ಪ್ರಧಾನ ಮಂತ್ರಿಯವರ ಕಛೇರಿ
ರಕಬ್ ಗಂಜ್ ಗುರುದ್ವಾರಕ್ಕೆ ಪ್ರಧಾನಮಂತ್ರಿ ಭೇಟಿ; ಗುರು ತೇಜ್ ಬಹದ್ದೂರ್ ಗೆ ಗೌರವ ನಮನ ಸಲ್ಲಿಕೆ
ಪ್ರಕಟಣಾ ದಿನಾಂಕ:
20 DEC 2020 10:12AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನವದೆಹಲಿಯ ರಕಬ್ ಗಂಜ್ ಗುರುದ್ವಾರಕ್ಕೆ ಭೇಟಿ ನೀಡಿ, ಗುರು ತೇಜ್ ಬಹದ್ದೂರ್ ಅವರ ಶ್ರೇಷ್ಠ ತ್ಯಾಗಕ್ಕಾಗಿ ಅವರಿಗೆ ಗೌರವ ನಮನ ಸಲ್ಲಿಸಿದರು.
“ಇಂದು ಬೆಳಗ್ಗೆ ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರ ಪಾರ್ಥಿವ ಶರೀರದ ಸಮಾಧಿ ಸ್ಥಳ ಐತಿಹಾಸಿಕ ರಕಬ್ ಗಂಜ್ ಸಾಹಿಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದೆ, ನನಗೆ ಆಶೀರ್ವಚನದ ಅನುಭವವಾಯಿತು. ವಿಶ್ವದ ಕೋಟ್ಯಾಂತರ ಜನರಂತೆ ನಾನು ಕೂಡ ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರ ದಯೆಯಿಂದ ಸ್ಫೂರ್ತಿ ದೊರಕಿತು.
ನಮ್ಮ ಸರ್ಕಾರದ ಅವಧಿಯಲ್ಲಿ ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರ 400ನೇ ಪ್ರಕಾಶ ಪರ್ವದ ವಿಶೇಷ ಆಚರಣೆಯನ್ನು ಮಾಡುತ್ತಿರುವುದು ಗುರು ಸಾಹಿಬ್ ಅವರ ವಿಶೇಷ ಕೃಪೆಯಾಗಿದೆ.
ಐತಿಹಾಸಿಕ ರೀತಿಯಲ್ಲಿ ಈ ಸಂದರ್ಭದಲ್ಲಿ ಆಶೀರ್ವಚನ ಪಡೆಯೋಣ ಮತ್ತು ಗುರು ಶ್ರೀ ತೇಜ್ ಬಹದ್ದೂರ್ ಜಿ ಅವರ ಆದರ್ಶಗಳನ್ನು ಆಚರಿಸೋಣ.” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1682301)
ವಿಸಿಟರ್ ಕೌಂಟರ್ : 239
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam