ಪ್ರಧಾನ ಮಂತ್ರಿಯವರ ಕಛೇರಿ

ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ ಮತ್ತು ಭಾರತದಲ್ಲಿ 5G ಸೇವೆಗಳಿಗೆ ಚಾಲನೆ

Posted On: 01 OCT 2022 5:30PM by PIB Bengaluru

ಈ ಐತಿಹಾಸಿಕ ಸಂದರ್ಭದಲ್ಲಿ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳೇ, ದೇಶದ ಉದ್ಯಮ ಜಗತ್ತಿನ ಪ್ರತಿನಿಧಿಗಳೇ, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ,

ಈ ಶೃಂಗಸಭೆಯು  ಗ್ಲೋಬಲ್ ಆಗಿದೆ   ಆದರೆ ಧ್ವನಿ ಲೋಕಲ್ ಆಗಿದೆ. ಅಷ್ಟೇ ಅಲ್ಲ, ಆರಂಭವೂ ಸ್ಥಳೀಯವಾಗಿದೆ. 21 ನೇ ಶತಮಾನದ ಅಭಿವೃದ್ಧಿ ಹೊಂದುತ್ತಿರುವ ಭಾರತದ ಸಾಮರ್ಥ್ಯವನ್ನು ನೋಡಲು, ಆ ಸಾಮರ್ಥ್ಯವನ್ನು ನೋಡಲು, ಅದನ್ನು ಪ್ರದರ್ಶಿಸಲು ಇಂದು ವಿಶೇಷ ದಿನವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಐತಿಹಾಸಿಕ ಅವಧಿಯಲ್ಲಿ, ಅಕ್ಟೋಬರ್ 1, 2022, ಈ ದಿನಾಂಕವು ಇತಿಹಾಸದಲ್ಲಿ ದಾಖಲಾಗಲಿದೆ. ಎರಡನೆಯದಾಗಿ, ಈಗ ನವರಾತ್ರಿ ಉತ್ಸವ ನಡೆಯುತ್ತಿದೆ. ಶಕ್ತಿ ಆರಾಧನೆಯ ಹಬ್ಬವಿದೆ ಹಾಗೆಯೇ 21 ನೇ ಶತಮಾನದ ಅತಿದೊಡ್ಡ ಶಕ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಇಂದು ಆರಂಭಿಸಲಾಗುತ್ತಿದೆ. ಇಂದು, ದೇಶದ ಪರವಾಗಿ, ದೇಶದ ಟೆಲಿಕಾಂ ಉದ್ಯಮದಿಂದ, 130 ಕೋಟಿ ಭಾರತೀಯರಿಗೆ 5ಜಿ ರೂಪದಲ್ಲಿ ಅದ್ಭುತ ಕೊಡುಗೆ ಸಿಗುತ್ತಿದೆ. 5ಜಿಯು ದೇಶದ ಬಾಗಿಲನ್ನು ತಟ್ಟುವ ಹೊಸ ಯುಗವನ್ನು ತಂದಿದೆ. 5ಜಿ ಅವಕಾಶಗಳ ಅನಂತ ಆಕಾಶದ ಆರಂಭವಾಗಿದೆ. ಇದಕ್ಕಾಗಿ ನಾನು ಪ್ರತಿಯೊಬ್ಬ ಭಾರತೀಯನನ್ನು ಅಭಿನಂದಿಸುತ್ತೇನೆ.
 

ಸ್ನೇಹಿತರೇ,

ಈ ಹೆಮ್ಮೆಯ ಕ್ಷಣಗಳ ಜೊತೆಗೆ, 5G ಪರಿಚಯವಾಗುತ್ತಿರುವುದರಲ್ಲಿ, ನಮ್ಮೊಂದಿಗೆ ಗ್ರಾಮೀಣ ಶಾಲೆಗಳ ಮಕ್ಕಳೂ ಭಾಗವಹಿಸುತ್ತಿದ್ದಾರೆ, ಹಳ್ಳಿಗಳು ಸಹ ಭಾಗವಹಿಸುತ್ತಿವೆ, ಕಾರ್ಮಿಕರು ಮತ್ತು ಬಡವರು ಸಹ ಭಾಗವಹಿಸುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಇದೀಗ ನಾನು 5G ಹೊಲೊಗ್ರಾಮ್ ತಂತ್ರಜ್ಞಾನದ ಮೂಲಕ ಉತ್ತರ ಪ್ರದೇಶದ  ಗ್ರಾಮೀಣ ಶಾಲೆಯ ಬಾಲಕಿಯೊಂದಿಗೆ ಮಾತಾಡಿದೆ. ನಾನು 2012 ರ ಚುನಾವಣೆಯಲ್ಲಿ ಹೊಲೊಗ್ರಾಮ್‌ನೊಂದಿಗೆ ಪ್ರಚಾರ ಮಾಡುತ್ತಿದ್ದಾಗ ಅದು ಜಗತ್ತಿಗೆ ಅದ್ಭುತವಾಗಿತ್ತು. ಇಂದು ಅದು ಮನೆ ಮನೆಗೆ ತಲುಪುತ್ತಿದೆ. ಹೊಸ ತಂತ್ರಜ್ಞಾನವು ಅವರಿಗೆ ಶಿಕ್ಷಣದ ಅರ್ಥವನ್ನು ಹೇಗೆ ಬದಲಾಯಿಸುತ್ತಿದೆ ಎಂದು ನಾನು ಅರಿತುಕೊಂಡೆ. ಅದೇ ರೀತಿ, 5G ಮೂಲಕ, ಮಕ್ಕಳು ಗುಜರಾತ್, ಮಹಾರಾಷ್ಟ್ರ ಮತ್ತು ಒಡಿಶಾದ ಹಳ್ಳಿಗಳ ದೂರದ ಶಾಲೆಗಳಿಗೆ ಸಹ ಉನ್ನತ ತಜ್ಞರೊಂದಿಗೆ ತರಗತಿಯಲ್ಲಿ ಹೊಸ ವಿಷಯಗಳನ್ನು ಕಲಿಯುತ್ತಿದ್ದಾರೆ. ಅವರೊಂದಿಗೆ ಹೊಸ ಯುಗದ ತರಗತಿಯ ಭಾಗವಾಗಿರುವುದು ನಿಜಕ್ಕೂ ರೋಮಾಂಚಕ ಅನುಭವ.

ಸ್ನೇಹಿತರೇ,

5Gಯಲ್ಲಿ ಭಾರತದ ಪ್ರಯತ್ನಗಳು ಮತ್ತೊಂದು ಸಂದೇಶವನ್ನು ಹೊಂದಿವೆ. ನವ ಭಾರತವು ಕೇವಲ ತಂತ್ರಜ್ಞಾನದ ಗ್ರಾಹಕನಾಗಿ ಉಳಿಯುವುದಿಲ್ಲ, ಆದರೆ ಆ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅನುಷ್ಠಾನದಲ್ಲಿ ಭಾರತವು ಅತ್ಯಂತ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ಭವಿಷ್ಯದ ವೈರ್‌ಲೆಸ್ ತಂತ್ರಜ್ಞಾನವನ್ನು ವಿನ್ಯಾಸಗೊಳಿಸುವಲ್ಲಿ, ಅದಕ್ಕೆ ಸಂಬಂಧಿಸಿದ ಉತ್ಪಾದನೆಯಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸುತ್ತದೆ. 2G, 3G, 4G ಸಮಯದಲ್ಲಿ ಭಾರತವು ತಂತ್ರಜ್ಞಾನಕ್ಕಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿತ್ತು. ಆದರೆ 5ಜಿ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. 5G ಯೊಂದಿಗೆ, ಭಾರತವು ಮೊದಲ ಬಾರಿಗೆ ದೂರ ಸಂವಹನ (ಟೆಲಿಕಾಂ) ತಂತ್ರಜ್ಞಾನದಲ್ಲಿ ಜಾಗತಿಕ ಗುಣಮಟ್ಟವನ್ನು ರಚಿಸುತ್ತಿದೆ. ಭಾರತವು ಮುಂಚೂಣಿಯಲ್ಲಿದೆ. ಇಂದು, ಇಂಟರ್ನೆಟ್ ಬಳಸುವ ಪ್ರತಿಯೊಬ್ಬ ವ್ಯಕ್ತಿಯು 5Gಯು ಇಂಟರ್ನೆಟ್‌ನ ಸಂಪೂರ್ಣ ಸ್ವರೂಪವನ್ನು ಬದಲಾಯಿಸುತ್ತದೆ ಎಂದು ಅರ್ಥಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಇಂದು 5G ಭಾರತದ ಯುವಕರಿಗೆ ಒಂದು ದೊಡ್ಡ ಅವಕಾಶವನ್ನು ತಂದಿದೆ. ಅಭಿವೃದ್ಧಿ ಹೊಂದಿದ ಭಾರತ ಎಂಬ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ನಮ್ಮ ದೇಶ ಜಗತ್ತಿನ ಇತರ ದೇಶಗಳೊಂದಿಗೆ ಹೆಜ್ಜೆ ಹಾಕುತ್ತಿರುವುದು ನನಗೆ ಖುಷಿ ತಂದಿದೆ. ಇದು ಭಾರತದ ದೊಡ್ಡ ಯಶಸ್ಸು ಜೊತೆಗೆ ಡಿಜಿಟಲ್ ಇಂಡಿಯಾ ಅಭಿಯಾನದ ದೊಡ್ಡ ಯಶಸ್ಸು ಕೂಡಾ.
 

