ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಜಯಂತಿಯಂದು ಪ್ರಧಾನಮಂತ್ರಿ ಅವರು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ

ಪ್ರಕಟಣಾ ದಿನಾಂಕ: 23 SEP 2025 5:59PM by PIB Bengaluru

ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಜಯಂತಿಯಂದು ಭಾರತೀಯ ಸಾಹಿತ್ಯ ಮತ್ತು ರಾಷ್ಟ್ರೀಯ ಪ್ರಜ್ಞೆಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರಿಗೆ ಹೃತ್ಪೂರ್ವಕ ಗೌರವ ನಮನ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಹೃತ್ಪೂರ್ವಕ ನಮನಗಳು. ಅವರ ಕವಿತೆಗಳು ಬಿಹಾರ ಮತ್ತು ದೇಶಾದ್ಯಂತ ಜನರಲ್ಲಿ ಆಳವಾದ ದೇಶಭಕ್ತಿಯ ಭಾವನೆಗಳನ್ನು ತುಂಬಿವೆ. ಅವರ ಹಲವು ಸಾಲುಗಳು ಸಾರ್ವಜನಿಕ ಪ್ರಜ್ಞೆಯಲ್ಲಿ ಆಳವಾಗಿ ಬೇರೂರಿವೆ. ಶೌರ್ಯ ಮತ್ತು ಮಾನವೀಯತೆಯಿಂದ ತುಂಬಿರುವ ಅವರ ಶಕ್ತಿಶಾಲಿ ಹಾಗೂ ಕಾಲಾತೀತ ಕೃತಿಗಳು ಪ್ರತಿ ಪೀಳಿಗೆಯೂ ಭಾರತ ಮಾತೆಯ ಸೇವೆಗೆ ಸಮರ್ಪಿತರಾಗಿರಲು ಸದಾ ಸ್ಫೂರ್ತಿ ನೀಡುತ್ತವೆ."

 

****


(ಪ್ರಕಟಣೆ ಐ.ಡಿ.: 2170455) ವಿಸಿಟರ್ ಕೌಂಟರ್ : 47