ಪ್ರಧಾನ ಮಂತ್ರಿಯವರ ಕಛೇರಿ

ಮುಂಬೈ ಮತ್ತು ಸಿಂಧೂದುರ್ಗದ ಚಿಪಿ ವಿಮಾನ ನಿಲ್ದಾಣದ ನಡುವೆ ವೈಮಾನಿಕ ಸೇವೆ ಆರಂಭವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ

Posted On: 09 OCT 2021 11:11PM by PIB Bengaluru

ಮುಂಬೈ ಮತ್ತು ಸಿಂಧೂದುರ್ಗದ ಚಿಪಿ ವಿಮಾನ ನಿಲ್ದಾಣದ ನಡುವೆ ಹೊಸದಾಗಿ ವೈಮಾನಿಕ ಸೇವೆ ಆರಂಭವಾಗಿರುವುದು ಆ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಪರ್ಕಕ್ಕೆ ಉತ್ತೇಜನ ನೀಡುತ್ತವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರ ಟ್ವೀಟ್ ಉಲ್ಲೇಖಿಸಿ ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಕೊಂಕಣ ಪ್ರದೇಶದ ಅದ್ಭುತ ಜನರಿಗೆ ಇಂದು ವಿಶೇಷ ದಿನವಾಗಿದೆ ಮತ್ತು ಇದು ಖಂಡಿತವಾಗಿಯೂ ಸಂಪರ್ಕ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಲಿದೆ.”

 


***



(Release ID: 1762719) Visitor Counter : 173