ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಅಸಮಾನ್ಯ ಕೊಡುಗೆ ಮತ್ತು ತ್ಯಾಗ ಮಾಡುತ್ತಿರುವ ಕೊರೊನಾ ವಾರಿಯರ್ಸ್ ಗೆ ಗೌರವ ಸಲ್ಲಿಸಿದ ಕೇಂದ್ರ ಗೃಹ ಸಚಿವರು
Posted On:
03 MAY 2020 3:08PM by PIB Bengaluru
ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಅಸಮಾನ್ಯ ಕೊಡುಗೆ ಮತ್ತು ತ್ಯಾಗ ಮಾಡುತ್ತಿರುವ ಕೊರೊನಾ ವಾರಿಯರ್ಸ್ ಗೆ ಗೌರವ ಸಲ್ಲಿಸಿದ ಕೇಂದ್ರ ಗೃಹ ಸಚಿವರು
ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಾ, ಅಸಮಾನ್ಯ ಕೊಡುಗೆ ಮತ್ತು ತ್ಯಾಗ ಮಾಡುತ್ತಿರುವ ಕೊರೊನಾ ಯೋಧರಿಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವ ಶ್ರೀ ಅಮಿತ್ ಷಾ ಗೌರವ ಸಲ್ಲಿಸಿದರು.
ಶ್ರೀ ಅಮಿತ್ ಷಾ ಅವರು ತಮ್ಮ ಟ್ವೀಟ್ ನಲ್ಲಿ “ಕೊರೊನಾ ಯೋಧ ನಾಯಕರಿಗೆ ಭಾರತ ನಮನ ಸಲ್ಲಿಸುತ್ತದೆ. ಮೋದಿ ಸರ್ಕಾರ ಮತ್ತು ಇಡೀ ದೇಶ ನಿಮ್ಮ ಜೊತೆ ನಿಲ್ಲುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾವು ನಮ್ಮ ಮುಂದಿರುವ ಸವಾಲುಗಳನ್ನು, ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವ ಮೂಲಕ ದೇಶವನ್ನು ಕೊರೊನಾ ಮುಕ್ತಗೊಳಿಸಬೇಕಿದೆ ಮತ್ತು ಆಮೂಲಕ ಆರೋಗ್ಯಕರ ಸದೃಢ ಮತ್ತು ಶ್ರೀಮಂತ ಭಾರತವನ್ನು ಸೃಷ್ಟಿಸಿ, ಇಡೀ ಜಗತ್ತಿಗೆ ಮಾದರಿಯಾಗಬೇಕಿದೆ. ಜೈಹಿಂದ್” ಎಂದು ಹೇಳಿದ್ದಾರೆ.
Amit Shah✔@AmitShah
भारत अपने वीर कोरोना योद्धाओं को सलाम करता है। मैं आपको विश्वास दिलाता हूँ कि @narendramodi सरकार और पूरा देश आपके साथ खड़ा है।
देश को कोरोना से मुक्त कर हमें चुनौतियों को अवसर में बदलना है और एक स्वस्थ, समृद्ध व सशक्त भारत बनाकर विश्व में एक उदाहरण प्रस्तुत करना है।
जय हिंद!
45.5K
12:34 PM - May 3, 2020
Twitter Ads info and privacy
8,971 people are talking about this
ಇಂದು ಭಾರತೀಯ ಸೇನಾ ಪಡೆಗಳು ಕೊರೊನಾ ಯೋಧರಿಗೆ ಗೌರವ ಸಲ್ಲಿಸಿದವು. ಗೃಹ ಸಚಿವರು, ಸೇನೆಗಳ ಈ ಕ್ರಮವನ್ನು ಶ್ಲಾಘಿಸಿದ್ದಾರೆ ಮತ್ತು ಅವರು “ದೇಶವನ್ನು ಕೊರೊನಾದಿಂದ ಮುಕ್ತಗೊಳಿಸಲು ಹಗಲು ರಾತ್ರಿ ಶ್ರಮಿಸುತ್ತಿರುವ ವೈದ್ಯರು, ಪೊಲೀಸರು, ಅರೆಮಿಲಿಟರಿ ಪಡೆ ಮತ್ತು ಇತರೆ ಯೋಧರಿಗೆ ಭಾರತೀಯ ಸೇನೆ ಗೌರವ ಸಲ್ಲಿಸಿದ ದೃಶ್ಯಗಳು ನಿಜಕ್ಕೂ ಮನತಟ್ಟಿದವು. ಕೊರೊನಾ ವಿರುದ್ಧ ಹೋರಾಡುತ್ತಿರುವ ಯೋಧರು ತೋರುತ್ತಿರುವ ಶೌರ್ಯ ಖಂಡಿತವಾಗಿಯೂ ಆದರ್ಶಪ್ರಾಯವಾದುದು “ಎಂದು ಹೇಳಿದ್ದಾರೆ.
