ಪ್ರಧಾನ ಮಂತ್ರಿಯವರ ಕಛೇರಿ

ಹೆಸರಾಂತ ನರರೋಗ ತಜ್ಞ ಡಾ. ಅಶೋಕ್ ಪನಗರಿಯಾ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 11 JUN 2021 6:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆಸರಾಂತ ನರರೋಗ ತಜ್ಞ ಡಾ. ಅಶೋಕ್ ಪನಗರಿಯಾ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. 
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು, "ಡಾ. ಅಶೋಕ್ ಪನಗರಿಯಾ ಅವರು ಅತ್ಯುತ್ತಮ ನರರೋಗ ತಜ್ಞರಾಗಿ ಗುರುತಿಸಿಕೊಂಡಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಅವರ ಮೇಲ್ಪಂಕ್ತಿಯ ಕಾರ್ಯಗಳು ಪೀಳಿಗೆಗಳ ವೈದ್ಯರು ಮತ್ತು ಸಂಶೋಧಕರಿಗೆ ಪ್ರಯೋಜನವಾಗುತ್ತದೆ. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ."

 

***
 



(Release ID: 1726352) Visitor Counter : 142