ಪ್ರಧಾನ ಮಂತ್ರಿಯವರ ಕಛೇರಿ

ಸತೀಶ್ ಗುಜ್ರಾಲ್ ನಿಧನಕ್ಕೆ ಪ್ರಧಾನಿ ಸಂತಾಪ

ಪ್ರಕಟಣಾ ದಿನಾಂಕ: 27 MAR 2020 12:52PM by PIB Bengaluru

ಸತೀಶ್ ಗುಜ್ರಾಲ್ ನಿಧನಕ್ಕೆ ಪ್ರಧಾನಿ ಸಂತಾಪ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸತೀಶ್ ಗುಜ್ರಾಲ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
“ಸತೀಶ್ ಗುಜ್ರಾಲ್ ಚತುರರು ಮತ್ತು ಅವರದು ಬಹುಮುಖಿ ವ್ಯಕ್ತಿತ್ವ. ತಮ್ಮ ಕ್ರಿಯಾಶೀಲತೆ ಮತ್ತು ಬದ್ಧತೆಯಿಂದಾಗಿ ಅವರು ದುರ್ದೈವದಿಂದ ಹೊರಬಂದವರು. ಅವರ ಜ್ಞಾನದ ಹಸಿವು ಅವರನ್ನು ದೇಶದ ಉದ್ದಗಲಕ್ಕೆ ಕರೆದೊಯ್ಯಿತು, ಆದರೂ ಅವರು ತಮ್ಮ ಮೂಲಬೇರುಗಳೊಂದಿಗೆ ಬೆರೆತಿದ್ದರು. ಅವರ ನಿಧನ ದುಃಖ ತಂದಿದೆ’’ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.


(ಪ್ರಕಟಣೆ ಐ.ಡಿ.: 1608526) ವಿಸಿಟರ್ ಕೌಂಟರ್ : 165
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , English , Urdu , हिन्दी , Marathi , Bengali , Assamese , Punjabi , Gujarati , Odia , Tamil , Malayalam