Amit Shah✔@AmitShah
भारतीय सशस्त्र बलों द्वारा देश को कोरोना से मुक्त करने के लिए दिन रात एक करने वाले डॉक्टरों, पुलिस, अर्धसैनिक बलों व अन्य योद्धाओं का विभिन्न तरीकों से सम्मान के दृश्य दिल को छू लेने वाले हैं।
इन योद्धाओं ने जिस बहादुरी से कोरोना से लड़ाई लड़ी है वह निश्चित रूप से वंदनीय है।
24.6K
12:30 PM - May 3, 2020
Twitter Ads info and privacy
5,148 people are talking about this
ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಇಂದು ಕೊರೊನಾ ಸಾಂಕ್ರಾಮಿಕದ ವಿರುದ್ಧ ಧೈರ್ಯದಿಂದ ಹೋರಾಡುತ್ತಿರುವ ಯೋಧರಿಗೆ ಭಾರತೀಯ ಸಶಸ್ತ್ರ ಪಡೆಗಳು ಪುಷ್ಪನಮನ ಸಲ್ಲಿಸಿದವು. ಈ ಕುರಿತು ಅಮಿತ್ ಷಾ ಅವರು ತಮ್ಮ ಟ್ವೀಟ್ ನಲ್ಲಿ “ಭಾರತ ಕೊರೊನಾ ವಿರುದ್ಧದ ಹೋರಾಟದಲ್ಲಿ ತೋರುತ್ತಿರುವ ಶೌರ್ಯ ನಿಜಕ್ಕೂ ಶ್ಲಾಘನಾರ್ಹ, ಇಂದು ಮೂರು ಬಗೆಯ ಸಶಸ್ತ್ರ ಪಡೆಗಳು, ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಅಪ್ರತಿಮ ಯೋಧರಿಗೆ ಪುಷ್ಪನಮನ ಸಲ್ಲಿಸಿದವು. ಇಂತಹ ಸಂಕಷ್ಟದ ಸಮಯದಲ್ಲಿ ಇಡೀ ದೇಶ ದಿಟ್ಟ ಯೋಧರ ಜೊತೆ ಮತ್ತು ಅವರ ಕುಟುಂಬದ ಜೊತೆ ನಿಲ್ಲುತ್ತದೆ” ಎಂದು ಹೇಳಿದ್ದಾರೆ.
Amit Shah✔@AmitShah
भारत जिस बहादुरी से कोरोना से लड़ रहा है वह सचमुच प्रशंसनीय है।
आज तीनों सेनाओं ने कोरोना संक्रमण से लड़ने वाले बहादुर जवानों को राष्ट्रीय पुलिस स्मारक पर पुष्पांजलि अर्पित की।
इस कठिन समय में पूरा देश अपने वीर जवानों व उनके परिवारों के साथ खड़ा है।
29.6K
12:28 PM - May 3, 2020
Twitter Ads info and privacy
5,239 people are talking about this
***
(Release ID: 1620842)
Visitor Counter : 186
Read this release in:
Punjabi
,
English
,
Urdu
,
Hindi
,
Marathi
,
Manipuri
,
Assamese
,
Bengali
,
Gujarati
,
Odia
,
Tamil
,
Telugu
,
Malayalam