ಸಂಸ್ಕೃತಿ ಸಚಿವಾಲಯ

ಕೇಂದ್ರ ಸಂಸ್ಕೃತಿ ಖಾತೆ ಸಚಿವರಾಗಿ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅಧಿಕಾರ ಸ್ವೀಕಾರ


ನಮ್ಮ ದೇಶದ ಬೆಳೆಯುತ್ತಿರುವ ಮೃದ ಶಕ್ತಿ ಅದರ ಶ್ರೀಮಂತ ಸಾಂಸ್ಕೃತಿಕ ಚೌಕಟ್ಟು : ಶ್ರೀ ಶೇಖಾವತ್

Posted On: 11 JUN 2024 2:31PM by PIB Bengaluru

ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಇಂದು ದೆಹಲಿಯಲ್ಲಿ ಕೇಂದ್ರ ಸಂಸ್ಕೃತಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ತಮ್ಮ ಮೇಲೆ ವಿಶ್ವಾಸವಿಟ್ಟು ಭಾರತೀಯ ಸಂಸ್ಕೃತಿಯನ್ನು ದೇಶಾದ್ಯಂತ ಮತ್ತು ವಿಶ್ವದೆಲ್ಲೆಡೆ ಪಸರಿಸಲು, ಸಂರಕ್ಷಿಸಲು ಮತ್ತು ಭಾರತೀಯತೆಯ ವೈಭವವನ್ನು ಸಾರಲು ಅವಕಾಶ ನೀಡಿದಕ್ಕೆ ಕೃತಜ್ಞರಾಗಿರುವುದಾಗಿ ಹೇಳಿದ್ದಾರೆ. 

 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಇಂಡಿಯಾ ದಿಂದ ಭಾರತದತ್ತ ಪರಿವರ್ತನೆಗೆ ನಾವು ದೈತ್ಯ ಹೆಜ್ಜೆಗಳನ್ನಿರಿಸುತ್ತಿದ್ದು, ವಸಾಹತುಶಾಹಿ ಪ್ರಭಾವದಿಂದ ಹೊರಬರುತ್ತಾ ನಮ್ಮ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಪುನಃ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ನಮ್ಮ ದೇಶದ ಮೃದು ಶಕ್ತಿಯು ಅದರ ಶ್ರೀಮಂತ ಸಾಂಸ್ಕೃತಿಕ ಚೌಕಟ್ಟಿನಲ್ಲಿದೆ ಮತ್ತು ಕಲೆ, ಸಂಗೀತ, ನೃತ್ಯ, ಜವಳಿ ಮೊದಲಾದ ವಲಯಗಳಲ್ಲಿ ಅದರ ಅಸಂಖ್ಯ ಪರಿವರ್ತನೆಗಳಲ್ಲಿದೆ ಎಂದು ಶೇಖಾವತ್ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಅಮೃತ ಕಾಲದಲ್ಲಿ ನಮ್ಮ ಸಂಸ್ಕೃತಿಯನ್ನು ಬಲಪಡಿಸಲು ಹಾಗೂ ವಿಕಸಿತ ಭಾರತ ರೂಪಿಸಲು ಸಂಸ್ಕೃತಿಯನ್ನು ಬಲವಾದ ಅಸ್ತ್ರವಾಗಿಸೋಣ.

 

ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಮತ್ತು ಇತರ ಹಿರಿಯ ಅಧಿಕಾರಿಗಳು ಆದರದಿಂದ ಸ್ವಾಗತಿಸಿದರು.

 


 



(Release ID: 2024174) Visitor Counter : 29