ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ಆದ್ಯತೆಗಳೊಂದಿಗೆ ಹೊಂದಿಕೊಂಡಿರುವ ಭಾರತದ ಕೃತಕ ಬುದ್ಧಿಮತ್ತೆ ವಿಧಾನದ ಕುರಿತಾಗಿ ಲೇಖನವೊಂದನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 23 MAR 2026 1:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಬರೆದ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಇದು ಹೊಸ ಕೃತಕ ಬುದ್ಧಿಮತ್ತೆ-ಚಾಲಿತ ತಾಂತ್ರಿಕ ಯುಗದಲ್ಲಿ ಭಾರತದಲ್ಲಿ ವಿಕಸನಗೊಳ್ಳುತ್ತಿರುವ ನಾವೀನ್ಯತೆಯ ಕಥೆಯನ್ನು ಎತ್ತಿ ಹಿಡಿಯುತ್ತದೆ.

ಕೃತಕ ಬುದ್ಧಿಮತ್ತೆಯೊಂದಿಗೆ ಭಾರತದ ವಿಧಾನವು ಜಾಗತಿಕ ಪಾಲುದಾರಿಕೆಯೊಂದಿಗೆ ಪ್ರಬಲ ಸಂಬಂಧ ಹೊಂದಿದ್ದು, ರಾಷ್ಟ್ರೀಯ ಆದ್ಯತೆಗಳೊಂದಿಗೆ ದೃಢವಾಗಿ ಅದು ಹೊಂದಿಕೊಂಡಿದೆ ಎಂದು ಈ ಲೇಖನವು ಒತ್ತಿಹೇಳುತ್ತದೆ. ಭಾರತದ ಕೃತಕ ಬುದ್ಧಿಮತ್ತೆ ಕಾರ್ಯತಂತ್ರವು ಸ್ಪಷ್ಟವಾಗಿದ್ದು, ಅದು ಮಾನವ ಕೇಂದ್ರಿತ, ಅಂತರ್ಗತ, ಪರಸ್ಪರ ಕಾರ್ಯನಿರ್ವಹಿಸಬಲ್ಲದು ಮತ್ತು ಸಾರ್ವಭೌಮ ಸಾಮರ್ಥ್ಯದ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ ಎಂಬುದನ್ನು ಇದು ಮತ್ತಷ್ಟು ಎತ್ತಿ ಹಿಡಿಯುತ್ತದೆ.

ಪ್ರಧಾನಮಂತ್ರಿ ಅವರು Xನಲ್ಲಿ:

"ಕೇಂದ್ರ ಸಚಿವರಾದ ಶ್ರೀ @dpradhanbjp ಅವರು ಹೊಸ AI-ಚಾಲಿತ ತಾಂತ್ರಿಕ ಯುಗದಲ್ಲಿ, ಭಾರತದ ನಾವೀನ್ಯತೆಯ ಕಥೆಯು ಜಾಗತಿಕ ಪಾಲುದಾರಿಕೆಗಳೊಂದಿಗೆ ಪ್ರಬಲ ಸಂಬಂಧ ಹೊಂದಿದೆ ಎಂದು ಬರೆದಿದ್ದಾರೆ.

ರಾಷ್ಟ್ರೀಯ ಆದ್ಯತೆಗಳೊಂದಿಗೆ ಹೊಂದಿಕೊಂಡಂತೆ, AI ಗೆ ಭಾರತದ ವಿಧಾನವು ಸ್ಪಷ್ಟವಾಗಿದೆ - ಮಾನವ ಕೇಂದ್ರಿತ, ಅಂತರ್ಗತ, ಪರಸ್ಪರ ಕಾರ್ಯಸಾಧ್ಯ ಮತ್ತು ಸಾಮರ್ಥ್ಯದಲ್ಲಿ ಅದು ಸಾರ್ವಭೌಮವಾಗಿದೆ ಎಂದು ಅವರು ಒತ್ತಿ ಹೇಳುತ್ತಾರೆ." 

 

*****


(ಪ್ರಕಟಣೆ ಐ.ಡಿ.: 2243862) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Bengali , Manipuri , Punjabi , Gujarati , Telugu