ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೆಹಲಿ ಸ್ಫೋಟದ ಘಟನೆಯ ನಂತರ ಭೂತಾನ್ ನ ಒಗ್ಗಟ್ಟಿನ ಸಂದೇಶಕ್ಕೆ ಧನ್ಯವಾದ ತಿಳಿಸಿದ ಪ್ರಧಾನಮಂತ್ರಿ 

प्रविष्टि तिथि: 11 NOV 2025 3:01PM by PIB Bengaluru

ಭೂತಾನಿನ ನಾಲ್ಕನೇ ರಾಜರ 70ನೇ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾರತದೊಂದಿಗೆ ಒಗ್ಗಟ್ಟಿನ ಭಾವನೆಯನ್ನು ವ್ಯಕ್ತಪಡಿಸಿದ ಭೂತಾನ್ ಜನರಿಗೆ ಪ್ರಧಾನಮಂತ್ರ ಶ್ರೀ ನರೇಂದ್ರ ಮೋದಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ದೆಹಲಿಯಲ್ಲಿ ನಡೆದ ದುರಂತ ಘಟನೆಯ ನಂತರ, ಭೂತಾನ್ ನ ಜನರು ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗಾಗಿ ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದರು. "ಜನರ ಪ್ರೀತಿ, ಸಹಾನುಭೂತಿಯನ್ನು ಎಂದಿಗೂ ಮರೆಯುವುದಿಲ್ಲ" ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ಏಕತೆಯ ಕಾರ್ಯವನ್ನು ಶ್ಲಾಘಿಸಿದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಸಂದೇಶ ನೀಡಿದ್ದಾರೆ:

"ಭೂತಾನ್ ನ ನಾಲ್ಕನೇ ರಾಜರ 70ನೇ ಜನ್ಮದಿನ ಸಂದರ್ಭದಲ್ಲಿ ದೆಹಲಿ ಸ್ಫೋಟದ ಕುರಿತು ಭೂತಾನಿನ ಜನರು ವಿಶಿಷ್ಟ ಪ್ರಾರ್ಥನೆಯ ಮೂಲಕ ಭಾರತದ ಜನರೊಂದಿಗೆ ಒಗ್ಗಟ್ಟು ತೋರಿದ್ದಾರೆ. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ."

 

*****

 


(रिलीज़ आईडी: 2188811) आगंतुक पटल : 36
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam