ಪ್ರಧಾನ ಮಂತ್ರಿಯವರ ಕಛೇರಿ

ರಾಜಸ್ಥಾನದ ಸಚಿವ ಮಾಸ್ಟರ್ ಭನ್ವರ್ ಲಾಲ್ ಮೇಘವಾಲ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 16 NOV 2020 8:02PM by PIB Bengaluru

ರಾಜಸ್ಥಾನದ ಸಂಪುಟ ಸಚಿವರಾದ ಮಾಸ್ಟರ್ ಭನ್ವರ್ ಲಾಲ್ ಮೇಘವಾಲ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.‌

ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ರಾಜಸ್ಥಾನದ ಸಂಪುಟ ಸಚಿವರಾದ ಮಾಸ್ಟರ್ ಭನ್ವರ್ ಲಾಲ್ ಮೇಘವಾಲ್ ಜಿ ಅವರ ನಿಧನದಿಂದ ದುಖಃವಾಗಿದೆ. ರಾಜಸ್ಥಾನಕ್ಕೆ ಸೇವೆ ಸಲ್ಲಿಸಲು ಅತೀವ ಆಸಕ್ತಿ ಹೊಂದಿದ್ದ ಹಿರಿಯ ನಾಯಕರಾಗಿದ್ದರು. ಈ ದುಃಖದ ಸಂದರ್ಭದಲ್ಲಿ, ಅವರ ಕುಟುಂಬದವರಿಗೆ ಮತ್ತು ಬೆಂಬಲಿಗರಿಗೆ ನಮ್ಮ ಸಂತಾಪಗಳು’’ ಎಂದು ಹೇಳಿದ್ದಾರೆ.

***



(Release ID: 1673435) Visitor Counter : 173