ಸ್ನೇಹಿತರೇ,

ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುವಾಗ ಕೆಲವರು ಇದು ಕೇವಲ ಸರ್ಕಾರದ ಯೋಜನೆ ಎಂದು ಭಾವಿಸುತ್ತಾರೆ. ಆದರೆ ಡಿಜಿಟಲ್ ಇಂಡಿಯಾ ಹೆಸರಿಗಷ್ಟೇ ಅಲ್ಲ, ದೇಶದ ಅಭಿವೃದ್ಧಿಯ ದೊಡ್ಡ ದೃಷ್ಟಿ. ಜನರಿಗಾಗಿ ಕೆಲಸ ಮಾಡುವ ಮತ್ತು ಜನರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಕೆಲಸ ಮಾಡುವ ತಂತ್ರಜ್ಞಾನವನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುವುದು ಈ ದೂರದೃಷ್ಟಿಯ ಗುರಿಯಾಗಿದೆ. ನನಗೆ ನೆನಪಿದೆ, ಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ಈ ದೂರದೃಷ್ಟಿಗೆ ತಂತ್ರವನ್ನು ಸಿದ್ಧಪಡಿಸುವಾಗ, ನಮ್ಮ ವಿಧಾನವು ತುಂಡುತುಂಡಾಗಿರಬಾರದು, ಆದರೆ ಸಮಗ್ರವಾಗಿರಬೇಕು ಎಂದು ನಾನು ಹೇಳಿದ್ದೆ. ಡಿಜಿಟಲ್ ಇಂಡಿಯಾದ ಯಶಸ್ಸಿಗೆ, ಈ ವಲಯದ ಎಲ್ಲಾ ಆಯಾಮಗಳನ್ನು ಒಂದೇ ಬಾರಿಗೆ ಆವರಿಸುವುದು ಅಗತ್ಯವಾಗಿತ್ತು. ಆದ್ದರಿಂದ ನಾವು 4 ಸ್ತಂಭಗಳ ಮೇಲೆ ಮತ್ತು ಏಕಕಾಲದಲ್ಲಿ ನಾಲ್ಕು ದಿಕ್ಕುಗಳಲ್ಲಿ ಕೇಂದ್ರೀಕರಿಸಿದ್ದೇವೆ. ಮೊದಲನೆಯದು - ಸಾಧನದ ವೆಚ್ಚ, ಎರಡನೆಯದು - ಡಿಜಿಟಲ್ ಸಂಪರ್ಕ, ಮೂರನೆಯದು - ಡೇಟಾದ ವೆಚ್ಚ, ನಾಲ್ಕನೇ ಮತ್ತು ಮುಖ್ಯವಾಗಿ - 'ಡಿಜಿಟಲ್ ಫಸ್ಟ್' ಕಲ್ಪನೆ.

ಸ್ನೇಹಿತರೇ,

ನಾವು ಮೊದಲ ಸ್ತಂಭದ ಬಗ್ಗೆ ಮಾತನಾಡುವಾಗ, ಅಂದರೆ ಉಪಕರಣದ ಬೆಲೆಯ ಬಗ್ಗೆ, ಒಂದು ವಿಷಯವು ತುಂಬಾ ಸ್ಪಷ್ಟವಾಗಿದೆ. ನಾವು ಸ್ವಾವಲಂಬಿಗಳಾಗಿದ್ದಾಗ ಮಾತ್ರ  ಉಪಕರಣದ ಬೆಲೆ ಕಡಿಮೆಯಾಗಬಹುದು ಮತ್ತು ಸ್ವಾವಲಂಬನೆಯ ಬಗ್ಗೆ ಅನೇಕ ಜನರು ನನ್ನ ಮಾತನ್ನು ಗೇಲಿ ಮಾಡಿದ್ದು ನಿಮಗೆ ನೆನಪಿರಬಹುದು. 2014 ರವರೆಗೆ, ನಾವು ಸುಮಾರು 100 ಪ್ರತಿಶತದಷ್ಟು ಮೊಬೈಲ್ ಫೋನ್‌ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು ಮತ್ತು ಆದ್ದರಿಂದ, ನಾವು ಈ ವಲಯದಲ್ಲಿ ಸ್ವಾವಲಂಬಿಯಾಗಲು ನಿರ್ಧರಿಸಿದೆವು. ನಾವು ಮೊಬೈಲ್ ಉತ್ಪಾದನಾ ಘಟಕಗಳನ್ನು ಹೆಚ್ಚಿಸಿದ್ದೇವೆ. 2014ರಲ್ಲಿ ದೇಶದಲ್ಲಿ ಕೇವಲ 2 ಮೊಬೈಲ್ ತಯಾರಿಕಾ ಘಟಕಗಳಿದ್ದರೆ, ಅಂದರೆ 8 ವರ್ಷಗಳ ಹಿಂದೆ,  ಈಗ ಅವುಗಳ ಸಂಖ್ಯೆ 200ಕ್ಕೂ ಹೆಚ್ಚಿದೆ. ಭಾರತದಲ್ಲಿ ಮೊಬೈಲ್ ಫೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಲು ನಾವು ಪ್ರೋತ್ಸಾಹವನ್ನು ನೀಡಿದ್ದೇವೆ, ಖಾಸಗಿ ವಲಯವನ್ನು ಪ್ರೋತ್ಸಾಹಿಸಿದ್ದೇವೆ. ಇಂದು ನೀವು ಪಿಎಲ್‍ಐ ಯೋಜನೆಯಲ್ಲಿ ಈ ಯೋಜನೆಯ ವಿಸ್ತರಣೆಯನ್ನು ಸಹ ನೋಡುತ್ತಿರುವಿರಿ. ಈ ಪ್ರಯತ್ನಗಳ ಫಲಿತಾಂಶಗಳು ತುಂಬಾ ಸಕಾರಾತ್ಮಕವಾಗಿವೆ. ಇಂದು, ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ 2 ನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲ ಈ ಮೊದಲು  ಮೊಬೈಲುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಇಂದು ನಾವು ಮೊಬೈಲ್‌ಗಳನ್ನು ರಫ್ತು ಮಾಡುತ್ತಿದ್ದೇವೆ ಮತ್ತು ಜಗತ್ತಿಗೆ ಕಳುಹಿಸುತ್ತಿದ್ದೇವೆ. ಸ್ವಲ್ಪ ಊಹಿಸಿಕೊಳ್ಳಿ, 2014 ರಲ್ಲಿ ಶೂನ್ಯ ಮೊಬೈಲ್ ಫೋನ್‌ಗಳನ್ನು ರಫ್ತು ಮಾಡಿದ ನಾವು ಇಂದು ಸಾವಿರಾರು ಕೋಟಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ರಫ್ತು ಮಾಡುವ ದೇಶವಾಗಿ ಮಾರ್ಪಟ್ಟಿದ್ದೇವೆ, ನಾವು ರಫ್ತು ಮಾಡುವ ದೇಶವಾಗಿ ಮಾರ್ಪಟ್ಟಿದ್ದೇವೆ. ಸ್ವಾಭಾವಿಕವಾಗಿ, ಈ ಎಲ್ಲಾ ಪ್ರಯತ್ನಗಳು ಉಪಕರಣದ ವೆಚ್ಚದ ಮೇಲೆ ಪ್ರಭಾವ ಬೀರಿವೆ. ಈಗ ನಾವು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯಲು ಪ್ರಾರಂಭಿಸಿದ್ದೇವೆ.

ಸ್ನೇಹಿತರೇ,

ಉಪಕರಣದ ವೆಚ್ಚದ ನಂತರ ನಾವು ಕೆಲಸ ಮಾಡಿದ ಎರಡನೇ ಸ್ತಂಭವು  ಡಿಜಿಟಲ್ ಸಂಪರ್ಕವಾಗಿದೆ. ಸಂವಹನ ವಲಯದ ನಿಜವಾದ ಶಕ್ತಿ ಸಂಪರ್ಕದಲ್ಲಿದೆ ಎಂದು ನಿಮಗೆ ತಿಳಿದಿದೆ. ಹೆಚ್ಚು ಜನರ ಸಂಪರ್ಕವು, ಕ್ಷೇತ್ರಕ್ಕೆ ಉತ್ತಮ. ನಾವು ಬ್ರಾಡ್‌ಬ್ಯಾಂಡ್ ಸಂಪರ್ಕದ ಬಗ್ಗೆ ಮಾತನಾಡುವುದಾದರೆ, 2014ರಲ್ಲಿ 60 ದಶಲಕ್ಷ ಬಳಕೆದಾರರಿದ್ದರು. ಇಂದು ಅವರ ಸಂಖ್ಯೆ 80 ಕೋಟಿಗೂ ಅಧಿಕವಾಗಿದೆ. ಇನ್ನು ಇಂಟರ್‌ನೆಟ್ ಸಂಪರ್ಕಗಳ ಬಗ್ಗೆ ಹೇಳುವುದಾದರೆ, 2014ರಲ್ಲಿ 250 ದಶಲಕ್ಷ ಇಂಟರ್‌ನೆಟ್ ಸಂಪರ್ಕಗಳಿದ್ದರೆ ಇಂದು ಅದರ ಸಂಖ್ಯೆ ಸುಮಾರು 85 ಕೋಟಿ ತಲುಪುತ್ತಿದೆ. ಇಂದು ನಮ್ಮ ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ನಗರಗಳಲ್ಲಿನ ಇಂಟರ್ನೆಟ್ ಬಳಕೆದಾರರ ಸಂಖ್ಯೆಗಿಂತ ವೇಗವಾಗಿ ಹೆಚ್ಚುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಮತ್ತು ಇದಕ್ಕೆ ವಿಶೇಷ ಕಾರಣವಿದೆ. 2014ರಲ್ಲಿ ಆಪ್ಟಿಕಲ್ ಫೈಬರ್ ದೇಶದ 100ಕ್ಕೂ ಕಡಿಮೆ ಪಂಚಾಯತಿಗಳಿಗೆ ತಲುಪಿದ್ದರೆ, ಇಂದು ಆಪ್ಟಿಕಲ್ ಫೈಬರ್ ಒಂದು ಲಕ್ಷದ 70 ಸಾವಿರ ಪಂಚಾಯತಿಗಳನ್ನು ತಲುಪಿದೆ. ಈಗ ಹೋಲಿಸಿ ನೋಡಿ ಎಲ್ಲಿ 100, ಎಲ್ಲಿ ಒಂದು ಲಕ್ಷ 70 ಸಾವಿರ. ಸರ್ಕಾರವು ಪ್ರತಿ ಮನೆಗೆ ವಿದ್ಯುತ್ ಒದಗಿಸುವ ಅಭಿಯಾನವನ್ನು ಪ್ರಾರಂಭಿಸಿದಂತೆ, ಹರ್ ಘರ್ ಜಲ ಅಭಿಯಾನದ ಮೂಲಕ ಎಲ್ಲರಿಗೂ ಶುದ್ಧ ನೀರು ಒದಗಿಸುವ ಉದ್ದೇಶದಲ್ಲಿ ಕೆಲಸ ಮಾಡಿದಂತೆ, ಉಜ್ವಲ ಯೋಜನೆಯ ಮೂಲಕ ಬಡ ಬಡವರಿಗೆ ಗ್ಯಾಸ್ ಸಿಲಿಂಡರ್ ಅನ್ನು ತಲುಪಿಸುವಂತೆ, ಕೋಟಿಗಟ್ಟಲೆ ಜನ ಬ್ಯಾಂಕ್ ಖಾತೆಗಳಿಲ್ಲದವರಿಗೆ ಜನ್ ಧನ್ ಖಾತೆಯ ಮೂಲಕ ಬ್ಯಾಂಕ್‌ನೊಂದಿಗೆ   ಸಂಪರ್ಕಿಸಲಾಗಿದೆ.. ಅದೇ ರೀತಿ ಎಲ್ಲರಿಗೂ ಇಂಟರ್‌ನೆಟ್‌  - ‘ಇಂಟರ್‌ನೆಟ್‌ ಫಾರ್ ಆಲ್ ‘ಎನ್ನುವ ಗುರಿಯತ್ತ ನಮ್ಮ ಸರ್ಕಾರವು ಕೆಲಸ ಮಾಡುತ್ತಿದೆ.

ಸ್ನೇಹಿತರೇ,

ಡಿಜಿಟಲ್ ಸಂಪರ್ಕದ ಹೆಚ್ಚಳದೊಂದಿಗೆ, ಡೇಟಾದ ವೆಚ್ಚವೂ ಅಷ್ಟೇ ಮುಖ್ಯವಾಗುತ್ತದೆ. ಇದು ಡಿಜಿಟಲ್ ಇಂಡಿಯಾದ ಮೂರನೇ ಸ್ತಂಭವಾಗಿದ್ದು, ಅದರ ಮೇಲೆ ನಾವು ಪೂರ್ಣ ಶಕ್ತಿಯಿಂದ ಕೆಲಸ ಮಾಡಿದ್ದೇವೆ. ಟೆಲಿಕಾಂ ಕ್ಷೇತ್ರದ ದಾರಿಯಲ್ಲಿ ಬರುತ್ತಿದ್ದ ಎಲ್ಲಾ ಅಡೆತಡೆಗಳನ್ನು ನಾವು ತೆಗೆದುಹಾಕಿದ್ದೇವೆ. ಈ ಹಿಂದೆ ದೂರದೃಷ್ಟಿಯ ಕೊರತೆ ಹಾಗೂ ಪಾರದರ್ಶಕತೆಯ ಕೊರತೆಯಿಂದ ಟೆಲಿಕಾಂ ಕ್ಷೇತ್ರ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಿತ್ತು. 4G ತಂತ್ರಜ್ಞಾನದ ವಿಸ್ತರಣೆಗೆ ನಾವು ಹೇಗೆ ನೀತಿ ಬೆಂಬಲವನ್ನು ನೀಡಿದ್ದೇವೆ ಎನ್ನುವುದು ನಿಮಗೆ ತಿಳಿದಿದೆ. ಇದು ಡೇಟಾದ ವೆಚ್ಚದಲ್ಲಿ ತೀವ್ರ ಕಡಿತ ಮತ್ತು ದೇಶದಲ್ಲಿ ಡೇಟಾ ಕ್ರಾಂತಿಯ ಹುಟ್ಟಿಗೆ ಕಾರಣವಾಯಿತು. ಉಪಕರಣದ ಬೆಲೆ, ಡಿಜಿಟಲ್ ಸಂಪರ್ಕ ಮತ್ತು ಡೇಟಾದ ವೆಚ್ಚ ಈ ಮೂರು ಅಂಶಗಳನ್ನು ನೋಡಿದಾಗ ಅದರ ಹಲವಾರು ಪರಿಣಾಮಗಳು ಎಲ್ಲೆಡೆ ಕಾಣಿಸಿಕೊಳ್ಳಲಾರಂಭಿಸಿತು.
 

ಸ್ನೇಹಿತರೇ,

ಇದೆಲ್ಲದರ ಜೊತೆಗೆ ಇನ್ನೊಂದು ಮುಖ್ಯವಾದ ಸಂಗತಿ ನಡೆಯಿತು, ಅದೇನೆಂದರೆ ದೇಶದಲ್ಲಿ 'ಡಿಜಿಟಲ್ ಫಸ್ಟ್' ಕಲ್ಪನೆಯನ್ನು ಅಭಿವೃದ್ಧಿಪಡಿಸಲಾಯಿತು. ಗಣ್ಯ ವರ್ಗದ ವಿದ್ವಾಂಸರು, ಅದರ ಬೆರಳೆಣಿಕೆಯಷ್ಟು ಜನರು ಸದನದ ಕೆಲವು ಭಾಷಣಗಳನ್ನು, ನಮ್ಮ ನಾಯಕರು ಹೇಗೆ ಭಾಷಣ ಮಾಡುತ್ತಾರೆ ಎನ್ನುವುದನ್ನು ನೋಡುವ ಕಾಲವಿತ್ತು ಮತ್ತು ತಮಾಷೆ ಮಾಡುತ್ತಿದ್ದರು. ಬಡವರಿಗೆ ಸಾಮರ್ಥ್ಯವಿಲ್ಲ, ಡಿಜಿಟಲ್ ಅರ್ಥವಾಗುವುದಿಲ್ಲ ಎಂದು ಅವರು ಭಾವಿಸುತ್ತಿದ್ದರು, ಅನುಮಾನಿಸುತ್ತಿದ್ದರು. ಬಡವರಿಗೆ ಡಿಜಿಟಲ್ ಎಂದರೆ ಏನೆಂದು ಅರ್ಥವೂ ಆಗುವುದಿಲ್ಲ ಎಂದು ಅವರು ಶಂಕಿಸಿದ್ದರು.  ಆದರೆ ನಾನು ಯಾವಾಗಲೂ ದೇಶದ ಸಾಮಾನ್ಯ ಮನುಷ್ಯರ ಬುದ್ಧಿಶಕ್ತಿ ಮತ್ತು ಅವರ ಜಿಜ್ಞಾಸೆಯ ಮನಸ್ಸಿನ ಮೇಲೆ ನಂಬಿಕೆ ಹೊಂದಿದ್ದೇನೆ. ಬಡ ಭಾರತೀಯರು ಕೂಡ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂದಿರುವುದನ್ನು ನಾನು ನೋಡಿದ್ದೇನೆ ಮತ್ತು ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ.

ಬಹುಶಃ ಇದು 2007-08 ಅಥವಾ 2009-10 ರ ಅವಧಿ ಇರಬಹುದು, ನನಗೆ ನೆನಪಿಲ್ಲ. ನಾನು ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದೆ ಆದರೆ ನಾನು ಹಿಂದೆಂದೂ ಹೋಗಿರದ ಪ್ರದೇಶವೊಂದಿತ್ತು ಅದು ಅತ್ಯಂತ ಬುಡಕಟ್ಟು ಪ್ರದೇಶ ಮತ್ತು ಬಹಳ ಹಿಂದುಳಿದಿತ್ತು. ಹಾಗಾಗಿ, ಒಮ್ಮೆ ಅಲ್ಲಿ ಕಾರ್ಯಕ್ರಮ ಆಯೋಜಿಸಬೇಕಿತ್ತು. ಆ ಪ್ರದೇಶವು ಯಾವುದೇ ಪ್ರಮುಖ ಯೋಜನೆಗಳ ಸಾಧ್ಯತೆಯೇ ಇರಲಿಲ್ಲ. ಅದು ಹೆಚ್ಚಾಗಿ ಅರಣ್ಯ ಭೂಮಿಯಾಗಿತ್ತು. ಕೊನೆಗೆ ಅಲ್ಲಿ ಶೀತಲೀಕರಣ ಕೇಂದ್ರ ಸ್ಥಾಪಿಸಬೇಕಿತ್ತು. ಹಾಲಿನ ಶೀತಲೀಕರಣ ಕೇಂದ್ರ ವೆಚ್ಚ 25 ಲಕ್ಷ ರೂಪಾಯಿಗಳು. ನಾನು ಹೇಳಿದೆ “ಅದನ್ನು ನಾನೇ ಉದ್ಘಾಟನೆ ಮಾಡುತ್ತೇನೆ, 25 ಲಕ್ಷ ರೂ.ಗಳ ಯೋಜನೆಯಾಗಲಿ, 25 ಸಾವಿರ ರೂ.ಗಳ ಯೋಜನೆಯಾಗಲಿ ಪರವಾಗಿಲ್ಲ’ ಎಂದು.  ಈಗ ಮುಖ್ಯಮಂತ್ರಿಗಳು ಈ ರೀತಿ ಚಿಕ್ಕ ಯೋಜನೆಗಳನ್ನು ಉದ್ಘಾಟಿಸಬಾರದು ಎಂದು ಜನ ಭಾವಿಸಿದ್ದಾರೆ. ಆದರೆ ನನಗೆ ಅಂತಹದ್ದೇನೂ ಆಗುವುದಿಲ್ಲ. ಹಾಗಾಗಿ ಆ ಗ್ರಾಮಕ್ಕೆ ಹೋಗಿ ಸಾರ್ವಜನಿಕ ಸಭೆ ನಡೆಸಲು ಸ್ಥಳವಿಲ್ಲದೇ ಇದ್ದಾಗ ಅಲ್ಲಿಂದ 4 ಕಿ.ಮೀ ದೂರದಲ್ಲಿ ಚಿಕ್ಕ ಶಾಲಾ ಮೈದಾನವಿತ್ತು. ಅಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. ಆದರೆ ಶೀತಲೀಕರಣ ಕೇಂದ್ರಕ್ಕೆ ಹೋದಾಗ, ನಾನು ಹಾಲಿಗಾಗಿ ಸರದಿಯಲ್ಲಿ ನಿಂತಿರುವ ಆದಿವಾಸಿ ತಾಯಂದಿರು ಮತ್ತು ಸಹೋದರಿಯರನ್ನು ಕಂಡೆ. ಹಾಗೆಯೇ ನಾವು ಹೋಗಿ ಉದ್ಘಾಟಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ ಅವರು ಹಾಲಿನ ಮಡಕೆಯನ್ನು ಕೆಳಗೆ ಇಟ್ಟು ಮೊಬೈಲ್‌ನಿಂದ ಫೋಟೋಗಳನ್ನು ತೆಗೆದುಕೊಳ್ಳಲು ಶುರು ಮಾಡಿದರು. ಇಷ್ಟು ದೂರದ ಪ್ರದೇಶದಲ್ಲಿ ಮೊಬೈಲ್‌ನಿಂದ ಫೋಟೋ ತೆಗೆಯುತ್ತಿರುವುದು ಅಚ್ಚರಿ ಮೂಡಿಸಿ ಅವರ ಬಳಿ ಹೋದೆ. ಈ ಫೋಟೋವನ್ನು ನೀವು ಏನು ಮಾಡುತ್ತೀರಿ ಎಂದು ನಾನು ಹೇಳಿದೆ? ಆಗ ಹೇಳಿದರು ಅವರು ಡೌನ್‌ಲೋಡ್ ಮಾಡುತ್ತೇವೆ ಎಂದು. ಈ ಮಾತುಗಳನ್ನು ಕೇಳಿ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಈ ಶಕ್ತಿ ನಮ್ಮ ದೇಶದ ಹಳ್ಳಿಯಲ್ಲಿದೆ ಎಂದು. ಹಾಲಿಗಾಗಿ ಬಂದಿದ್ದ ಬುಡಕಟ್ಟು ಪ್ರದೇಶದ ಬಡ ತಾಯಂದಿರು ತಮ್ಮ  ತಮ್ಮ ಮೊಬೈಲ್ ಫೋನ್‌ನಿಂದ ಫೋಟೋ ತೆಗೆಯುತ್ತಿದ್ದರು ಮತ್ತು ಅದನ್ನು ಡೌನ್‌ಲೋಡ್ ಮಾಡಬಹುದು ಎನ್ನುವುದು ಸಹ  ಅವರಿಗೆ ತಿಳಿದಿದೆ. ಅವರ ಬಾಯಿಂದ ಹೊರಬರುವ 'ಡೌನ್‌ಲೋಡ್' ಎಂಬ ಪದವು ಅವರ ಬುದ್ಧಿಶಕ್ತಿ ಮತ್ತು ಹೊಸ ವಿಷಯಗಳನ್ನು ಸ್ವೀಕರಿಸುವ ಕಲ್ಪನೆಯನ್ನು ನೀಡುತ್ತದೆ. ನಾನು ನಿನ್ನೆ ಗುಜರಾತಿನಲ್ಲಿದ್ದೆ. ನಾನು ಅಂಬಾ ಜಿ ಯಾತ್ರಾಸ್ಥಳಕ್ಕೆ ಭೇಟಿ ನೀಡಲು ಹೋಗುತ್ತಿದ್ದಾಗ, ದಾರಿಯಲ್ಲಿ ಸಣ್ಣ ಹಳ್ಳಿಗಳಿದ್ದವು. ಅರ್ಧಕ್ಕಿಂತ ಹೆಚ್ಚು ಜನರು ಮೊಬೈಲ್‌ನಿಂದ ವೀಡಿಯೋ ತೆಗೆಯುವವರೇ ಆಗಿದ್ದರು. ಅದು ನಮ್ಮ ದೇಶದ ಶಕ್ತಿ, ಈ ಶಕ್ತಿಯನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ ಮತ್ತು ದೇಶದ ಕೆಲವು ಗಣ್ಯರು ಮಾತ್ರ ನಮ್ಮ ಬಡ ಸಹೋದರ ಸಹೋದರಿಯರನ್ನು ನಂಬಲಿಲ್ಲ. ಅಂತಿಮವಾಗಿ ನಾವು 'ಡಿಜಿಟಲ್ ಫಸ್ಟ್' ವಿಧಾನದೊಂದಿಗೆ ಮುಂದುವರಿಯುವಲ್ಲಿ ಯಶಸ್ವಿಯಾಗಿದ್ದೇವೆ. ಸರ್ಕಾರವೇ ಮುಂದೆ ಹೋಗಿ ಡಿಜಿಟಲ್ ಪಾವತಿಗೆ ದಾರಿ ಮಾಡಿಕೊಟ್ಟಿತು. ಸರ್ಕಾರವೇ ಆ್ಯಪ್ ಮೂಲಕ ನಾಗರಿಕ ಕೇಂದ್ರಿತ ವಿತರಣಾ ಸೇವೆಯನ್ನು ಉತ್ತೇಜಿಸಿದೆ. ಅದು ರೈತರಾಗಲಿ ಅಥವಾ ಸಣ್ಣ ಅಂಗಡಿಯವರಾಗಲಿ ಅವರ ದೈನಂದಿನ ಅಗತ್ಯಗಳನ್ನು ಆ್ಯಪ್ ಮೂಲಕ ಪೂರೈಸುವ ಮಾರ್ಗವನ್ನು ನಾವು ನೀಡಿದ್ದೇವೆ. ಇದರ ಫಲಿತಾಂಶವನ್ನು ನೀವು ಇಂದು ನೋಡಬಹುದು. ಇಂದು ತಂತ್ರಜ್ಞಾನವು ನಿಜವಾದ ಪ್ರಜಾಪ್ರಭುತ್ವವಾಗಿದೆ,  ಕೊರೊನಾ ಜಾಗತಿಕ ಸಾಂಕ್ರಾಮಿಕದ ಕಾಲದಲ್ಲಿ ನಮ್ಮ 'ಡಿಜಿಟಲ್ ಫಸ್ಟ್' ವಿಧಾನವು ದೇಶದ ಜನರಿಗೆ ಎಷ್ಟು ಸಹಾಯ ಮಾಡಿದೆ ಎಂಬುದನ್ನು ನೀವು ನೋಡಿದ್ದೀರಿ. ಪ್ರಪಂಚದ ದೊಡ್ಡ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ನಾಗರಿಕರಿಗೆ ಸಹಾಯ ಮಾಡಲು ಹೆಣಗಾಡುತ್ತಿತ್ತು. ಖಜಾನೆಯಲ್ಲಿ ರೂಪಾಯಿಗಳು ಬಿದ್ದಿದ್ದವು, ಡಾಲರ್‌ಗಳಿದ್ದವು, ಪೌಂಡ್‌ಗಳಿದ್ದವು, ಎಲ್ಲವೂ ಇತ್ತು, ಯೂರೋಗಳಿದ್ದವು ಮತ್ತು ನೀಡಲು ನಿರ್ಧರಿಸಿದ್ದರು ಆದರೆ ತಲುಪಿಸಲು ದಾರಿಯೇ ಇರಲಿಲ್ಲ. ಆದರೆ ಭಾರತ ಒಂದೇ ಕ್ಲಿಕ್ ನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ನನ್ನ ದೇಶದ ನಾಗರಿಕರ ಖಾತೆಗೆ ವರ್ಗಾಯಿಸುತ್ತಿತ್ತು.  ಪ್ರಪಂಚವೇ ನಿಂತುಹೋದಾಗಲೂ ನಮ್ಮ ಮಕ್ಕಳು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು, ಓದುತ್ತಿದ್ದರು ಎಂಬುದು ಡಿಜಿಟಲ್ ಇಂಡಿಯಾದ ಶಕ್ತಿಯಾಗಿತ್ತು. ಆಸ್ಪತ್ರೆಗಳು ಅಸಾಧಾರಣ ಸವಾಲನ್ನು ಎದುರಿಸುತ್ತಿದ್ದವು, ಆದರೆ ವೈದ್ಯರು ತಮ್ಮ ರೋಗಿಗಳಿಗೆ ಟೆಲಿ-ಮೆಡಿಸಿನ್ ಮೂಲಕ ಚಿಕಿತ್ಸೆ ನೀಡುತ್ತಿದ್ದರು. ಕಚೇರಿಗಳು ಮುಚ್ಚಿದ್ದವು, ಆದರೆ 'ಮನೆಯಿಂದ ಕೆಲಸ' ನಡೆಯುತ್ತಿತ್ತು. ಇಂದು ನಮ್ಮಲ್ಲಿ ಸಣ್ಣ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು, ಸ್ಥಳೀಯ ಕಲಾವಿದರು, ಕುಶಲಕರ್ಮಿಗಳು ಇದ್ದಾರೆ, ಡಿಜಿಟಲ್ ಇಂಡಿಯಾ ಎಲ್ಲರಿಗೂ ವೇದಿಕೆಯನ್ನು ನೀಡಿದೆ, ಅದು ಮಾರುಕಟ್ಟೆಯನ್ನು ನೀಡಿದೆ. ಇಂದು ನೀವು ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ಮಾರುಕಟ್ಟೆಗೆ ಹೋಗಿ ನೋಡಿ, ಸಣ್ಣ ಬೀದಿ ವ್ಯಾಪಾರಿ ಕೂಡ ನಿಮಗೆ ಯುಪಿಐ ಮೂಲಕ ಪಾವತಿಸಲು ಹೇಳುತ್ತಾನೆ,  ನಾನೊಂದು ವೀಡಿಯೊವನ್ನು ನೋಡಿದೆ, ಭಿಕ್ಷುಕ ಕೂಡ ಡಿಜಿಟಲ್ ಪಾವತಿಯನ್ನು ತೆಗೆದುಕೊಳ್ಳುತ್ತಾನೆ. ಪಾರದರ್ಶಕತೆಯನ್ನು ನೋಡಿ! ಈ ಬದಲಾವಣೆಯು ಸೌಲಭ್ಯಗಳನ್ನು ಸುಲಭವಾಗಿ ಸಿಕ್ಕಾಗ ಒಬ್ಬರು ಹೇಗೆ ಸಶಕ್ತರಾಗುತ್ತಾರೆ ಎಂಬುದನ್ನು ತೋರಿಸುತ್ತದೆ.

ಅನುಕೂಲವು ಪ್ರವೇಶಿಸಬಹುದಾದಾಗ ಆಲೋಚನೆಯು ಹೇಗೆ ಸಶಕ್ತವಾಗುತ್ತದೆ ಎಂಬುದನ್ನು ಈ ಬದಲಾವಣೆಯು ತೋರಿಸುತ್ತದೆ.

ಸ್ನೇಹಿತರೇ,

ಸರಕಾರ ಸರಿಯಾದ ಉದ್ದೇಶದಿಂದ ಕೆಲಸ ಮಾಡಿದರೆ ನಾಗರಿಕರ ಆಶಯಗಳು ಬದಲಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂಬುದಕ್ಕೆ ಇಂದು ದೇಶವೇ ಟೆಲಿಕಾಂ ಕ್ಷೇತ್ರದಲ್ಲಿ ಕಾಣುತ್ತಿರುವ ಕ್ರಾಂತಿಯೇ ಸಾಕ್ಷಿ. ಇದು 2G ಉದ್ದೇಶ ಮತ್ತು 5G ಉದ್ದೇಶದ ನಡುವಿನ ವ್ಯತ್ಯಾಸವಾಗಿದೆ. ಇಲ್ಲದಿರುವುದಕ್ಕಿಂತ ನಿಧಾನವಾದರೂ ಒಳ್ಳೆಯದು. ಇಂದು ಭಾರತವು ಡೇಟಾವು ತುಂಬಾ ಅಗ್ಗದ ಮತ್ತು ಕೈಗೆಟುಕುವ ವಿಶ್ವದ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಹಿಂದೆ 1GB ಡೇಟಾದ ಬೆಲೆ 300 ರೂ.ಗೆ ಸಮೀಪದಲ್ಲಿದ್ದರೆ, ಇಂದು 1GB ಡೇಟಾದ ಬೆಲೆ ಕೇವಲ 10 ರೂ.ಗೆ ಇಳಿದಿದೆ. ಇಂದು ಭಾರತದಲ್ಲಿ, ಒಬ್ಬ ವ್ಯಕ್ತಿಯು ಒಂದು ತಿಂಗಳಲ್ಲಿ ಸರಾಸರಿ 14 GB ಡೇಟಾವನ್ನು ಮೊಬೈಲ್‌ನಲ್ಲಿ ಬಳಸುತ್ತಿದ್ದಾನೆ. 2014 ರಲ್ಲಿ, ಈ 14 ಜಿಬಿ ಡೇಟಾದ ವೆಚ್ಚವು ತಿಂಗಳಿಗೆ ಸುಮಾರು 4200 ರೂ. ಇಂದು 100 ಅಥವಾ 150 ರೂ.ಗೆ ಅದೇ ಪ್ರಮಾಣದ ಡೇಟಾ ಲಭ್ಯವಿದೆ. ಅಂದರೆ ಇಂದು ಬಡ ಮತ್ತು ಮಧ್ಯಮ ವರ್ಗದ ಸುಮಾರು 4000 ರೂ.ಗಳನ್ನು ಮೊಬೈಲ್ ಡೇಟಾದಲ್ಲಿ ಪ್ರತಿ ತಿಂಗಳು ಉಳಿಸಲಾಗುತ್ತಿದೆ. ನಮ್ಮ ಸರ್ಕಾರದ ಹಲವಾರು ಪ್ರಯತ್ನಗಳಿಂದ, ಭಾರತದಲ್ಲಿ ಡೇಟಾ ವೆಚ್ಚವು ತುಂಬಾ ಕಡಿಮೆಯಾಗಿದೆ. ಪ್ರತಿ ತಿಂಗಳು 4000 ರೂಪಾಯಿಗಳನ್ನು ಉಳಿಸುವುದು ಸಣ್ಣ ವಿಷಯವಲ್ಲ, ಆದರೆ ನಾನು ನಿಮಗೆ ಹೇಳಿದ ನಂತರ ನೀವು ಅದನ್ನು ಅರಿತುಕೊಂಡಿದ್ದೀರಿ ಏಕೆಂದರೆ ನಾವು ಎಂದಿಗೂ ನಮ್ಮದೇ ತುತ್ತೂರಿ ಊದಲಿಲ್ಲ. ನಾವು ಜಾಹೀರಾತು ನೀಡಿಲ್ಲ. ನಾವು ದೇಶದ ಜನರ ಜೀವನ ಸೌಕರ್ಯವನ್ನು ಹೆಚ್ಚಿಸಲು ಅವರ ಅನುಕೂಲತೆಯ ಮೇಲೆ ಮಾತ್ರ ಗಮನಹರಿಸಿದ್ದೇವೆ.

