ಪ್ರಧಾನ ಮಂತ್ರಿಯವರ ಕಛೇರಿ

​​​​​​​ಕಾಶಿಯು ದೇವ್ ದೀಪಾವಳಿಗೆ ಸಮಾನಾರ್ಥಕವಾಗಿದೆ: ಪ್ರಧಾನಮಂತ್ರಿಗಳು

Posted On: 27 NOV 2023 10:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾಶಿಯ ದೇವ್ ದೀಪಾವಳಿಯಲ್ಲಿ ಭಾರತದ ಸಾಂಸ್ಕೃತಿಕ ವೈಭವದ ದರ್ಶನ ಪಡೆದ ಹಲವಾರು ರಾಷ್ಟ್ರಗಳ ರಾಜತಾಂತ್ರಿಕರ ಉಪಸ್ಥಿತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 

ಈ ಸಂಬಂಧ ಶ್ರೀ ಮೋದಿಯವರು 'ಎಕ್ಸ್' ನಲ್ಲಿ ಸಂದೇಶ ಪೋಸ್ಟ್ ಮಾಡಿದ್ದಾರೆ.

"ಕಾಶಿಯು ದೇವ್ ದೀಪಾವಳಿಗೆ ಸಮಾನಾರ್ಥಕವಾಗಿದೆ.  ಈ ವರ್ಷವೂ ಆಚರಣೆಗಳು ಅದ್ಧೂರಿಯಾಗಿದ್ದು, ಅಷ್ಟೇ ಸಂತೋಷದಾಯಕವಾಗಿದೆ.  ಹಲವಾರು ರಾಷ್ಟ್ರಗಳ ರಾಜತಾಂತ್ರಿಕ ಪ್ರಮುಖರು ಭಾರತದ ಸಾಂಸ್ಕೃತಿಕ ಚೈತನ್ಯದ ಒಂದು ನೋಟವನ್ನು ಕಣ್ತುಂಬಿಕೊಂಡಿರುವುದು ಇನ್ನಷ್ಟು ಸಂತಸ ತಂದಿದೆ," ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.



(Release ID: 1980303) Visitor Counter : 75