ಪ್ರಧಾನ ಮಂತ್ರಿಯವರ ಕಛೇರಿ

ತಮ್ಮ ಭಾಷಣಗಳಲ್ಲಿ ಬುದ್ಧನ ಸಂದೇಶಗಳನ್ನು ಉಲ್ಲೇಖಿಸಿದ ಪಿಐಬಿ ಕೈಪಿಡಿಯನ್ನು ಹಂಚಿಕೊಂಡ ಪ್ರಧಾನಿ

Posted On: 19 APR 2023 8:21PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಬೆಳಗ್ಗೆ 10 ಗಂಟೆಗೆ ದೆಹಲಿಯಲ್ಲಿ ಜಾಗತಿಕ ಬೌದ್ಧ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಮಂತ್ರಿಯವರ ಭಾಷಣಗಳು ಮತ್ತು ಭಗವಾನ್ ಬುದ್ಧ ಮತ್ತು ಬೌದ್ಧ ಚಿಂತನೆಯ ಪ್ರಮುಖ ಉಲ್ಲೇಖಗಳ ಸಂಗ್ರಹವಾಗಿರುವ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಸಿದ್ಧಪಡಿಸಿದ ಕಿರುಪುಸ್ತಕವನ್ನು ಪ್ರಧಾನಿ ಹಂಚಿಕೊಂಡಿದ್ದಾರೆ.

ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಟ್ವೀಟ್ ನ್ನು ಉಲ್ಲೇಖಿಸಿ ಪ್ರಧಾನಿ ಟ್ವೀಟ್ ಮಾಡಿ: "ನಾಳೆ ಏಪ್ರಿಲ್ 20 ರಂದು ಬೆಳಗ್ಗೆ 10 ಗಂಟೆಗೆ ದೆಹಲಿಯಲ್ಲಿ ಜಾಗತಿಕ ಬೌದ್ಧ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದೇನೆ. ಈ ಶೃಂಗಸಭೆಯು ಭಗವಾನ್ ಬುದ್ಧನ ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲು ಕೆಲಸ ಮಾಡಿದ ವಿವಿಧ ಜನರನ್ನು ಒಟ್ಟುಗೂಡಿಸುತ್ತದೆ." ಎಂದು ಬರೆದುಕೊಂಡಿದ್ದಾರೆ.

ಕಿರುಪುಸ್ತಕಗಳನ್ನು 


ಇಂಗ್ಲಿಷ್ ಕಿರುಪುಸ್ತಕ
https://static.pib.gov.in/WriteReadData/specificdocs/documents/2023/apr/doc2023419182601.pdf

 ಹಿಂದಿ ಕಿರುಪುಸ್ತಕ

https://static.pib.gov.in/WriteReadData/specificdocs/documents/2023/apr/doc2023419182701.pdf
ಇಲ್ಲಿ ಪಡೆಯಬಹುದು.

****



(Release ID: 1922686) Visitor Counter : 104