ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಚಂದ್ರಶೇಖರ್ ಆಜಾದ್ ಅವರ ಜನ್ಮದಿನದ ನಿಮಿತ್ತ ಅವರಿಗೆ ಗೌರವ ಸಮರ್ಪಿಸಿದರು

Posted On: 23 JUL 2025 9:43AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಚಂದ್ರಶೇಖರ್ ಆಜಾದ್ ಅವರ ಜನ್ಮದಿನದ ನಿಮಿತ್ತ ಅವರಿಗೆ ಗೌರವ ಸಮರ್ಪಿಸಿದರು. “ಭಾರತದ ಸ್ವಾತಂತ್ರ್ಯ ಪಯಣದಲ್ಲಿ ಅವರ ಪಾತ್ರ ಬಹಳ ಮೌಲ್ಯಯುತವಾಗಿದೆ ಹಾಗೂ ನ್ಯಾಯದ ಪರ ಧೈರ್ಯ ಮತ್ತು ದೃಢ ನಂಬಿಕೆಯಿಂದ ನಿಲ್ಲಲು ಯುವಜನರಿಗೆ ಪ್ರೇರೇಪಿಸುತ್ತದೆ” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. 

ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೇಳಿದ್ದಾರೆ: 

“ಚಂದ್ರಶೇಖರ್ ಆಜಾದ್ ಅವರ ಜನ್ಮದಿನದ ನಿಮಿತ್ತ ಅವರಿಗೆ ಗೌರವ ನಮನಗಳು. ಅಪ್ರತಿಮ ಶೌರ್ಯ ಹಾಗೂ ಸ್ಥೈರ್ಯಕ್ಕೆ ಅವರು ನಿದರ್ಶಕರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಪಯಣದಲ್ಲಿ ಅವರ ಪಾತ್ರ ಬಹಳ ಮೌಲ್ಯಯುತವಾಗಿದೆ ಹಾಗೂ ನ್ಯಾಯದ ಪರ ಧೈರ್ಯ ಮತ್ತು ದೃಢ ನಂಬಿಕೆಯಿಂದ ನಿಲ್ಲಲು ಯುವಜನರಿಗೆ ಪ್ರೇರೇಪಿಸುತ್ತದೆ.”

 

 

*****

 


(Release ID: 2147143)