ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಬಿಎಸ್ಎಫ್ ಸೇರ್ಪಡೆ ಸಮಾರಂಭ ಮತ್ತು ರುಸ್ತುಂಜಿ ಸ್ಮಾರಕ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು
ಆಪರೇಷನ್ ಸಿಂಧೂರ್ ಪಾಕಿಸ್ತಾನ ಮತ್ತು ಭಯೋತ್ಪಾದನೆಯ ನಡುವಿನ ಸಂಬಂಧವನ್ನು ಇಡೀ ವಿಶ್ವದ ಮುಂದೆ ಬಹಿರಂಗಪಡಿಸಿದೆ
ಪ್ರಧಾನಿ ನರೇಂದ್ರ ಮೋದಿ ಅವರ ದೃಢ ರಾಜಕೀಯ ಇಚ್ಛಾಶಕ್ತಿ, ಸಶಸ್ತ್ರಗಳ ಪಡೆಗಳ ಅಸಾಧಾರಣ ದಾಳಿ ಸಾಮರ್ಥ್ಯ ಮತ್ತು ಏಜೆನ್ಸಿಗಳು ಒದಗಿಸಿದ ನಿಖರವಾದ ಗುಪ್ತಚರ ಮಾಹಿತಿಯಿಂದಾಗಿ ಆಪರೇಷನ್ ಸಿಂಧೂರ್ ಸಾಧ್ಯವಾಯಿತು
ಆಪರೇಷನ್ ಸಿಂಧೂರ್ ನಮ್ಮ ನೆಲದಲ್ಲಿ ಭಯೋತ್ಪಾದಕ ದಾಳಿಗಳಿಗೆ ಪ್ರತಿಕ್ರಿಯೆಗಳ ಇತಿಹಾಸದಲ್ಲಿಅತ್ಯಂತ ನಿಖರವಾದ ಮತ್ತು ಯಶಸ್ವಿ ಕಾರ್ಯಾಚರಣೆಯಾಗಿದ್ದು, ಅದರ ಎಲ್ಲಾ ಉದ್ದೇಶಗಳನ್ನು ಪೂರೈಸಿತು
ಆಪರೇಷನ್ ಸಿಂಧೂರ್ನಲ್ಲಿ ಬಿಎಸ್ಎಫ್ ಮತ್ತು ಸೇನೆಯು ವಿಶ್ವದ ಮುಂದೆ ಶೌರ್ಯದ ಸಾಟಿಯಿಲ್ಲದ ಉದಾಹರಣೆಯನ್ನು ನೀಡಿತು
ಭಾರತೀಯ ನಾಗರಿಕರು ಮತ್ತು ಮಿಲಿಟರಿ ಸ್ಥಾಪನೆಗಳ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಪಾಕಿಸ್ತಾನದ ವಾಯುನೆಲೆಗಳನ್ನು ನಾಶಪಡಿಸಿತು, ಇದು ನಮ್ಮ ಮಾರಕ ದಾಳಿ ಸಾಮರ್ಥ್ಯವನ್ನು ಪ್ರದರ್ಶಿಸಿತು
ಇಂದು, ಇಡೀ ಜಗತ್ತು ಭಾರತೀಯ ಸೇನಾ ಸೈನಿಕರ ಶೌರ್ಯ, ಆಕ್ರಮಣಕಾರಿ ಶಕ್ತಿ ಮತ್ತು ಸಂಯಮವನ್ನು ಶ್ಲಾಘಿಸುತ್ತಿದೆ
ಬಿಎಸ್ಎಫ್ ಗಡಿಯಲ್ಲಿಇರುವವರೆಗೂ ಪಾಕಿಸ್ತಾನ ಸೇನೆ ಒಂದು ಇಂಚು ಕೂಡ ಮುಂದೆ ಸಾಗಲು ಸಾಧ್ಯವಿಲ್ಲ
1971ರ ಯುದ್ಧದಲ್ಲಿ ಬಿಎಸ್ಎಫ್ನ ಶೌರ್ಯ ಮತ್ತು ಕೊಡುಗೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ ಮತ್ತು ಬಾಂಗ್ಲಾದೇಶವೂ ಅದನ್ನು ಮರೆಯಬಾರದು
Posted On:
23 MAY 2025 4:36PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ನಡೆದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಉದ್ಘಾಟನಾ ಸಮಾರಂಭ ಮತ್ತು ರುಸ್ತುಂಜಿ ಸ್ಮಾರಕ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕರು ಮತ್ತು ಗಡಿ ಭದ್ರತಾ ಪಡೆಯ ಮಹಾನಿರ್ದೇಶಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, 1965 ರಿಂದ 2025 ರವರೆಗೆ ಬಿಎಸ್ಎಫ್ನ ಪ್ರಯಾಣವು ಸವಾಲಿನ ಸಂದರ್ಭಗಳಲ್ಲಿ ಸೀಮಿತ ಸಂಪನ್ಮೂಲಗಳೊಂದಿಗೆ ಪ್ರಾರಂಭವಾದ ಸಂಸ್ಥೆ ವಿಶ್ವದ ಅತಿದೊಡ್ಡ ಮತ್ತು ಪ್ರತಿಷ್ಠಿತ ಗಡಿ ಭದ್ರತಾ ಪಡೆಯಾಗಿ ಹೇಗೆ ಹೊರಹೊಮ್ಮಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು. ಜಾಗತಿಕ ಶ್ರೇಷ್ಠತೆಯನ್ನು ಸಾಧಿಸಲು ದೇಶಭಕ್ತಿಯು ಎಲ್ಲಾ ತೊಂದರೆಗಳನ್ನು ಹೇಗೆ ನಿವಾರಿಸಬಹುದು ಎಂಬುದಕ್ಕೆ ಬಿಎಸ್ಎಫ್ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಪ್ರತಿಕೂಲ ಪರಿಸ್ಥಿತಿಗಳಲ್ಲಿ ಬಿಎಸ್ಎಫ್ ಸಿಬ್ಬಂದಿ ತೋರಿಸಿದ ದೇಶಭಕ್ತಿ ಮತ್ತು ಸಮರ್ಪಣೆ - ಅದು 45 ಡಿಗ್ರಿಗಿಂತ ಹೆಚ್ಚಿನ ತಾಪಮಾನ ಅಥವಾ ಅತ್ಯಂತ ಕಡಿಮೆ, ದಟ್ಟವಾದ ಕಾಡುಗಳು, ಒರಟಾದ ಪರ್ವತಗಳು ಅಥವಾ ಕರಾವಳಿ ಪ್ರದೇಶಗಳು - ಬಿಎಸ್ಎಫ್ಗೆ ರಕ್ಷಣೆಯ ಮೊದಲ ಸಾಲಿನ ಗೌರವವನ್ನು ಗಳಿಸಿದೆ ಎಂದು ಅವರು ಒತ್ತಿ ಹೇಳಿದರು. ಪ್ರತಿ ಗಡಿಯನ್ನು ಭದ್ರಪಡಿಸಲು ಒಂದು ಪಡೆಯನ್ನು ನಿಯೋಜಿಸಲು ದೇಶದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಬಿಎಸ್ಎಫ್ ಸಾಮರ್ಥ್ಯದ ಆಧಾರದ ಮೇಲೆ, ಅತ್ಯಂತ ಸವಾಲಿನ ಎರಡು ಗಡಿಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ರಕ್ಷಿಸುವ ಜವಾಬ್ದಾರಿಯನ್ನು ಅದಕ್ಕೆ ವಹಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.

