆ ವಿಪತ್ತು ಅಪಾಯಗಳನ್ನು ಕಡಿಮೆ ಮಾಡುವ ಪ್ರಯತ್ನಗಳಿಗೆ ಸೇರಲು ನಾವು ಸಿದ್ಧರಾಗಿರುತ್ತೇವೆ ಎಂದು ನಾನು ಹೇಳುತ್ತೇನೆ: “ಯಾರನ್ನೂ ಹಿಂದೆ ಬಿಡಬೇಡಿ, ಯಾವುದೇ ಸ್ಥಳವನ್ನು ಬಿಡಬೇಡಿ ಮತ್ತು ಯಾವುದೇ ಪರಿಸರ ವ್ಯವಸ್ಥೆಯನ್ನು ಬಿಡಬೇಡಿ ಎಂದು ಹೇಳುತ್ತಾ ನನ್ನ ಭಾಷಣ ಮುಗಿಸುತ್ತೇನೆ.

*****

 



(Release ID: 1929343) Visitor Counter : 101