ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಈಶಾನ್ಯ ರಾಜ್ಯಗಳು ದೇಶದ ಮುಂಚೂಣಿಯಾಗಿ ಹೇಗೆ ಬೆಳೆಯುತ್ತಿದೆ ಎಂಬುದನ್ನು ವಿವರಿಸುವ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ

Posted On: 12 SEP 2025 1:16PM by PIB Bengaluru

ಈಶಾನ್ಯ ರಾಜ್ಯಗಳು ದೇಶದಲ್ಲಿ ಮುಂಚೂಣಿಯಲ್ಲಿ ಹೇಗೆ ಬೆಳೆಯುತ್ತಿದೆ ಎಂಬುದನ್ನು ವಿವರಿಸುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ. 

ಬೈರಾಬಿ-ಸೈರಾಂಗ್ ರೈಲ್ವೆ ಮಾರ್ಗದ ಉದ್ಘಾಟನೆಯು ಐತಿಹಾಸಿಕ ಮೈಲಿಗಲ್ಲನ್ನು ಹೇಗೆ ಗುರುತಿಸುತ್ತದೆ, ಮಿಜೋರಾಂನ್ನು ರಾಷ್ಟ್ರೀಯ ರೈಲ್ವೆ ಜಾಲಕ್ಕೆ ಸಂಪರ್ಕಿಸುತ್ತದೆ, ವ್ಯಾಪಾರ, ಸಂಪರ್ಕ ಮತ್ತು ಅವಕಾಶಗಳ ಹೊಸ ಬಾಗಿಲುಗಳನ್ನು ತೆರೆಯುತ್ತದೆ ಎಂಬುದರ ಕುರಿತು ಕೇಂದ್ರ ರೈಲ್ವೆ ಖಾತೆ ಸಚಿವರಾದ ಶ್ರೀ ಅಶ್ವಿನ್ ವೈಷ್ಣವ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಅವರು ಹಂಚಿಕೊಂಡಿದ್ದಾರೆ. 

ಪ್ರಧಾನಮಂತ್ರಿ ಕಾರ್ಯಾಲಯ ಇದನ್ನು ಎಕ್ಸ್ ಖಾತೆಯಲ್ಲಿ;

ಈಶಾನ್ಯ ರಾಜ್ಯಗಳು ಇನ್ನು ಮುಂದೆ ಪ್ರಗತಿಗಾಗಿ ಕಾಯುತ್ತಿರುವ ಗಡಿ ಪ್ರದೇಶಗಳಾಗಿ ಉಳಿದಿಲ್ಲ, ಬದಲಾಗಿ ಭಾರತದ ಬೆಳವಣಿಗೆಯ ಕಥೆಯ ಕೇಂದ್ರಬಿಂದುವಾಗಿವೆ. ಬೈರಾಬಿ-ಸೈರಾಂಗ್ ರೈಲು ಮಾರ್ಗದ ಉದ್ಘಾಟನೆಯು ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸುತ್ತದೆ, ಮಿಜೋರಾಂನ್ನು ರಾಷ್ಟ್ರೀಯ ರೈಲ್ವೆ ಜಾಲಕ್ಕೆ ಸಂಪರ್ಕಿಸುತ್ತವೆ. ವ್ಯಾಪಾರ, ಸಂಪರ್ಕ ಮತ್ತು ಅವಕಾಶದ ಹೊಸ ಬಾಗಿಲುಗಳನ್ನು ತೆರೆಯುತ್ತವೆ ಎಂದು ಹೇಳಿದ್ದಾರೆ. 

ಕೇಂದ್ರ ಸಚಿವರಾದ ಶ್ರೀ @AshwiniVaishnaw ಅವರ ಈ ಲೇಖನವನ್ನು ಓದಿ, ಇದು ಈಶಾನ್ಯ ರಾಜ್ಯಗಳು ದೇಶದ ಮುಂಚೂಣಿ ಸ್ಥಾನದಲ್ಲಿ ಹೇಗೆ ಬರುತ್ತಿವೆ ಎಂಬುದನ್ನು ವಿವರಿಸುತ್ತದೆ!" ಎಂದು ಬರೆದಿದ್ದಾರೆ.

 

 

*****


(Release ID: 2165971) Visitor Counter : 2