ಬಿಎಸ್ಎಫ್ಅನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀ ಕೆ.ಎಫ್. ರುಸ್ತುಂಜಿ ಅವರ ಕೊಡುಗೆಗಳನ್ನು ಸ್ಮರಿಸಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, 1965ರ ಯುದ್ಧದ ನಂತರ, ಶಾಂತಿಯ ಸಮಯದಲ್ಲಿಯೂ ಗಡಿಗಳನ್ನು ಭದ್ರಪಡಿಸಬಲ್ಲ ಪಡೆಯ ಅಗತ್ಯವನ್ನು ಪ್ರತಿಪಾದಿಸಲಾಯಿತು, ಇದು ಬಿಎಸ್ಎಫ್ ಪ್ರಾರಂಭಕ್ಕೆ ಕಾರಣವಾಯಿತು, ಅಂತೆಯೇ ರುಸ್ತುಂಜಿ ಅದರ ಮೊದಲ ಮಹಾನಿರ್ದೇಶಕರಾದರು ಎಂದು ಹೇಳಿದರು. ಭಾರತದ ಮೇಲೆ ಹೇರಲಾದ 1971ರ ಯುದ್ಧದಲ್ಲಿ ಬಿಎಸ್ಎಫ್ ಸಿಬ್ಬಂದಿಯ ಶೌರ್ಯ ಮತ್ತು ಕೊಡುಗೆಗಳನ್ನು ರಾಷ್ಟ್ರವು ಎಂದಿಗೂ ಮರೆಯುವುದಿಲ್ಲ, ಬಾಂಗ್ಲಾದೇಶ ಎಂದಿಗೂ ಮರೆಯಬಾರದು ಎಂದು ಇದೇ ವೇಳೆ ಅವರು ಹೇಳಿದರು. ಬಾಂಗ್ಲಾದೇಶದ ರಚನೆಯಲ್ಲಿ ಬಿಎಸ್ಎಫ್ ಮಹತ್ವದ ಪಾತ್ರ ವಹಿಸಿದೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವಲ್ಲಿ ಸಶಸ್ತ್ರ ಪಡೆಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಮೂಲಕ ಅನುಕರಣೀಯ ಶೌರ್ಯದ ಮಾನದಂಡವನ್ನು ಸ್ಥಾಪಿಸಿದೆ ಎಂದು ಶ್ರೀ ಅಮಿತ್ ಶಾ ಒತ್ತಿ ಹೇಳಿದರು.

ಗಡಿ ಭದ್ರತೆಯ ಜತೆಗೆ, ಆಂತರಿಕ ಭದ್ರತೆ, ವಿಪತ್ತು ನಿರ್ವಹಣೆ ಮತ್ತು ಭಯೋತ್ಪಾದನಾ ವಿರೋಧ ಕಾರ್ಯಾಚರಣೆಗಳಲ್ಲಿ ಬಿಎಸ್ಎಫ್ ಸಕ್ರಿಯವಾಗಿ ಭಾಗವಹಿಸಿದೆ ಮತ್ತು ಫಲಿತಾಂಶಗಳನ್ನು ಸಾಧಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಚುನಾವಣೆಗಳು, ಕೋವಿಡ್ -19 ಸಾಂಕ್ರಾಮಿಕ ರೋಗ, ಕ್ರೀಡಾ ಕಾರ್ಯಕ್ರಮಗಳು ಅಥವಾ ಭಯೋತ್ಪಾದನೆ ಮತ್ತು ನಕ್ಸಲಿಸಂ ವಿರುದ್ಧ ಹೋರಾಡುವುದು, ಬಿಎಸ್ಎಫ್ ನಿಯೋಜಿಸಿದ ಪ್ರತಿಯೊಂದು ರಂಗದಲ್ಲೂತನ್ನ ಕರ್ತವ್ಯಗಳನ್ನು ಅಸಾಧಾರಣವಾಗಿ ನಿರ್ವಹಿಸಿದೆ ಎಂದು ಅವರು ಹೇಳಿದರು.

ಬಿಎಸ್ಎಫ್ ಮತ್ತು ಸಶಸ್ತ್ರ ಪಡೆಗಳು ಇಡೀ ವಿಶ್ವದ ಮುಂದೆ ಶೌರ್ಯದ ಸಾಟಿಯಿಲ್ಲದ ಉದಾಹರಣೆಯನ್ನು ಇಟ್ಟಿರುವ ಸಮಯದಲ್ಲಿಇಂದಿನ ಉದ್ಘಾಟನಾ ಸಮಾರಂಭ ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಆಪರೇಷನ್ ಸಿಂರ್ಧೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಢ ರಾಜಕೀಯ ಇಚ್ಛಾಶಕ್ತಿ, ಏಜೆನ್ಸಿಗಳಿಂದ ನಿಖರವಾದ ಗುಪ್ತಚರ ಒಳಹರಿವು ಮತ್ತು ನಮ್ಮ ಪಡೆಗಳ ಮಾರಕ ಸಾಮರ್ಥ್ಯದ ಗಮನಾರ್ಹ ಪ್ರದರ್ಶನವಾಗಿದೆ ಎಂದು ಅವರು ಹೇಳಿದರು. ದಶಕಗಳಿಂದ, ನಮ್ಮ ದೇಶವು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸಿದೆ ಮತ್ತು ವರ್ಷಗಳಲ್ಲಿ, ಪಾಕಿಸ್ತಾನವು ಅನೇಕ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ, ಆದರೆ ಅವುಗಳಿಗೆ ಎಂದಿಗೂ ಸಮರ್ಪಕವಾಗಿ ಪ್ರತಿಕ್ರಿಯಿಸಲಾಗಿಲ್ಲ ಎಂದು ಅವರು ಹೇಳಿದರು.
ಶ್ರೀ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾದಾಗ, ನಮ್ಮ ಸೈನಿಕರ ಮೇಲೆ ಮೊದಲ ಪ್ರಮುಖ ಭಯೋತ್ಪಾದಕ ದಾಳಿ ಉರಿಯಲ್ಲಿ ನಡೆಯಿತು ಮತ್ತು ಮೊದಲ ಬಾರಿಗೆ ನಾವು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇವೆ, ಭಯೋತ್ಪಾದಕರ ಅಡಗುತಾಣಗಳಿಗೆ ನುಸುಳಿದ್ದೇವೆ ಮತ್ತು ಸೂಕ್ತ ಪ್ರತಿಕ್ರಿಯೆ ನೀಡಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಪ್ರತಿಕ್ರಿಯೆಯು ಭಯೋತ್ಪಾದಕ ಚಟುವಟಿಕೆಗಳನ್ನು ಕೊನೆಗೊಳಿಸುತ್ತದೆ ಎಂದು ನಾವು ನಂಬಿದ್ದೆವು ಆದರೆ ಅದು ಮಾಡಲಿಲ್ಲ, ಮತ್ತು ಪುಲ್ವಾಮಾದಲ್ಲಿ ನಮ್ಮ ಸೈನಿಕರ ಮೇಲೆ ಮತ್ತೊಂದು ಭಯೋತ್ಪಾದಕ ದಾಳಿ ನಡೆಯಿತು ಎಂದು ಅವರು ಹೇಳಿದರು. ಈ ಬಾರಿ, ಭಾರತೀಯ ಪಡೆಗಳು ವೈಮಾನಿಕ ದಾಳಿಯ ಮೂಲಕ ನಿರ್ಣಾಯಕವಾಗಿ ಪ್ರತಿಕ್ರಿಯಿಸಿ ಮತ್ತೊಮ್ಮೆ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದವು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಮುಗ್ಧ ಪ್ರವಾಸಿಗರನ್ನು ಅವರ ಧರ್ಮವನ್ನು ಪ್ರಶ್ನಿಸಿದ ನಂತರ ಅವರ ಹೆಂಡತಿಯರು ಮತ್ತು ಕುಟುಂಬಗಳ ಮುಂದೆ ಕ್ರೂರವಾಗಿ ಕೊಂದ ಪಹಲ್ಗಾಮ್ನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ. ಆ ಸಮಯದಲ್ಲಿ, ಈ ಭಯೋತ್ಪಾದಕ ದಾಳಿಗೆ ಸೂಕ್ತ ಉತ್ತರವನ್ನು ಪಡೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು ಮತ್ತು ಆಪರೇಷನ್ ಸಿಂಧೂರ್ ಸೂಕ್ತ ಪ್ರತಿಕ್ರಿಯೆಯಾಗಿದೆ ಎಂದು ಅವರು ಹೇಳಿದರು. ಇಂದು, ಇಡೀ ಜಗತ್ತು ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಮಾರಕ ಸಾಮರ್ಥ್ಯಗಳನ್ನು ಶ್ಲಾಘಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು.
ವಿಶ್ವದ ಅನೇಕ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳಿಗೆ ಪ್ರತಿಕ್ರಿಯೆಗಳನ್ನು ನೀಡಲಾಗಿದ್ದರೂ ಭಾರತ ನೀಡಿದ ಪ್ರತಿಕ್ರಿಯೆ ಅನನ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪಹಲ್ಗಾಮ್ನಲ್ಲಿ ನಡೆದ ದಾಳಿಯ ನಂತರ, ನಾವು ಆಪರೇಷನ್ ಸಿಂಧೂರ್ಅನ್ನು ಪ್ರಾರಂಭಿಸಿದ್ದೇವೆ ಮತ್ತು ಕೆಲವೇ ನಿಮಿಷಗಳಲ್ಲಿಒಂಬತ್ತು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ್ದೇವೆ, ಅವುಗಳಲ್ಲಿಎರಡು ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಚೇರಿಗಳಾಗಿವೆ ಎಂದು ಅವರು ತಿಳಿಸಿದರು. ಭಾರತೀಯ ಪಡೆಗಳು ಆರಂಭದಲ್ಲಿಪಾಕಿಸ್ತಾನದ ಮಿಲಿಟರಿ ಸಂಸ್ಥೆಗಳ ಮೇಲೆ ಅಥವಾ ಅವರ ವಾಯುನೆಲೆಗಳ ಮೇಲೆ ದಾಳಿ ನಡೆಸಲಿಲ್ಲ, ಆದರೆ ನಮ್ಮ ನೆಲದಲ್ಲಿಘೋರ ಅಪರಾಧಗಳಿಗೆ ಕಾರಣವಾದ ಭಯೋತ್ಪಾದಕ ಅಡಗುತಾಣಗಳನ್ನು ಮಾತ್ರ ನೆಲಸಮಗೊಳಿಸಿವೆ ಎಂದು ಅವರು ಒತ್ತಿ ಹೇಳಿದರು. ನಮ್ಮ ದಾಳಿ ಕೇವಲ ಭಯೋತ್ಪಾದಕರ ವಿರುದ್ಧವಾಗಿರುವುದರಿಂದ ಇದು ಸಾಕು ಎಂದು ನಾವು ನಂಬಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಯೋತ್ಪಾದಕರ ಮೇಲಿನ ದಾಳಿಯನ್ನು ತನ್ನ ಮೇಲಿನ ದಾಳಿ ಎಂದು ಪರಿಗಣಿಸುವ ಮೂಲಕ ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂದು ಸಾಬೀತುಪಡಿಸಿದೆ ಮತ್ತು ನಮ್ಮ ದೇಶದ ನಾಗರಿಕರು ಮತ್ತು ಮಿಲಿಟರಿ ಸಂಸ್ಥೆಗಳನ್ನು ಗುರಿಯಾಗಿಸಲು ಧೈರ್ಯ ಮಾಡಿದೆ ಎಂದು ಅವರು ಹೇಳಿದರು. ಭಾರತದ ವಾಯು ರಕ್ಷ ಣಾ ವ್ಯವಸ್ಥೆ ಗಮನಾರ್ಹವಾಗಿದೆ ಮತ್ತು ಪಾಕಿಸ್ತಾನದ ದಾಳಿಗಳು ನಮಗೆ ಹಾನಿ ಮಾಡುವುದಿಲ್ಲಎಂದು ಗೃಹ ಸಚಿವರು ಹೇಳಿದರು.

