ಗೃಹ ವ್ಯವಹಾರಗಳ ಸಚಿವಾಲಯ

1947 ರಲ್ಲಿ ವಿಭಜನೆಯ ಕರಾಳತೆ ಅನುಭವಿಸಿದ ಲಕ್ಷಾಂತರ ಜನರಿಗೆ, ದೇಶ ವಿಭಜನೆಯ ಭೀಕರ ಸಂಸ್ಮರಣಾ ದಿನದಂದು ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ನಮ್ಮ ಇತಿಹಾಸದ ಈ ಅತ್ಯಂತ ಭೀಕರ ಅವಧಿಯಲ್ಲಿ ಅಮಾನವೀಯ ನೋವುಗಳನ್ನು ಅನುಭವಿಸಿದ, ಪ್ರಾಣ ಕಳೆದುಕೊಂಡ, ನಿರಾಶ್ರಿತರಾದ ಲಕ್ಷಾಂತರ ಜನರಿಗೆ ವಿಭಜನೆಯ ಭೀಕರ ಸಂಸ್ಮರಣಾ ದಿನದಂದು ನನ್ನ ನಮನಗಳು

ತನ್ನ ಇತಿಹಾಸವನ್ನು ನೆನಪಿಸಿಕೊಳ್ಳುವ ರಾಷ್ಟ್ರ ಮಾತ್ರ ತನ್ನ ಭವಿಷ್ಯವನ್ನು ನಿರ್ಮಿಸಲು ಮತ್ತು ಪ್ರಬಲ ಘಟಕವಾಗಿ ಹೊರಹೊಮ್ಮಲು ಸಾಧ್ಯ

ಈ ದಿನವನ್ನು ಆಚರಿಸುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಒಂದು ನೂತನ ಅಡಿಪಾಯದ ಪ್ರಕ್ರಿಯೆಯಾಗಿದೆ

Posted On: 14 AUG 2024 12:40PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ವಿಭಜನೆಯ ಭಯಾನಕ ನೆನಪಿನ ದಿನದಂದು 1947 ರಲ್ಲಿ ವಿಭಜನೆಯ ಕರಾಳತೆ ಅನುಭವಿಸಿದ ಲಕ್ಷಾಂತರ ಜನರಿಗೆ ನಮನ ಸಲ್ಲಿಸಿದರು.

ತಮ್ಮ ಎಕ್ಸ್ ಖಾತೆಯ ಸಂದೇಶದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಈ ರೀತಿ ತಿಳಿಸಿದ್ದಾರೆ : 

“ನಮ್ಮ ಇತಿಹಾಸದ ಈ ಅತ್ಯಂತ ಭೀಕರ ಅವಧಿಯಲ್ಲಿ ಅಮಾನವೀಯ ನೋವುಗಳನ್ನು ಅನುಭವಿಸಿದ, ಜೀವ ಕಳೆದುಕೊಂಡ, ನಿರಾಶ್ರಿತರಾದ ಲಕ್ಷಾಂತರ ಜನರಿಗೆ ವಿಭಜನೆಯ ಭೀಕರ ಸ್ಮರಣೆಯ ದಿನದಂದು ನನ್ನ ನಮನಗಳು. ತನ್ನ ಇತಿಹಾಸವನ್ನು ನೆನಪಿಸಿಕೊಳ್ಳುವ ರಾಷ್ಟ್ರ ಮಾತ್ರ ತನ್ನ ಭವಿಷ್ಯವನ್ನು ನಿರ್ಮಿಸಲು ಮತ್ತು ಪ್ರಬಲ ಘಟಕವಾಗಿ ಹೊರಹೊಮ್ಮಲು ಸಾಧ್ಯ. ಈ ದಿನವನ್ನು ಆಚರಿಸುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಒಂದು ಅಡಿಪಾಯದ ಪ್ರಕ್ರಿಯೆಯಾಗಿದೆ “ 

 

 

*****



(Release ID: 2045226) Visitor Counter : 17