ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಜನವರಿ 11, ಶನಿವಾರ ನವದೆಹಲಿಯಲ್ಲಿ ನಡೆಯುವ "ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ" ಕುರಿತು ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ವಹಿಸಲಿರುವರು


ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಅದರ ಪರಿಣಾಮದಿಂದಾಗಿ ಹೆಚ್ಚುತ್ತಿರುವ ಕಳವಳವನ್ನು ಪರಿಹರಿಸುವ ಗುರಿಯನ್ನು ಈ ಸಮ್ಮೇಳನ ಹೊಂದಿದೆ

ಕೇಂದ್ರ ಗೃಹ ಸಚಿವರು ಮಾದಕವಸ್ತು ವಿಲೇವಾರಿ ಪಾಕ್ಷಿಕವನ್ನು ಪ್ರಾರಂಭಿಸಲಿದ್ದಾರೆ, ಎನ್.ಸಿ.ಬಿ.ಯ ಭೋಪಾಲ್ ವಲಯ ಘಟಕದ ಹೊಸ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ ಮತ್ತು ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾನಸ್-2 ಸಹಾಯವಾಣಿಯ ವಿಸ್ತರಣೆಯನ್ನು ಮಾಡಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತ ಸರ್ಕಾರವು ಮಾದಕವಸ್ತು ಕಳ್ಳಸಾಗಣೆ ವಿರುದ್ಧ 'ಶೂನ್ಯ ಸಹಿಷ್ಣುತೆ ನೀತಿ'ಯನ್ನು ಅಳವಡಿಸಿಕೊಂಡಿದೆ

ಈಗಾಗಲೇ ವಶಪಡಿಸಿಕೊಂಡ ಒಟ್ಟು 44,792 ಕೆಜಿ ಮಾದಕವಸ್ತುಗಳನ್ನು ಜನವರಿ 11, 2025 ರಿಂದ ಜನವರಿ 25, 2025 ರವರೆಗೆ ನಡೆಯುವ ಮಾದಕವಸ್ತು ವಿಲೇವಾರಿ ಪಾಕ್ಷಿಕ ಕಾರ್ಯಕ್ರಮದಲ್ಲಿ, ವಿಲೇವಾರಿ ಮಾಡಲಾಗುವುದು

Posted On: 10 JAN 2025 3:43PM by PIB Bengaluru

ಜನವರಿ 11,2025ರ ಶನಿವಾರ ನವದೆಹಲಿಯಲ್ಲಿ "ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ" ಎಂಬ ಪ್ರಾದೇಶಿಕ ಸಮ್ಮೇಳನದ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ವಹಿಸಲಿದ್ದಾರೆ. ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್.ಸಿ.ಬಿ.) ಆಯೋಜಿಸಿರುವ ಈ ಸಮ್ಮೇಳನವು, ಮಾದಕವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಅದರ ಪ್ರಭಾವದ ಕುರಿತು ಹಾಗೂ ಹೆಚ್ಚುತ್ತಿರುವ ಕಳವಳವನ್ನು ಪರಿಹರಿಸುವ ಗುರಿಯನ್ನು ಕೂಡಾ ಹೊಂದಿದೆ. ಈ ಕಾರ್ಯಕ್ರಮದಲ್ಲಿ ಉತ್ತರ ಭಾರತದ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ.

ಈ ಕಾರ್ಯಕ್ರಮದ ಸಂದರ್ಭದಲ್ಲಿ, ಕೇಂದ್ರ ಶ್ರೀ ಅಮಿತ್ ಶಾ ಅವರು “ಮಾದಕವಸ್ತು ವಿಲೇವಾರಿ ಹದಿನೈದು ದಿನ”ಗಳು ಎಂಬ ಕಾರ್ಯಕ್ರಮವನ್ನು ಕೂಡಾ ಉದ್ಘಾಟಿಸಲಿದ್ದಾರೆ. ಎನ್.ಸಿ.ಬಿ. ಯ ಭೋಪಾಲ್ ವಲಯ ಘಟಕದ ಹೊಸ ಕಚೇರಿ ಸಂಕೀರ್ಣವನ್ನು ಸಹ ಉದ್ಘಾಟಿಸಲಿದ್ದಾರೆ ಮತ್ತು ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾನಸ್-2 ಸಹಾಯವಾಣಿಯ ವಿಸ್ತರಣೆಯನ್ನು ಮಾಡಲಿದ್ದಾರೆ. 