ಪಾಕಿಸ್ತಾನ ಸೇನೆಯು ನಮ್ಮ ನಾಗರಿಕರು ಮತ್ತು ಮಿಲಿಟರಿ ಸಂಸ್ಥೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ ಭಾರತೀಯ ಸಶಸ್ತ್ರ ಪಡೆಗಳು ತಮ್ಮ ವಾಯುನೆಲೆಯ ಮೇಲೆ ದಾಳಿ ಮಾಡುವ ಮೂಲಕ ನಿರ್ಣಾಯಕವಾಗಿ ಪ್ರತಿಕ್ರಿಯಿಸಿದವು. ನಮ್ಮ ದಿಟ್ಟ ಸಾಮರ್ಥ್ಯಗಳನ್ನು ಪ್ರದರ್ಶಿಸಿದವು ಮತ್ತು ಅವರ ವಾಯು ರಕ್ಷ ಣಾ ವ್ಯವಸ್ಥೆಯನ್ನು ನಿಷ್ಪರಿಣಾಮಕಾರಿ ಎಂದು ಸಾಬೀತುಪಡಿಸಿದವು ಎಂದು ಶ್ರೀ ಅಮಿತ್ ಶಾ ಹೇಳಿದರು. ಆ ಸಮಯದಲ್ಲಿಯೂ ನಾವು ಪಾಕಿಸ್ತಾನದ ಯಾವುದೇ ನಾಗರಿಕ ಸ್ಥಳಗಳ ಮೇಲೆ ದಾಳಿ ನಡೆಸಿಲ್ಲಎಂದು ಅವರು ಇದೇ ವೇಳೆ ಹೇಳಿದರು. ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನ ಮತ್ತು ಭಯೋತ್ಪಾದನೆ ನಡುವಿನ ಬಾಂಧವ್ಯವನ್ನು ಇಡೀ ಜಗತ್ತಿಗೆ ಬಹಿರಂಗಪಡಿಸಲಾಗಿದೆ ಎಂದು ಅವರು ಹೇಳಿದರು. ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆದಾಗ, ಪಾಕಿಸ್ತಾನ ಸೇನೆಯು ಪ್ರತಿಕ್ರಿಯಿಸಿತು ಮತ್ತು ಕೊಲ್ಲಲ್ಪಟ್ಟ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿಪಾಕಿಸ್ತಾನದ ಹಿರಿಯ ಸೇನಾಧಿಕಾರಿಗಳು ಭಾಗವಹಿಸುವುದನ್ನು ಜಗತ್ತು ನೋಡಿದೆ ಎಂದು ಅವರು ಉಲ್ಲೇಖಿಸಿದರು.
ಪಾಕಿಸ್ತಾನ ಸದಾ ನಿರಾಕರಿಸಿದ್ದನ್ನು ಆಪರೇಷನ್ ಸಿಂಧೂರ್ ನಂತರ ಈಗ ಜಗತ್ತಿಗೆ ಸಂಪೂರ್ಣವಾಗಿ ಬಹಿರಂಗಪಡಿಸಲಾಗಿದೆ ಎಂದು ಹೇಳಿದ ಕೇಂದ್ರ ಗೃಹ ಸಚಿವರು, ಭಾರತದಲ್ಲಿಭಯೋತ್ಪಾದನೆ ಪಾಕಿಸ್ತಾನ ಪ್ರಾಯೋಜಿತವಾಗಿದೆ ಎಂದು ದೃಢಪಡಿಸಿದರು. ನಮ್ಮ ನೆಲದಲ್ಲಿಭಯೋತ್ಪಾದಕ ದಾಳಿಗಳನ್ನು ಎದುರಿಸುವ ಇತಿಹಾಸದಲ್ಲಿಆಪರೇಷನ್ ಸಿಂಧೂರ್ ಅತ್ಯಂತ ನಿಖರ ಮತ್ತು ಯಶಸ್ವಿ ಪ್ರತಿಕ್ರಿಯೆಯಾಗಿದೆ ಎಂದು ಅವರು ಹೇಳಿದರು. ಇಂದು, ವಿಶ್ವದಾದ್ಯಂತದ ತಜ್ಞರು ನಮ್ಮ ಸೈನಿಕರ ಶೌರ್ಯ, ಮಾರಕ ಸಾಮರ್ಥ್ಯ ಮತ್ತು ಸಂಯಮವನ್ನು ಶ್ಲಾಘಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ಸೇನೆ ಮತ್ತು ಬಿಎಸ್ಎಫ್ ಗಡಿ ಭದ್ರತಾ ಪಡೆಗಳ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗಡಿಯಲ್ಲಿ ಗುಂಡುಗಳೊಂದಿಗೆ ಗುಂಡುಗಳಿಗೆ ಪ್ರತಿಕ್ರಿಯಿಸುವ ಮೂಲಕ, ಬಿಎಸ್ಎಫ್ ಇರುವವರೆಗೂ ಪಾಕಿಸ್ತಾನ ಸೇನೆಯು ಒಂದು ಇಂಚು ಸಹ ಮುಂದುವರಿಯಲು ಸಾಧ್ಯವಿಲ್ಲಎಂದು ತೋರಿಸಿದೆ. ರಕ್ಷ ಣಾ ಉತ್ಪಾದನೆಯಲ್ಲಿಸ್ವಾವಲಂಬಿ ಭಾರತದ ಯಶಸ್ಸನ್ನು ಆಪರೇಷನ್ ಸಿಂಧೂರ್ ಪರಿಣಾಮಕಾರಿಯಾಗಿ ಪ್ರದರ್ಶಿಸಿದೆ ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಈ ಅಭಿಯಾನವು ಮತ್ತಷ್ಟು ವೇಗವನ್ನು ಪಡೆಯುತ್ತದೆ ಮತ್ತು ನಾವು ಹೆಚ್ಚಿನ ಸ್ವಾವಲಂಬನೆಯತ್ತ ಸಾಗುತ್ತೇವೆ ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಬಿಎಸ್ಎಫ್ ಸಿಬ್ಬಂದಿಗಳಾದ ಮೊಹಮ್ಮದ್ ಇಮ್ತಿಯಾಜ್ ಅಹ್ಮದ್ ಮತ್ತು ದೀಪಕ್ ಚಿಂಗಾಖಮ್ ಅವರು ತಾಯ್ನಾಡನ್ನು ರಕ್ಷಿಸುವಾಗ ಸರ್ವೋಚ್ಚ ತ್ಯಾಗ ಮಾಡಿದ್ದಾರೆ ಮತ್ತು ಅವರ ಹೆಸರುಗಳು ರಾಷ್ಟ್ರದ ರಕ್ಷಣಾ ಇತಿಹಾಸದಲ್ಲಿಎಂದೆಂದಿಗೂ ಸುವರ್ಣಾಕ್ಷ ರಗಳಲ್ಲಿಅಚ್ಚಳಿಯದೆ ಉಳಿಯುತ್ತವೆ ಎಂದು ಅವರು ಹೇಳಿದರು.
ಭಾರತದ 15,000 ಕಿಲೋಮೀಟರ್ ಉದ್ದದ ಮತ್ತು ಅತ್ಯಂತ ಸವಾಲಿನ ಗಡಿಯನ್ನು ಬಿಎಸ್ಎಫ್ ಭದ್ರಪಡಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕಳೆದ ಐದು ವರ್ಷಗಳಲ್ಲಿ, ಬಿಎಸ್ಎಫ್ ಹಲವಾರು ತಾಂತ್ರಿಕ ಪರಿಹಾರಗಳನ್ನು ಕಂಡುಹಿಡಿಯುವ ಪ್ರಯತ್ನಗಳನ್ನು ಮಾಡಿದೆ ಎಂದು ಅವರು ಉಲ್ಲೇಖಿಸಿದರು. ಬೇಲಿ ಹಾಕಲು ಸಾಧ್ಯವಾಗದ ಪ್ರದೇಶಗಳಲ್ಲಿ, ಗಡಿ ಭದ್ರತೆಗಾಗಿ ಬಿಎಸ್ಎಫ್ ಪ್ರಾಯೋಗಿಕವಾಗಿ ಜಾಗತಿಕ ತಾಂತ್ರಿಕ ಪರಿಹಾರಗಳನ್ನು ಜಾರಿಗೆ ತಂದಿದೆ. ಬಿಎಸ್ಎಫ್ ಸಿಬ್ಬಂದಿ ಹಲವಾರು ಆಂತರಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಭೌಗೋಳಿಕವಾಗಿ ಸವಾಲಿನ ಗಡಿಗಳನ್ನು ಭದ್ರಪಡಿಸುವ ಈ ತಾಂತ್ರಿಕ ಪ್ರಗತಿಗಳು ಮುಂಬರುವ ದಿನಗಳಲ್ಲಿದೇಶವನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರ್ ಮೂಲಕ ಬಿಎಸ್ಎಫ್ ಮತ್ತು ಸೇನೆಯು ವಿಶ್ವದ ಮುಂದೆ ಶೌರ್ಯದ ಸಾಟಿಯಿಲ್ಲದ ಉದಾಹರಣೆಯನ್ನು ನೀಡಿದೆ ಎಂದು ಅವರು ಹೇಳಿದರು.
