ಪ್ರಧಾನ ಮಂತ್ರಿಯವರ ಕಛೇರಿ

ಸುಜ್ಲಾನ್ ಎನರ್ಜಿಯ ಸಂಸ್ಥಾಪಕರಾದ ಶ್ರೀ ತುಳಸಿ ತಾಂತಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ

Posted On: 02 OCT 2022 1:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಿರಿಯ ಉದ್ಯಮಿ ಮತ್ತು ಸುಜ್ಲಾನ್ ಎನರ್ಜಿಯ ಸಂಸ್ಥಾಪಕರಾದ ಶ್ರೀ ತುಳಸಿ ತಾಂತಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ವೀಟ್‌ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;

"ಶ್ರೀ ತುಳಸಿ ತಾಂತಿ ಅವರು ಭಾರತದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿದ ಪ್ರವರ್ತಕ ವ್ಯಾಪಾರವಲಯದ ದಿಗ್ಗಜರಾಗಿದ್ದರು ಮತ್ತು ಸುಸ್ಥಿರ ಅಭಿವೃದ್ಧಿಗೆ ನಮ್ಮ ರಾಷ್ಟ್ರದ ಪ್ರಯತ್ನಗಳನ್ನು ಬಲಪಡಿಸಿದರು. ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ. ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಸಂತಾಪಗಳು. ಓಂ ಶಾಂತಿ."

****



(Release ID: 1864768) Visitor Counter : 104