ಈ ಸಮ್ಮೇಳನವು ರಾಷ್ಟ್ರೀಯ ಮಾದಕವಸ್ತು ಸಹಾಯವಾಣಿ 'ಮಾನಸ' ಜಾಲತಾಣದಿಂದ ತತ್ಕ್ಷಣದ (ತಕ್ಷಣ / ತತ್ ಕ್ಷಣ  / ನೈಜ-ಸಮಯ) ನೇರ ಮಾಹಿತಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕವಸ್ತು ವಿರೋಧಿ ಕಾರ್ಯಪಡೆ (ಎ.ಎನ್.ಟಿ.ಎಫ್.) ನೊಂದಿಗೆ ಹಂಚಿಕೊಳ್ಳುವುದು, ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಹೋರಾಡುವಲ್ಲಿ ರಾಜ್ಯಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡುವುದು ಮತ್ತು ಮಾದಕವಸ್ತು ಸಮನ್ವಯ ಕಾರ್ಯವಿಧಾನದ (ಎನ್.ಸಿ.ಒ.ಆರ್.ಡಿ) ಪರಿಣಾಮಕಾರಿತ್ವವನ್ನು ನಿರ್ಣಯಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಗಳ (ಎಸ್.ಎಫ್.ಎಸ್.ಎಲ್) ಕಾರ್ಯವನ್ನು ಬಲಪಡಿಸುವುದು ಮತ್ತು ಹೆಚ್ಚಿಸುವುದು, ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಪ್ರಯತ್ನಗಳನ್ನು ಹೆಚ್ಚಿಸಲು ನಿದಾನ್  ಡೇಟಾಬೇಸ್ ಅನ್ನು ಬಳಸುವುದು, ಮಾದಕವಸ್ತು ಮತ್ತು ಮನೋವಿಕೃತ ವಸ್ತುಗಳ ಅಕ್ರಮ ಸಂಚಾರ ತಡೆಗಟ್ಟುವಿಕೆ (ಪಿಟ್-ಎನ್.ಡಿ.ಪಿ.ಎಸ್) ಕಾಯ್ದೆಯ ನಿಬಂಧನೆಗಳನ್ನು ಅನುಷ್ಠಾನಗೊಳಿಸುವುದು, ಮಾದಕವಸ್ತು ಸಂಬಂಧಿತ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ಎನ್.ಡಿ.ಪಿ.ಎಸ್. ನ್ಯಾಯಾಲಯಗಳನ್ನು ಸ್ಥಾಪಿಸುವುದು ಮತ್ತು ಮಾದಕವಸ್ತು ಕಳ್ಳಸಾಗಣೆ ಮತ್ತು ದುರುಪಯೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ಎಲ್ಲಾ ಸಂಸ್ಥೆಗಳ ನಡುವೆ ಸಮಗ್ರ ಸಹಯೋಗವನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಸರ್ಕಾರಿ ವಿಧಾನವನ್ನು ಬೆಳೆಸುವುದು ಸಹ ಇದರಲ್ಲಿ ಸೇರಿದೆ. ನಾಳೆಯಿಂದ (11ನೇ ಜನವರಿ 2025 ರಿಂದ 25 ನೇ ಜನವರಿ 2025 ರವರೆಗೆ) ಪ್ರಾರಂಭವಾಗುವ ಮಾದಕವಸ್ತು ವಿಲೇವಾರಿ ಪಾಕ್ಷಿಕ ಕಾರ್ಯಕ್ರಮದಲ್ಲಿ, ಈಗಾಗಲೇ ವಶಪಡಿಸಿಕೊಂಡ ಒಟ್ಟು 44,792 ಕಿಲೋಗ್ರಾಂಗಳಷ್ಟು ಮಾದಕವಸ್ತುಗಳನ್ನು ವಿಲೇವಾರಿ ಮಾಡಲಾಗುತ್ತದೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ರೂ.2411 ಕೋಟಿ ಗಳು ಎಂದು ಅಂದಾಜಿಸಲಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತ ಸರ್ಕಾರವು ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದೆ. 2047 ರ ವೇಳೆಗೆ ಮಾದಕ ವಸ್ತು ಮುಕ್ತ ಭಾರತವನ್ನು ಸಾಧಿಸಲು ಕೇಂದ್ರ ಗೃಹ ಸಚಿವಾಲಯ ಮೂರು ಹಂತದ ಕಾರ್ಯತಂತ್ರವನ್ನು ಜಾರಿಗೆ ತರುತ್ತಿದೆ. ಇದರಲ್ಲಿ ಸಾಂಸ್ಥಿಕ ಚೌಕಟ್ಟುಗಳನ್ನು ಬಲಪಡಿಸುವುದು, ಮಾದಕ ವಸ್ತು ಸಂಸ್ಥೆಗಳ ನಡುವೆ ಸಮನ್ವಯವನ್ನು ಹೆಚ್ಚಿಸುವುದು ಮತ್ತು ಬೃಹತ್ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುವುದು ಸೇರಿವೆ.

ಸಮ್ಮೇಳನದಲ್ಲಿ ಭಾಗವಹಿಸುವ 08 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು, ಲೆಫ್ಟಿನೆಂಟ್ ಗವರ್ನರ್ ಗಳು, ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸಹ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

 

*****


(Release ID: 2092068)