ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಂದ ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ನಡೆದ ಎಸ್‍.ಸಿ.ಒ ಸಿರಿಧಾನ್ಯಗಳ ಆಹಾರ ಉತ್ಸವಕ್ಕೆ ಪ್ರಶಂಸೆ

Posted On: 16 APR 2023 10:02AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ನಡೆದ ಎಸ್‌ಸಿಒ (SCO) ಸಿರಿಧಾನ್ಯಗಳ ಆಹಾರ ಉತ್ಸವಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸಂಸದ ಶ್ರೀ ಮನೋಜ್ ಕೋಟಕ್ ಅವರು ಉತ್ಸವದ ಬಗ್ಗೆ ಮತ್ತು ಜುಣಜಾಳಗಾಂವ್‌ನ ಜೋಳ, ನಾಗಪುರದ ಸಜ್ಜೆ, ಔರಂಗಾಬಾದ್‌ನ ರಾಗಿಗಳು ಎಸ್‌ಸಿಒ ಸಿರಿಧಾನ್ಯಗಳ ಆಹಾರ ಉತ್ಸವದ ರೂಪದಲ್ಲಿ ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಅನ್ನು ತಲುಪಿರುವ ಬಗ್ಗೆ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:

"ಮುಂಬೈನಲ್ಲಿ ಶ್ರೀ ಅನ್ನವನ್ನು (ಸಿರಿಧಾನ್ಯಗಳನ್ನು) ಜನಪ್ರಿಯಗೊಳಿಸಲು ಮಾಡಿದ ಶ್ಲಾಘನೀಯ ಪ್ರಯತ್ನ."

 

*****


(Release ID: 2188332) Visitor Counter : 3