ಪ್ರಧಾನ ಮಂತ್ರಿಯವರ ಕಛೇರಿ

ಮೌಲಾನಾ ಆಜಾದ್ ಅವರ ಜನ್ಮ ದಿನದ ಅಂಗವಾಗಿ ಅವರನ್ನು ಸ್ಮರಿಸಿದ ಪ್ರಧಾನಿ

Posted On: 11 NOV 2023 9:30AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೌಲಾನಾ ಆಜಾದ್ ಅವರ ಜಯಂತಿ ಅಂಗವಾಗಿ ಇಂದು ಅವರನ್ನು ಸ್ಮರಿಸಿದ್ದಾರೆ. ಮೌಲಾನಾ ಆಜಾದ್ ಅವರು ಘನ ವಿದ್ವಾಂಸರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಆಧಾರ ಸ್ತಂಭವಾಗಿದ್ದರು ಮತ್ತು ಶಿಕ್ಷಣದ ಬಗೆಗಿನ ಅವರ ಬದ್ಧತೆ ಶ್ಲಾಘನೀಯ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಅವರು ತಮ್ಮ ಸಾಮಾಜಿಕ ಜಾಲತಾಣ  X ನಲ್ಲಿ ಹೀಗೆ ಹೇಳಿದ್ದಾರೆ.

“ಮೌಲಾನಾ ಆಜಾದ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸುತ್ತಿದ್ದೇನೆ. ಅವರು ಒಬ್ಬ ಘನ ವಿದ್ವಾಂಸರಾಗಿದ್ದರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಆಧಾರಸ್ತಂಭ, ಶಿಕ್ಷಣದ ಬಗೆಗಿನ ಅವರ ಬದ್ಧತೆ ಶ್ಲಾಘನೀಯ. ಆಧುನಿಕ ಭಾರತವನ್ನು ರೂಪಿಸುವಲ್ಲಿ ಅವರ ಪ್ರಯತ್ನಗಳು ಅನೇಕ ಜನರಿಗೆ ಮಾರ್ಗದರ್ಶನ ನೀಡುತ್ತಲೇ ಇವೆ’’.  



(Release ID: 1976424) Visitor Counter : 55