ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೆಹಲಿಯಲ್ಲಿ ಪ್ರಧಾನಮಂತ್ರಿಯವರ ಅಧಕ್ಷತೆಯಲ್ಲಿ ಎನ್ ಡಿ ಎ ಮುಖ್ಯಮಂತ್ರಿಗಳ ಸಮಾವೇಶ 

Posted On: 25 MAY 2025 6:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಇಂದು ನಡೆದ ಎನ್ ಡಿ ಎ ಮುಖ್ಯಮಂತ್ರಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಅಭಿವೃದ್ಧಿ ಪಥಗಳಿಗೆ ವೇಗ ನೀಡಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಿದ ಅವರು, ಡಬಲ್ ಎಂಜಿನ್ ಸರ್ಕಾರದ ಪ್ರಯೋಜನಗಳು ಜನರಿಗೆ ಪರಿಣಾಮಕಾರಿ ರೀತಿಯಲ್ಲಿ ತಲುಪುವುದನ್ನು ಖಾತರಿಸಿಕೊಳ್ಳಬೇಕು ಎಂದರು.

ಎಕ್ಸ್ ನ ಥ್ರೆಡ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ: 

"ದೆಹಲಿಯಲ್ಲಿ ನಡೆದ ಎನ್ ಡಿ ಎ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಭಾಗಿಯಾಗಿದ್ದೆ. ವಿವಿಧ ವಿಷಯಗಳ ಕುರಿತು ನಾವು ವ್ಯಾಪಕ ಚರ್ಚೆ ನಡೆಸಿದೆವು. ಜಲ ಸಂರಕ್ಷಣೆ, ಕುಂದುಕೊರತೆ ಪರಿಹಾರ, ಆಡಳಿತಾತ್ಮಕ ಚೌಕಟ್ಟುಗಳ ಬಲವರ್ಧನೆ, ಶಿಕ್ಷಣ, ಮಹಿಳಾ ಸಬಲೀಕರಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಅತ್ಯುತ್ತಮ ಅಭ್ಯಾಸಗಳನ್ನು ವಿವಿಧ ರಾಜ್ಯಗಳು ಪ್ರದರ್ಶಿಸಿವೆ. ಈ ಅನುಭವಗಳು ಅಮೋಘವಾಗಿವೆ."

"ನಮ್ಮ ಅಭಿವೃದ್ಧಿ ಪಥಗಳಿಗೆ ವೇಗ ನೀಡುವ ಮತ್ತು ಡಬಲ್-ಎಂಜಿನ್ ಸರ್ಕಾರದ ಪ್ರಯೋಜನಗಳು ಜನರಿಗೆ ಪರಿಣಾಮಕಾರಿ ರೀತಿಯಲ್ಲಿ ತಲುಪುವುದನ್ನು ಖಾತರಿಪಡಿಸಿಕೊಳ್ಳುವ ಅಗತ್ಯದ ಬಗ್ಗೆ ನಾನು ಒತ್ತಿ ಹೇಳಿದೆ. ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ರಕ್ಷಣೆ, ಯುವ ಸಬಲೀಕರಣ, ಕೃಷಿ, ತಂತ್ರಜ್ಞಾನ ಮತ್ತಿತರ ಪ್ರಮುಖ ಕ್ಷೇತ್ರಗಳಲ್ಲಿ ಸಂಘಟಿತ ಶಕ್ತಿ ಕಂಡುಕೊಳ್ಳುವ ಬಗ್ಗೆ ಮಾತನಾಡಿದೆ."

 

 

*****


(Release ID: 2131226)