ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಶ್ರೀ ಹರಿಚಂದ್ ಠಾಕೂರ್  ಜಯಂತಿ ಅಂಗವಾಗಿ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ

Posted On: 09 APR 2021 8:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಶ್ರೀ ಹರಿಚಂದ್ ಠಾಕೂರ್ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದರು.

ಶ್ರೀ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿಶ್ರೀ ಶ್ರೀ ಹರಿಚಂದ್ ಠಾಕೂರ್ ಅವರ ಜಯಂತಿ ಅಂಗವಾಗಿ ಅವರಿಗೆ ನಮನಗಳು. ಅವರ ಜೀವನ ಮತ್ತು ಆದರ್ಶಗಳು ಹಲವು ಜನರಿಗೆ ಈಗಲೂ ಶಕ್ತಿ ನೀಡುತ್ತಲೇ ಇವೆ. ಅವರು ಶಿಕ್ಷಣ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯವನ್ನು ನೀಡಿದ್ದರು. ಅವರ ಮೌಲ್ಯಗಳು ಮತುವ ಸಮುದಾಯದ ರೀತಿ ಮತ್ತು ಸಹಾನುಭೂತಿ ಸ್ವರೂಪದಲ್ಲಿ ಪ್ರತಿಬಿಂಬಿಸುತ್ತವೆ’’ ಎಂದು ಹೇಳಿದ್ದಾರೆ.

 

ಅಲ್ಲದೆ, ಪ್ರಧಾನಮಂತ್ರಿ ಅವರು ಇತ್ತೀಚೆಗೆ ಒರಾಕಂಡಿಯಲ್ಲಿನ ಠಾಕೂರ್ ಬರಿಗೆ ಭೇಟಿ ನೀಡಿದಾಗ ಮಾಡಿದ ಭಾಷಣವನ್ನು ಹಂಚಿಕೊಂಡಿದ್ದಾರೆ.

ಕಲವೇ ವಾರಗಳ ಹಿಂದೆ ನಾನು ಓರಾಕಾಂಡಿಯ ಠಾಕೂರ್ ಬರಿಯಲ್ಲಿದ್ದೆ. ಅವಿಸ್ಮರಣೀಯ ಕ್ಷಣಗಳನ್ನು ನಾನು ಸದಾ ನೆನಪು ಮಾಡಿಕೊಳ್ಳುತ್ತೇನೆ. ಓರಾಕಾಂಡಿಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಹಂಚಿಕೊಳ್ಳುತ್ತಿದ್ದೇನೆ’’ಎಂದು ಹೇಳಿದ್ದಾರೆ.

***



(Release ID: 1711107) Visitor Counter : 148