ಪ್ರಧಾನ ಮಂತ್ರಿಯವರ ಕಛೇರಿ

ಆಚಾರ್ಯ ಶ್ರೀ ಪುರುತ್ತೋಮ್  ಪ್ರಿಯದಾಸ್ ಜಿ ಸ್ವಾಮಿಶ್ರೀ ಮಹಾರಾಜ್ ನಿಧನಕ್ಕೆ ಪ್ರಧಾನಿ‌‌ ಸಂತಾಪ

Posted On: 16 JUL 2020 10:51AM by PIB Bengaluru

ಆಚಾರ್ಯ ಶ್ರೀ ಪುರುತ್ತೋಮ್  ಪ್ರಿಯದಾಸ್ ಜಿ ಸ್ವಾಮಿಶ್ರೀ ಮಹಾರಾಜ್ ನಿಧನಕ್ಕೆ ಪ್ರಧಾನಿ‌‌ ಸಂತಾಪ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಆಚಾರ್ಯ ಶ್ರೀ ಪುರುತ್ತೋಮ್ ಪ್ರಿಯದಾಸ್ ಜಿ ಸ್ವಾಮಿಶ್ರೀ ಮಹಾರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ಅವರು ತಮ್ಮಟ್ವೀಟ್ ನಲ್ಲಿ " ಆಚಾರ್ಯ ಶ್ರೀ ಪುರುಷೋತ್ತಮ್ ಪ್ರಿಯದಾಸ್ ಜಿ ಸ್ವಾಮೀಜಿ ಮಹಾರಾಜ್ ಅವರು ಸಮಾಜಕ್ಕೆ ನೀಡಿರುವ ಅಮೂಲ್ಯ ಸೇವೆಯನ್ನುನಾವು ಸದಾ ಸ್ಮರಿಸುತ್ತೇವೆ. ಮಾನವರ ಸಂಕಷ್ಟಗಳನ್ನು ನಿರ್ಮೂಲನೆ ಮಾಡಲು ಮತ್ತು ಕಷ್ಟದಲ್ಲಿ ಇರುವವರಿಗೆ ನೆರವಾಗುವ ಮೂಲಕ ಕಠಿಣ ಶ್ರಮಪಟ್ಟಿದ್ದಾರೆ. ಅವರನ್ನು ಭಾರತ ಮಾತ್ರವಲ್ಲ ವಿಶ್ವದಲ್ಲಿ ಅಸಂಖ್ಯಾತ ಜನರು ಸದಾ ಸ್ಮರಿಸುತ್ತಾರೆ " ಎಂದು ಹೇಳಿದ್ದಾರೆ. ‌

"ಆಚಾರ್ಯ ಶ್ರೀ ಪುರುಷೋತ್ತಮ್ ದಾಸ್ ಜಿ ಸ್ವಾಮಿಶ್ರೀ ಮಹಾರಾಜ್ ಅವರಿಗೆ ವಿವೇಕದ ಅನುಗ್ರಹವಿತ್ತು. ಸಮುದಾಯ ಸೇವೆ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಅವರು ಹೆಚ್ಚಿನ ಒತ್ತು ನೀಡಿದ್ದರು, ಕಾರಣಕ್ಕೆ ಅವರನ್ನು ಸದಾ ಸ್ಮರಿಸಲಾಗುವುದು. ಅವರೊಂದಿಗೆ ಹಲವು ಬಾರಿ ನಡೆಸಿದ ಸಮಾಲೋಚನೆ ಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಓಂಶಾಂತಿ" ಎಂದು ತಿಳಿಸಿದ್ದಾರೆ.

***



(Release ID: 1639025) Visitor Counter : 162