1965 ರ ಡಿಸೆಂರ್ಬ 1ರಂದು ಪ್ರಾರಂಭವಾದಾಗಿನಿಂದ, 2.75 ಲಕ್ಷ ಸಿಬ್ಬಂದಿಯೊಂದಿಗೆ ಬಿಎಸ್ಎಫ್ ನೀರು, ಭೂಮಿ ಮತ್ತು ವಾಯು ಭದ್ರತಾ ಘಟಕಗಳನ್ನು ರಚಿಸುವ ಮೂಲಕ ವಿಶ್ವದಾದ್ಯಂತದ ಎಲ್ಲಾ ಗಡಿ ಭದ್ರತಾ ಪಡೆಗಳಲ್ಲಿಅಗ್ರಗಣ್ಯವಾಗಿ ತನ್ನನ್ನು ಸ್ಥಾಪಿಸಿ, ತನ್ನ ಪಾತ್ರವನ್ನು ಅಸಾಧಾರಣವಾಗಿ ನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು. ಬಿಎಸ್ಎಫ್ ಸಿಬ್ಬಂದಿಗೆ 1 ಪದ್ಮ ವಿಭೂಷಣ, 2 ಪದ್ಮಭೂಷಣ, 7 ಪದ್ಮಶ್ರಿ, 1 ಮಹಾವೀರ್ ಚಕ್ರ, 6 ಕೀರ್ತಿ ಚಕ್ರಗಳು, 13 ಶೌರ್ಯ ಚಕ್ರಗಳು, 56 ಸೇನಾ ಪದಕಗಳು ಮತ್ತು 1,246 ಶೌರ್ಯಕ್ಕಾಗಿ ಪೊಲೀಸ್ ಪದಕಗಳನ್ನು ನೀಡಲಾಗಿದೆ. ಇಂತಹ ಹಲವಾರು ಪ್ರಶಂಸೆಗಳನ್ನು ಪಡೆಯುವ ಪಡೆಯ ಅಸಾಧಾರಣ ಸಮರ್ಪಣೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕಳೆದ ಐದು ವರ್ಷಗಳಲ್ಲಿ, ಬಿಎಸ್ಎಫ್ ಸುಮಾರು 1.1 ಲಕ್ಷ ಕಿಲೋಗ್ರಾಂಗಳಷ್ಟು ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಮಾದಕವಸ್ತುಗಳ ವಿರುದ್ಧದ ಹೋರಾಟವನ್ನು ಬಲಪಡಿಸಿದೆ ಎಂದು ಅವರು ಹೇಳಿದರು. ಕಳೆದ ಐದು ವರ್ಷಗಳಲ್ಲಿ78 ಕ್ಕೂ ಹೆಚ್ಚು ನಕ್ಸಲರನ್ನು ನಿರ್ಮೂಲನೆ ಮಾಡುವ ಮೂಲಕ, ಬಿಎಸ್ಎಫ್ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಯಶಸ್ಸಿಗೆ ಗಮನಾರ್ಹ ಕೊಡುಗೆ ನೀಡಿದೆ ಎಂದು ಅವರು ಗಮನಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಗೃಹ ಸಚಿವಾಲಯ (ಎಂಎಚ್ಎ) ಮತ್ತು ಇಡೀ ದೇಶವು ಬಿಎಸ್ಎಫ್ ಸಿಬ್ಬಂದಿಯ ಶೌರ್ಯದ ಹಿಂದೆ ದೃಢವಾಗಿ ನಿಂತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ದೇಶವು ಬಿಎಸ್ಎಫ್ ಸಿಬ್ಬಂದಿಯನ್ನು ನಂಬುತ್ತದೆ ಮತ್ತು ಗೌರವಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
*****
(Release ID: 2131218)
Read this release in:
Odia
,
English
,
Urdu
,
Marathi
,
Hindi
,
Assamese
,
Bengali
,
Gujarati
,
Tamil
,
Telugu
,
Malayalam