ಸ್ನೇಹಿತರೇ,

ಆಗಾಗ್ಗೆ ಹೇಳಲಾಗುತ್ತದೆ ಮೊದಲ ಮೂರು ಕೈಗಾರಿಕಾ ಕ್ರಾಂತಿಗಳ ಲಾಭವನ್ನು ಭಾರತ ಪಡೆಯಲು ಸಾಧ್ಯವಾಗಲಿಲ್ಲ ಎಂದು. ಆದರೆ ಭಾರತವು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಸಂಪೂರ್ಣ ಪ್ರಯೋಜನವನ್ನು ಪಡೆಯುವುದಲ್ಲದೆ ಅದನ್ನು ಮುನ್ನಡೆಸುತ್ತದೆ ಎಂದು ನಾನು ನಂಬುತ್ತೇನೆ ಮತ್ತು ಇದು ಕೇವಲ ಭಾರತದ ದಶಕವಲ್ಲ ಆದರೆ ಈ ಇಡೀ ಶತಮಾನವು ಭಾರತಕ್ಕೆ ಸೇರಿದೆ ಎಂದು ವಿದ್ವಾಂಸರು ಹೇಳಲು ಪ್ರಾರಂಭಿಸಿದ್ದಾರೆ. ಇದು ದಶಕವಲ್ಲ ಶತಮಾನ. 4G ಆಗಮನದ ನಂತರ ಭಾರತವು ತಂತ್ರಜ್ಞಾನದ ಜಗತ್ತಿನಲ್ಲಿ ಹೇಗೆ ಮುನ್ನಡೆದಿದೆ ಎಂಬುದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಭಾರತದ ನಾಗರಿಕರಿಗೆ ತಂತ್ರಜ್ಞಾನದಲ್ಲಿ ಸಮಾನ ಅವಕಾಶಗಳು ಸಿಕ್ಕಾಗ, ಅವರನ್ನು ಜಗತ್ತಿನಲ್ಲಿ ಯಾರೂ ಸೋಲಿಸಲು ಸಾಧ್ಯವಿಲ್ಲ. ಹಾಗಾಗಿ ಇಂದು ಭಾರತದಲ್ಲಿ 5G ಬಿಡುಗಡೆಯಾದಾಗ, ನಾನು ತುಂಬಾ ಆತ್ಮವಿಶ್ವಾಸದಲ್ಲಿರುತ್ತೇನೆ ಸ್ನೇಹಿತರೇ. ನಾನು ಭವಿಷ್ಯವನ್ನು ಮುಂಗಾಣಲು ಸಮರ್ಥನಾಗಿದ್ದೇನೆ ಮತ್ತು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿರುವ ಕನಸುಗಳು ನನಸಾಗುವುದನ್ನು ನಾವು ನೋಡುತ್ತೇವೆ. ನಮ್ಮ ಕಣ್ಣೆದುರು ನನಸಾಗುವುದನ್ನು ನೋಡಲು ಹೊರಟವರು ನಾವು. ಕಾಕತಾಳೀಯವಾಗಿ, ಕೆಲವೇ ವಾರಗಳ ಹಿಂದೆ ಭಾರತವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದ್ದರಿಂದ, 5G ತಂತ್ರಜ್ಞಾನದ ಸಹಾಯದಿಂದ ಪ್ರಪಂಚದ ಗಮನವನ್ನು ಸೆಳೆಯುವ ಆವಿಷ್ಕಾರಗಳನ್ನು ಮಾಡುವ ನಮ್ಮ ಯುವಕರಿಗೆ ಇದು ಒಂದು ಅವಕಾಶವಾಗಿದೆ. 5G ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮನ್ನು ತಾವು ವಿಸ್ತರಿಸಿಕೊಳ್ಳುವ ಮತ್ತು ಬೆಳೆಯುವ ನಮ್ಮ ಉದ್ಯಮಿಗಳಿಗೆ ಇದು ಒಂದು ಅವಕಾಶ. ಈ ತಂತ್ರಜ್ಞಾನವನ್ನು ತನ್ನ ಕೌಶಲ್ಯಗಳನ್ನು ಸುಧಾರಿಸಲು, ಕೌಶಲ್ಯವನ್ನು ಹೆಚ್ಚಿಸಲು, ಮರು-ಕೌಶಲ್ಯವನ್ನು ಹೆಚ್ಚಿಸಲು, ತನ್ನ ಆಲೋಚನೆಗಳನ್ನು ವಾಸ್ತವಕ್ಕೆ ಪರಿವರ್ತಿಸಲು ಭಾರತದ ಸಾಮಾನ್ಯ ಮನುಷ್ಯನಿಗೆ ಇದೊಂದು ಅವಕಾಶವಾಗಿದೆ.

ಸ್ನೇಹಿತರೇ,

ಇಂದಿನ ಐತಿಹಾಸಿಕ ಸಂದರ್ಭವು ಒಂದು ರಾಷ್ಟ್ರವಾಗಿ, ಭಾರತದ ಪ್ರಜೆಯಾಗಿ ನಮಗೆ ಹೊಸ ಸ್ಫೂರ್ತಿಯನ್ನು ತಂದಿದೆ. ಅಭೂತಪೂರ್ವ ವೇಗದಲ್ಲಿ ಭಾರತದ ಅಭಿವೃದ್ಧಿಯನ್ನು ವೇಗಗೊಳಿಸಲು ನಾವು ಈ 5G ತಂತ್ರಜ್ಞಾನವನ್ನು ಏಕೆ ಬಳಸಬಾರದು? ನಮ್ಮ ಆರ್ಥಿಕತೆಯನ್ನು ವೇಗವಾಗಿ ವಿಸ್ತರಿಸಲು ನಾವು ಈ 5G ತಂತ್ರಜ್ಞಾನವನ್ನು ಏಕೆ ಬಳಸಬಾರದು? ಈ 5G ತಂತ್ರಜ್ಞಾನವನ್ನು ಬಳಸಿಕೊಂಡು ನಾವು ನಮ್ಮ ಉತ್ಪಾದಕತೆಯನ್ನು ಏಕೆ ಹೆಚ್ಚಿಸಬಾರದು?

ಸ್ನೇಹಿತರೇ,

ಈ ಪ್ರಶ್ನೆಗಳಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಒಂದು ಅವಕಾಶ, ಸವಾಲು, ಕನಸು ಮತ್ತು ನಿರ್ಣಯವಿದೆ. ಇಂದು 5G ಬಿಡುಗಡೆಯನ್ನು ಅತ್ಯಂತ ಉತ್ಸಾಹದಿಂದ ನೋಡುತ್ತಿರುವ ವರ್ಗವೆಂದರೆ ನನ್ನ ದೇಶದ ಯುವಕರು ಅಥವಾ ಯುವ ಪೀಳಿಗೆ ಎಂದು ನನಗೆ ತಿಳಿದಿದೆ. ನಮ್ಮ ಟೆಲಿಕಾಂ ಉದ್ಯಮಕ್ಕೆ ಹಲವಾರು ಪ್ರಮುಖ ಅವಕಾಶಗಳು ಕಾಯುತ್ತಿವೆ. ಹಲವಾರು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ನಮ್ಮ ಕೈಗಾರಿಕೆಗಳು, ನಮ್ಮ ಸಂಸ್ಥೆಗಳು ಮತ್ತು ನಮ್ಮ ಯುವಜನರು ಈ ದಿಶೆಯಲ್ಲಿ ನಿರಂತರ ಕೆಲಸ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಬಹಳ ದಿನಗಳಿಂದ ನಡೆಯುತ್ತಿರುವ ಪ್ರದರ್ಶನವನ್ನು ಅರ್ಥಮಾಡಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೆ. ನಾನು ತಂತ್ರಜ್ಞಾನ ಬಲ್ಲವನಲ್ಲ ಆದರೆ ನಾನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಇದನ್ನು ನೋಡಿದಾಗ, ಇದನ್ನು ಎಲ್ಲಿ ಅನ್ವಯಿಸಬಹುದು ಮತ್ತು ನಮ್ಮ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಳವಡಿಸಬಹುದು ಮತ್ತು ಅದರ ಪರಿಣಾಮವು ಸರ್ಕಾರದ ನೀತಿಗಳಲ್ಲಿಯೂ ಕಂಡುಬರಬಹುದು ಎಂದು ಸರ್ಕಾರಕ್ಕೆ ತಿಳಿಸಲು ನನಗೆ ಅನಿಸಿತು. ಐದು ದಿನಗಳ ಕಾಲ ಈ ಪ್ರದರ್ಶನ ನಡೆಯಲಿದೆ. ನಾನು ವಿಶೇಷವಾಗಿ ತಂತ್ರಜ್ಞಾನದ ವಿದ್ಯಾರ್ಥಿಗಳಿಗೆ ಬರಲು, ಅದನ್ನು ನೋಡಿ ಮತ್ತು ಜಗತ್ತು ಬದಲಾಗುತ್ತಿರುವ ರೀತಿಯನ್ನು ಅರ್ಥಮಾಡಿಕೊಳ್ಳಲು ಒತ್ತಾಯಿಸುತ್ತೇನೆ. ಒಮ್ಮೆ ನೋಡಿದರೇ ಅನೇಕ ಹೊಸ ಸಂಗತಿಗಳನ್ನು ಗಮನಿಸಬಹುದು. ನೀವು ಅದಕ್ಕೆ ಸೇರಿಸಬಹುದು. ನಾನು ಪ್ರತಿ ಸ್ಟಾಲ್‌ಗೆ ಭೇಟಿ ನೀಡಿದಾಗ ನನಗೆ ತುಂಬಾ ಸಂತೋಷವಾಯಿತು ಎಂದು ನಾನು ಈ ಟೆಲಿಕಾಂ ಕ್ಷೇತ್ರದ ಜನರಿಗೆ ಹೇಳಲು ಬಯಸುತ್ತೇನೆ ಮತ್ತು ಅದು ಸ್ವದೇಶಿ, ಸ್ವಾವಲಂಬಿ ರೀತಿಯಲ್ಲಿ ಮಾಡಲ್ಪಟ್ಟಿದೆ ಎಂದು ಹೇಳಿದರು. ಎಲ್ಲರೂ ಬಹಳ ಹೆಮ್ಮೆಯಿಂದ ಹೇಳುತ್ತಿದ್ದರು. ನನಗೆ ಸಂತೋಷವಾಗಿದ್ದರೂ ನನ್ನ ಮನಸ್ಸಿನಲ್ಲಿ ಮತ್ತೇನೋ ನಡೆಯುತ್ತಿತ್ತು. ವಿವಿಧ ರೀತಿಯ ಕಾರುಗಳಿವೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಪ್ರತಿಯೊಂದೂ ತನ್ನದೇ ಆದ ಬ್ರಾಂಡ್ ಮತ್ತು ವಿಶಿಷ್ಟತೆಯನ್ನು ಹೊಂದಿದೆ. ಆದರೆ ಈ ಕಾರುಗಳ ಬಿಡಿಭಾಗಗಳನ್ನು ತಲುಪಿಸುವವರು ಎಮ್.ಎಸ್.ಎಮ್.ಇ  ವಲಯಕ್ಕೆ ಸೇರಿದವರು. ಅದೇ ಎಮ್.ಎಸ್.ಎಮ್.ಇ ಯ ಅದೇ ಕಾರ್ಖಾನೆಯು ಆರು ವಿಧದ ವಾಹನಗಳ ಬಿಡಿಭಾಗಗಳನ್ನು ತಯಾರಿಸುತ್ತದೆ ಮತ್ತು ಸಣ್ಣ ದುರಸ್ತಿ ಕಾರ್ಯಗಳನ್ನು ಮಾಡುತ್ತದೆ. ನೀವು ಹಾರ್ಡ್‌ವೇರ್ ಅನ್ನು ಸಹ ಪ್ರದರ್ಶಿಸುತ್ತಿದ್ದೀರಿ ಎಂದು ನನಗೆ ಅನಿಸಿತು. ಇದಕ್ಕೆ ಬೇಕಾದ ಹಾರ್ಡ್‌ವೇರ್‌ನ ಸಣ್ಣ ಭಾಗಗಳನ್ನು ತಯಾರಿಸುವ ಕೆಲಸವನ್ನು ಎಂ.ಎಸ್‌.ಎಂ.ಇ ವಲಯಕ್ಕೆ ನೀಡಬೇಕೇ? ನಾನು ದೊಡ್ಡ ಪರಿಸರ ವ್ಯವಸ್ಥೆಯನ್ನು ರಚಿಸಲು ಬಯಸುತ್ತೇನೆ. ನಾನು ವ್ಯಾಪಾರಿ ಅಥವಾ ಉದ್ಯಮಿ ಅಲ್ಲ. ನನಗೂ ಹಣಕ್ಕೂ ಯಾವುದೇ ಸಂಬಂಧವಿಲ್ಲ, ಆದರೆ ಈ ರೀತಿಯಾಗಿ ವೆಚ್ಚವು ಒಮ್ಮೆಗೇ ಕಡಿಮೆಯಾಗುತ್ತದೆ ಎಂದು ನಾನು ನಂಬುತ್ತೇನೆ. ಇದು ನಮ್ಮ ಎಂ.ಎಸ್‌.ಎಂ.ಇ ವಲಯದ ಶಕ್ತಿಯಾಗಿದೆ. ನಿಮ್ಮ ಅನನ್ಯತೆ ಮತ್ತು ತಂತ್ರಾಂಶ  ಇತ್ಯಾದಿಗಳನ್ನು ಸೇರಿಸುವ ಮೂಲಕ ಮಾತ್ರ ನೀವು ಆ ಸೇವೆಯನ್ನು ಒದಗಿಸಬೇಕು. ಹಾಗಾಗಿ ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಮತ್ತು ಆಗ ಮಾತ್ರ ವೆಚ್ಚವು ಕಡಿಮೆಯಾಗುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾವು ಸಾಮಾನ್ಯವಾಗಿ ಒಟ್ಟಿಗೆ ಮಾಡುವ ಅನೇಕ ಕೆಲಸಗಳಿವೆ. ನವೋದ್ಯಮ, ಸ್ಟಾರ್ಟ್‌ಅಪ್‌ಗಳಲ್ಲಿ ಕೆಲಸ ಮಾಡಿದ ಹೆಚ್ಚಿನ ಯುವಕರು ಈ ಕ್ಷೇತ್ರದಲ್ಲಿ ನುರಿತರಾಗಿರುವುದನ್ನು ನಾನು ನೋಡಿದ್ದೇನೆ. ಈ ಕ್ಷೇತ್ರದಲ್ಲಿ ನೀವು ಒದಗಿಸಬಹುದಾದ ಸೇವೆಗಳ ಸಂಖ್ಯೆಯನ್ನು ಕಂಡುಹಿಡಿಯಲು ನಾನು ನವೋದ್ಯಮಗಳಿಗೆ ಹೇಳಲು ಬಯಸುತ್ತೇನೆ. ಎಷ್ಟು ಬಳಕೆದಾರ ಸ್ನೇಹಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬಹುದು? ಅಷ್ಟಕ್ಕೂ ಅದರ ಲಾಭ ಇದೇನೆ. ಆದರೆ ನಾನು ಇನ್ನೊಂದು ವಿಷಯವನ್ನು ಬಯಸುತ್ತೇನೆ. ನಿಮ್ಮ ಸಂಘವು ಒಟ್ಟಾಗಿ ಚಳುವಳಿ ನಡೆಸಬಹುದೇ? ಭಾರತದ ಎಲ್ಲಾ ಜಿಲ್ಲಾ ಕೇಂದ್ರಗಳ ಜನರ ಜೀವನದಲ್ಲಿ ಈ 5G ಹೇಗೆ ಉಪಯುಕ್ತವಾಗಿದೆ? ಜನರಿಗೆ ಶಿಕ್ಷಣ ನೀಡುವ ಪ್ರದರ್ಶನಗಳನ್ನು ಆಯೋಜಿಸಬಹುದೇ? ನನ್ನ ಅನುಭವದಿಂದ ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ. ನಮ್ಮ ದೇಶದಲ್ಲಿ 24 ಗಂಟೆ ವಿದ್ಯುತ್ ಎಂಬುದು ಕನಸಾಗಿತ್ತು. ನಾನು ಗುಜರಾತ್‌ನಲ್ಲಿದ್ದಾಗ ನಾನು ಜ್ಯೋತಿಗ್ರಾಮ ಯೋಜನೆ ಎಂಬ ಯೋಜನೆಯನ್ನು ತಂದಿದ್ದೆ ಮತ್ತು ಗುಜರಾತ್‌ನ ಪ್ರತಿ ಮನೆಗೆ 24x7 ವಿದ್ಯುತ್ ನೀಡುವುದು ನನ್ನ ಕನಸಾಗಿತ್ತು. ಈಗ ನನ್ನ ಎಲ್ಲಾ ಅಧಿಕಾರಿಗಳು ಹೇಳುತ್ತಿದ್ದರು ಬಹುಶಃ ಹಾಗೆ ಮಾಡಲು ಸಾಧ್ಯವಿಲ್ಲ ಎಂದು. ಹಾಗಾಗಿ ನಾನು ಸರಳ ಪರಿಹಾರವನ್ನು ನೀಡಿದೆ. ಕೃಷಿ ಫೀಡರ್ ಮತ್ತು ದೇಶೀಯ ಫೀಡರ್ ಅನ್ನು ಪ್ರತ್ಯೇಕಿಸಬೇಕು ಎಂದು ನಾನು ಹೇಳಿದೆ. ಅದನ್ನು ಮಾಡಿದ ನಂತರ, ನಾವು ಪ್ರತಿ ಜಿಲ್ಲೆಯಲ್ಲೂ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಆದ್ದರಿಂದ, ಒಂದು ಕೆಲಸ ಪೂರ್ಣಗೊಂಡಿದೆ. ನಂತರ ನಾವು ಆ ಜಿಲ್ಲೆಯಲ್ಲಿ ಪ್ರಮುಖ ಸಭೆಯನ್ನು ನಡೆಸುತ್ತೇವೆ. 2-2.5 ಲಕ್ಷ ಜನರು ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು ಏಕೆಂದರೆ 24 ಗಂಟೆಗಳ ವಿದ್ಯುತ್ ಸಿಗುವುದು ಬಹಳ ಸಂತೋಷದ ಸಂದರ್ಭವಾಗಿತ್ತು! ಅದು 2003-04-05 ರ ಅವಧಿ. ವಿದ್ಯುಚ್ಛಕ್ತಿಯಿಂದ ಮಾಡಬಹುದಾದ ಎಲ್ಲಾ ಕೆಲಸಗಳು ಮತ್ತು ವಿದ್ಯುತ್ತಿನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಯಂತ್ರಗಳ ಪ್ರದರ್ಶನವನ್ನು ನಾನು ನಡೆಸಿದೆ. ಇಲ್ಲದಿದ್ದರೆ ಜನರು ರಾತ್ರಿಯ ಊಟವನ್ನು ತಿನ್ನಲು ಅಥವಾ ಟಿವಿ ನೋಡುವುದರೊಂದಿಗೆ ವಿದ್ಯುತ್ ಅನ್ನು ಸಮೀಕರಿಸಬಹುದು. ಆದರೆ ವಿದ್ಯುತ್ ಅನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಹಾಗಾಗಿ ಅದರ ಬಗ್ಗೆ ಶಿಕ್ಷಣವೂ ಅಗತ್ಯವಾಗಿತ್ತು. ಆದರೆ ನಾನು ಅರಿತುಕೊಂಡ ಸಂಗತಿಯೆಂದರೆ, ಬೃಹತ್ ಪ್ರದರ್ಶನದ ನಂತರ ಟೈಲರ್‌ಗಳು ಸಹ ತಮ್ಮ ಯಂತ್ರಗಳನ್ನು 24 ಗಂಟೆಗಳ ವಿದ್ಯುತ್‌ನೊಂದಿಗೆ ಹೇಗೆ ಹೊಂದಿಸುವುದು ಎಂಬುದರ ಕುರಿತು ಯೋಚಿಸಲು ಪ್ರಯತ್ನಿಸುತ್ತಾರೆ; ಕುಂಬಾರನು ಸಹ ತಾನು ಖರೀದಿಸುವ ವಿದ್ಯುತ್ ಉಪಕರಣದ ಪ್ರಕಾರವನ್ನು ನಿರ್ಧರಿಸಿದನು ಮತ್ತು ದೇಶಾದ್ಯಂತ ತಾಯಂದಿರು ಮತ್ತು ಹೆಣ್ಣುಮಕ್ಕಳು ಅವರು ಅಡುಗೆಮನೆಯಲ್ಲಿ ಬಳಸಬಹುದಾದ ವಿದ್ಯುತ್ ಉಪಕರಣಗಳ ಬಗ್ಗೆ ಯೋಚಿಸಲು ಪ್ರಾರಂಭಿಸಿದರು. ಆಗ ಒಂದು ದೊಡ್ಡ ಮಾರುಕಟ್ಟೆ ಹುಟ್ಟಿಕೊಂಡಿತು ಮತ್ತು ವಿದ್ಯುತ್ತಿನ ಬಹುವಿಧವಾದ ಬಳಕೆ ಪ್ರಾರಂಭವಾಯಿತು. ಅಂತೆಯೇ, 5G ಯೊಂದಿಗೆ ಜನರು ತಮ್ಮ ಜೀವನದಲ್ಲಿ ಬಹು ಉಪಯೋಗಗಳ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ ಏಕೆಂದರೆ ವೀಡಿಯೊಗಳನ್ನು ಬಹಳ ವೇಗವಾಗಿ ಡೌನ್‌ಲೋಡ್ ಮಾಡಬಹುದು. ಒಬ್ಬ ವ್ಯಕ್ತಿಯು ರೀಲ್‌ಗಳನ್ನು ವೀಕ್ಷಿಸಲು ಬಯಸಿದರೆ ಅದು ದೀರ್ಘಕಾಲ ಬಫರ್ ಆಗುವುದಿಲ್ಲ. ಫೋನ್ ಇಂಟರ್ನೆಟ್‌ನಿಂದ ಸಂಪರ್ಕ ಕಡಿತಗೊಳ್ಳುವುದಿಲ್ಲ. ಸ್ಪಷ್ಟವಾದ ವೀಡಿಯೊ ಮತ್ತು ಆಡಿಯೊದೊಂದಿಗೆ ವೀಡಿಯೊ ಕಾನ್ಫರೆನ್ಸ್ ಮಾಡಬಹುದು. ನೀವು ಫೋನ್ ಕರೆಗಳನ್ನು ಮಾಡಬಹುದು. ಇದಲ್ಲದೆ, ಇದು ಜೀವನವನ್ನು ಬದಲಾಯಿಸುವ ವ್ಯವಸ್ಥೆಯಾಗಲಿದೆ. ಆದ್ದರಿಂದ ನಾನು ಈ ಉದ್ಯಮದ ಸಂಘವನ್ನು ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಭಾರತದ ಪ್ರತಿಯೊಂದು ಜಿಲ್ಲೆಗಳಿಗೆ ಹೋಗಿ ಮತ್ತು 5G ಅನ್ನು ಅನ್ವಯಿಸಬಹುದಾದ ಅಂಶಗಳ ಸಂಖ್ಯೆಯನ್ನು ಕಂಡುಹಿಡಿಯಲು ಕೇಳುತ್ತೇನೆ ಮತ್ತು ನಾವು ಅದಕ್ಕೆ ಮೌಲ್ಯವನ್ನು ಸೇರಿಸಬೇಕಾಗಿದೆ. ಹಾಗಾಗಿ ಇದು ನಿಮಗೆ ಸೇವೆಯಾಗಲಿದೆ ಮತ್ತು ಈ ತಂತ್ರಜ್ಞಾನವು ಕೇವಲ ಮಾತನಾಡಲು ಅಥವಾ ಜೀವನದಲ್ಲಿ ಯಾವುದೇ ವೀಡಿಯೊವನ್ನು ವೀಕ್ಷಿಸಲು ಸೀಮಿತವಾಗಿರಬಾರದು. ಸಂಪೂರ್ಣ ಕ್ರಾಂತಿಯನ್ನು ತರಲು ಇದನ್ನು ಬಳಸಬೇಕು ಮತ್ತು ನಾವು 130 ಕೋಟಿ ಜನರನ್ನು ತಲುಪಬೇಕು. ಇದು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನಾನು ಡ್ರೋನ್ ನೀತಿಯೊಂದಿಗೆ ಬಂದಿದ್ದೆ. ಇಂದು ಹಲವು ಪ್ರದೇಶಗಳಲ್ಲಿ ಡ್ರೋನ್ ನಿಂದ ಕ್ರಿಮಿನಾಶಕ ಸಿಂಪಡಿಸುವ ಕೆಲಸ ಆರಂಭಿಸಿರುವುದನ್ನು ಕಂಡಿದ್ದೇನೆ. ಅವರು ಡ್ರೋನ್‌ಗಳನ್ನು ನಿರ್ವಹಿಸಲು ಕಲಿತಿದ್ದಾರೆ ಮತ್ತು ಅದಕ್ಕಾಗಿಯೇ ನಾವು ಈ ವ್ಯವಸ್ಥೆಗಳನ್ನು ಬಳಸಬೇಕೆಂದು ನಾನು ನಂಬುತ್ತೇನೆ.

ಮತ್ತೆ ಸ್ನೇಹಿತರೇ,

ಮುಂಬರುವ ದಿನಗಳಲ್ಲಿ, ದೇಶವು ಅಂತಹ ತಂತ್ರಜ್ಞಾನಗಳನ್ನು ನಿರಂತರವಾಗಿ ಮುನ್ನಡೆಸುತ್ತದೆ, ಅದು ಭಾರತದಲ್ಲಿ ಹುಟ್ಟಿಕೊಳ್ಳುತ್ತದೆ, ಇದು ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುತ್ತದೆ. ಆ ನಂಬಿಕೆಯೊಂದಿಗೆ, ನಾನು ನಿಮಗೆ ಶುಭ ಹಾರೈಸುತ್ತೇನೆ! ಮತ್ತೊಮ್ಮೆ, ಶಕ್ತಿ ಆರಾಧನೆಯ ಮಂಗಳಕರ ಹಬ್ಬದಂದು ಶಕ್ತಿಯ ಮಹಾನ್ ಮಾಧ್ಯಮವಾದ 5G ಅನ್ನು ಪ್ರಾರಂಭಿಸಿದ್ದಕ್ಕಾಗಿ ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ತುಂಬಾ ಧನ್ಯವಾದಗಳು!

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

*****



(Release ID: 1865138) Visitor Counter : 229