ಪ್ರಧಾನ ಮಂತ್ರಿಯವರ ಕಛೇರಿ
ದೆಹಲಿಯಲ್ಲಿ ಪ್ರಧಾನಮಂತ್ರಿಯವರ ಅಧಕ್ಷತೆಯಲ್ಲಿ ಎನ್ ಡಿ ಎ ಮುಖ್ಯಮಂತ್ರಿಗಳ ಸಮಾವೇಶ
Posted On:
25 MAY 2025 6:37PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಇಂದು ನಡೆದ ಎನ್ ಡಿ ಎ ಮುಖ್ಯಮಂತ್ರಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ನಮ್ಮ ಅಭಿವೃದ್ಧಿ ಪಥಗಳಿಗೆ ವೇಗ ನೀಡಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಿದ ಅವರು, ಡಬಲ್ ಎಂಜಿನ್ ಸರ್ಕಾರದ ಪ್ರಯೋಜನಗಳು ಜನರಿಗೆ ಪರಿಣಾಮಕಾರಿ ರೀತಿಯಲ್ಲಿ ತಲುಪುವುದನ್ನು ಖಾತರಿಸಿಕೊಳ್ಳಬೇಕು ಎಂದರು.
ಎಕ್ಸ್ ನ ಥ್ರೆಡ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:
"ದೆಹಲಿಯಲ್ಲಿ ನಡೆದ ಎನ್ ಡಿ ಎ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಭಾಗಿಯಾಗಿದ್ದೆ. ವಿವಿಧ ವಿಷಯಗಳ ಕುರಿತು ನಾವು ವ್ಯಾಪಕ ಚರ್ಚೆ ನಡೆಸಿದೆವು. ಜಲ ಸಂರಕ್ಷಣೆ, ಕುಂದುಕೊರತೆ ಪರಿಹಾರ, ಆಡಳಿತಾತ್ಮಕ ಚೌಕಟ್ಟುಗಳ ಬಲವರ್ಧನೆ, ಶಿಕ್ಷಣ, ಮಹಿಳಾ ಸಬಲೀಕರಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಅತ್ಯುತ್ತಮ ಅಭ್ಯಾಸಗಳನ್ನು ವಿವಿಧ ರಾಜ್ಯಗಳು ಪ್ರದರ್ಶಿಸಿವೆ. ಈ ಅನುಭವಗಳು ಅಮೋಘವಾಗಿವೆ."
"ನಮ್ಮ ಅಭಿವೃದ್ಧಿ ಪಥಗಳಿಗೆ ವೇಗ ನೀಡುವ ಮತ್ತು ಡಬಲ್-ಎಂಜಿನ್ ಸರ್ಕಾರದ ಪ್ರಯೋಜನಗಳು ಜನರಿಗೆ ಪರಿಣಾಮಕಾರಿ ರೀತಿಯಲ್ಲಿ ತಲುಪುವುದನ್ನು ಖಾತರಿಪಡಿಸಿಕೊಳ್ಳುವ ಅಗತ್ಯದ ಬಗ್ಗೆ ನಾನು ಒತ್ತಿ ಹೇಳಿದೆ. ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ರಕ್ಷಣೆ, ಯುವ ಸಬಲೀಕರಣ, ಕೃಷಿ, ತಂತ್ರಜ್ಞಾನ ಮತ್ತಿತರ ಪ್ರಮುಖ ಕ್ಷೇತ್ರಗಳಲ್ಲಿ ಸಂಘಟಿತ ಶಕ್ತಿ ಕಂಡುಕೊಳ್ಳುವ ಬಗ್ಗೆ ಮಾತನಾಡಿದೆ."
*****
(Release ID: 2131226)
Read this release in:
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam