ಪ್ರಧಾನ ಮಂತ್ರಿಯವರ ಕಛೇರಿ

ಖ್ಯಾತ ಗಾಂಧಿವಾದಿ ಶಕುಂತಲಾ ಚೌಧರಿಯವರ ನಿಧನಕ್ಕೆ ಪ್ರಧಾನಮಂತ್ರಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ

Posted On: 21 FEB 2022 9:23AM by PIB Bengaluru

ಖ್ಯಾತ ಗಾಂಧಿವಾದಿ ಶಕುಂತಲಾ ಚೌಧರಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಟ್ವೀಟ್ನಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆ:

"ಶಕುಂತಲಾ ಚೌಧರಿ ಜೀ ಅವರು ಗಾಂಧಿಯ ಮೌಲ್ಯಗಳನ್ನು ಉತ್ತೇಜಿಸಲು ಅವರ ಜೀವಮಾನದ ಕಾರ್ಯಗಳಿಗಾಗಿ ಸ್ಮರಿಸಲ್ಪಡುತ್ತಾರೆ. ಸರಾನಿಯಾ ಆಶ್ರಮದಲ್ಲಿ ಅವರ ಉದಾತ್ತ ಕಾರ್ಯಗಳು ಅನೇಕರ ಜೀವನವನ್ನು ಧನಾತ್ಮಕವಾಗಿ ಪ್ರಭಾವಿಸಿದೆ. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ."

 

***



(Release ID: 1800020) Visitor Counter : 162