ರೈಲ್ವೇ ಸಚಿವಾಲಯ

2 ದಶಲಕ್ಷ ಉಚಿತ ಊಟ ವಿತರಿಸಿರುವ ಭಾರತೀಯ ರೈಲ್ವೆ

Posted On: 20 APR 2020 3:11PM by PIB Bengaluru

2 ದಶಲಕ್ಷ ಉಚಿತ ಊಟ ವಿತರಿಸಿರುವ ಭಾರತೀಯ ರೈಲ್ವೆ

ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ದೇಶಾದ್ಯಂತ ಸುಮಾರು 300 ಸ್ಥಳಗಳಲ್ಲಿ ಊಟ ವಿತರಣೆ

ಭಾರತೀಯ ರೈಲ್ವೆಯ ಸಂಸ್ಥೆಗಳು ಒಗ್ಗೂಡಿ ಬಿಸಿಯೂಟವನ್ನು ಒದಗಿಸಿ ಪ್ರತಿದಿನ ಸಾವಿರಾರು ಜನರಿಗೆ ಭರವಸೆಯ ಬೆಳಕಾಗಿವೆ

 

ಕೋವಿಡ್-19 ಕಾರಣದಿಂದಾಗಿ ರಾಷ್ಟ್ರೀಯ ಲಾಕ್‌ಡೌನ್ ಸಮಯದಲ್ಲಿ ಭಾರತೀಯ ರೈಲ್ವೆಯು ಉಚಿತ ಬಿಸಿಯೂಟದ ವಿತರಣೆಯು ಒಟ್ಟು 20.5 ಲಕ್ಷಕ್ಕೂ ಹೆಚ್ಚಾಗಿದ್ದು, ಇಂದು ಎರಡು ದಶಲಕ್ಷವನ್ನು ದಾಟಿದೆ.

ಜಾಗತಿಕ ಸಾಂಕ್ರಾಮಿಕವು ಹಿಂದೆಂದೂ ಕಾಣದಂತಹ ಪರಿಸ್ಥಿತಿಗಳನ್ನು ಸೃಷ್ಟಿಸಿದೆ, ಹೆಚ್ಚಿನ ಸಂಖ್ಯೆಯ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಈ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ನಿಂದ ಹೆಚ್ಚು ಹಾನಿಗೊಳಗಾದವರು ಎಲ್ಲಿಯೂ ಹೋಗಲಾಗದೆ ಸಿಕ್ಕಿಬಿದ್ದ ಜನರು, ದೈನಂದಿನ ಕೂಲಿ ಕಾರ್ಮಿಕರು, ವಲಸಿಗರು, ಮಕ್ಕಳು, ಕೂಲಿಗಳು, ಮನೆಯಿಲ್ಲದವರು, ಬಡವರು ಮತ್ತು ಇವರಲ್ಲಿ ಹೆಚ್ಚಿನವರು ಒಂದೆಡೆ ಖಾಯಂ ಆಗಿ ಇರದ ಜನರು.

ಕೋವಿಡ್-19ರ ಕಾರಣದಿಂದಾಗಿ ಬೀಗ ಹಾಕಿದ ನಂತರ ಅಗತ್ಯವಿರುವ ಜನರಿಗೆ ಬಿಸಿಯೂಟವನ್ನು ಒದಗಿಸಲು ಹಲವಾರು ರೈಲ್ವೆ ಸಂಸ್ಥೆಗಳ ಭಾರತೀಯ ರೈಲ್ವೆ ಸಿಬ್ಬಂದಿ 28 ಮಾರ್ಚ್ 2020ರಿಂದ ದಣಿವರಿವೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ರೈಲ್ವೆಯ ಬೃಹತ್ ಬಿಸಿಯೂಟವನ್ನು ಕಾಗದದ ತಟ್ಟೆಗಳೊಂದಿಗೆ ಊಟಕ್ಕೆ ಮತ್ತು ಐಆರ್‌ಸಿಟಿಸಿ ಅಡಿಗೆಮನೆಗಳು, ಆರ್‌ಪಿಎಫ್ ಸಂಪನ್ಮೂಲಗಳು ಮತ್ತು ಎನ್‌ಜಿಒಗಳ ಕೊಡುಗೆಗಳ ಮೂಲಕ ಭೋಜನಕ್ಕೆ ಆಹಾರ ಪ್ಯಾಕೆಟ್‌ಗಳನ್ನು ಒದಗಿಸುತ್ತಿದೆ. ಅಗತ್ಯವಿರುವವರಿಗೆ ಆಹಾರವನ್ನು ತಲುಪಿಸುವಾಗ, ಸಾಮಾಜಿಕ ಅಂತರ ಮತ್ತು ನೈರ್ಮಲ್ಯಕ್ಕೆ ಗಮನ ಕೊಡಲಾಗುತ್ತಿದೆ.

ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗತ್ಯವಿರುವ ಜನರ ಆಹಾರ ಅಗತ್ಯತೆಗಳನ್ನು ಪೂರೈಸಲು ನಿಲ್ದಾಣದ ಸುತ್ತಮುತ್ತಲೂ ಸಹ ಆರ್‌ಪಿಎಫ್, ಜಿಆರ್‌ಪಿ, ವಲಯಗಳ ವಾಣಿಜ್ಯ ಇಲಾಖೆಗಳು, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತ ಮತ್ತು ಎನ್‌ಜಿಒಗಳ ಸಹಾಯದಿಂದ ಆಹಾರ ವಿತರಣೆ ನಡೆಯುತ್ತಿದೆ.

ನವದೆಹಲಿ, ಬೆಂಗಳೂರು, ಹುಬ್ಬಳ್ಳಿ, ಮುಂಬೈ ಸೆಂಟ್ರಲ್, ಅಹಮದಾಬಾದ್, ಭೂಸಾವಲ್, ಹೌರಾ, ಪಾಟ್ನಾ, ಗಯಾ, ರಾಂಚಿ, ಕತಿಹಾರ್, ದೀನ್ ದಯಾಳ್ ಉಪಾಧ್ಯಾಯ ನಗರ, ಬಾಲಸೋರ್, ವಿಜಯವಾಡ, ಖುರ್ಡಾ, ಕಾಟ್ಪಾಡಿ, ತಿರುಚಿರಾಪಲ್ಲಿ, ಧನಬಾದ್, ಗುವಾಹಟಿ, ಸಮಸ್ತಿಪುರ, ಪ್ರಯಾಗರಾಜ್, ಇಟಾರ್ಸಿ, ವಿಶಾಖಪಟ್ಟಣಂ, ಚೆಂಗಲ್ ಪಟ್ಟು, ಪುಣೆ, ಹಾಜಿಪುರ, ರಾಯ್‌ಪುರ ಮತ್ತು ಟಾಟಾನಗರ ಉತ್ತರ, ಪಶ್ಚಿಮ, ಪೂರ್ವ, ದಕ್ಷಿಣ ಮತ್ತು ದಕ್ಷಿಣ ಮಧ್ಯದಂತಹ ವಿವಿಧ ವಲಯಗಳಲ್ಲಿ ಹರಡಿರುವ ಐಆರ್ಸಿಟಿಸಿ ಅಡಿಗೆಮನೆಗಳ ಸಕ್ರಿಯ ಸಹಕಾರದೊಂದಿಗೆ 20.5.ಲಕ್ಷಕ್ಕಿಂತ ಹೆಚ್ದು ಬಿಸಯೂಟವನ್ನು ಇಲ್ಲಿಯವರೆಗೆ, ಏಪ್ರಿಲ್ 20, 2020ರವರೆಗೆ ವಿತರಿಸಲಾಗಿದೆ.

ಈ ಪೈಕಿ ಸುಮಾರು 11.6 ಲಕ್ಷ ಬಿಸಯೂಟವನ್ನು ಐಆರ್‌ಸಿಟಿಸಿ ಒದಗಿಸಿದೆ, ಸುಮಾರು 3.6 ಲಕ್ಷ ಊಟವನ್ನು ಆರ್‌ಪಿಎಫ್ ತನ್ನದೇ ಆದ ಸಂಪನ್ಮೂಲಗಳಿಂದ ಒದಗಿಸಿದೆ, ಸುಮಾರು 1.5 ಲಕ್ಷ ಊಟವನ್ನು ವಾಣಿಜ್ಯ ಮತ್ತು ರೈಲ್ವೆಯ ಇತರ ಇಲಾಖೆಗಳು ಒದಗಿಸಿವೆ ಮತ್ತು ರೈಲ್ವೆ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳಿಂದ.ಸುಮಾರು 3.8 ಲಕ್ಷ ಊಟವನ್ನು ನೀಡಲಾಗಿದೆ

ಐಆರ್ ಸಿಟಿಸಿ, ಇತರ ರೈಲ್ವೆ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ತಮ್ಮದೇ ಆದ ಅಡಿಗೆಮನೆಗಳಿಂದ ತಯಾರಿಸಿದ ಆಹಾರವನ್ನು ಅಗತ್ಯವಿರುವ ಜನರಿಗೆ ವಿತರಿಸುವಲ್ಲಿ ರೈಲ್ವೆ ಸಂರಕ್ಷಣಾ ಪಡೆಯು ಪ್ರಮುಖ ಪಾತ್ರ ವಹಿಸಿದೆ. 28.03.2020 ರಂದು 74 ಸ್ಥಳಗಳಲ್ಲಿ 5419 ನಿರ್ಗತಿಕರಿಗೆ ಆಹಾರ ವಿತರಣೆಯಿಂದ ಪ್ರಾರಂಭಿಸಿ, ಈ ಸಂಖ್ಯೆ ಪ್ರತಿದಿನವೂ ಹೆಚ್ಚಾಗಿದೆ. ಪ್ರಸ್ತುತ ದೇಶಾದ್ಯಂತ ಸುಮಾರು 300 ಸ್ಥಳಗಳಲ್ಲಿ ಪ್ರತಿದಿನ ಸರಾಸರಿ 50000 ಜನರಿಗೆ ಆರ್‌ಪಿಎಫ್ ಊಟ ನೀಡುತ್ತಿದೆ.

ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡುವ ಸಲುವಾಗಿ, ಭಾರತೀಯ ರೈಲ್ವೆ ಸಂಸ್ಥೆಗಳು ಬಿಸಿಯೂಟವನ್ನು ನೀಡಲು ಮತ್ತು ಪ್ರತಿದಿನ ಸಾವಿರಾರು ಜನರಿಗೆ ಭರವಸೆ ಬೆಳಕಾಗಲು ಒಂದಾಗಿವೆ.

***



(Release ID: 1616516) Visitor Counter : 255