ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಸ್ವಚ್ಛತೆಯೇ ಸೇವೆ( ಸ್ವಚ್ಛತಾ ಹಿ ಸೇವಾ)- 2023 ಕಾರ್ಯಯೋಜನೆಗೆ ಚಾಲನೆ


ಸರ್ಕಾರದ ಪ್ರತಿಯೊಂದು ಯೋಜನೆಗಳಲ್ಲಿ ಮಾತ್ರವಲ್ಲದೆ ನಾಗರಿಕರ ಜೀವನ ವಿಧಾನದಲ್ಲಿಯೂ ಕೂಡಾ ಈಗ “ಸ್ವಚ್ಛತೆ” ಮೂಲಕಾರ್ಯವಾಗಿ ಮಾರ್ಪಟ್ಟಿದೆ: ಕೇಂದ್ರ ಸಚಿವ ಶ್ರೀ ಹರ್ದೀಪ್ ಎಸ್ ಪುರಿ

ಕಳೆದ ಒಂಬತ್ತು ವರ್ಷಗಳಲ್ಲಿ 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಬಯಲು ಶೌಚದ ಪಿಡುಗಿನಿಂದ ದೇಶವನ್ನು ಮುಕ್ತಗೊಳಿಸಲಾಗಿದೆ: ಕೇಂದ್ರ ಸಚಿವ ಶ್ರೀ ಹರ್ದೀಪ್ ಎಸ್ ಪುರಿ

Posted On: 15 SEP 2023 3:51PM by PIB Bengaluru

“ 'ಅಂತ್ಯೋದಯ ದಿಂದ ಸರ್ವೋದಯ (ಅಂತ್ಯೋದಯ ಸೇ ಸರ್ವೋದಯ)' ತತ್ವಕ್ಕೆ ಸ್ವಚ್ಛ ಭಾರತ್ ಮಿಷನ್ ಒಂದು ಉತ್ತಮ ಉದಾಹರಣೆಯಾಗಿದೆ. ಇದು ನಮ್ಮ ನಗರಗಳ, ಅಂಚಿನಲ್ಲಿರುವ ಮತ್ತು ದುರ್ಬಲ ವರ್ಗಗಳಿಗೆ ಆದ್ಯತೆ ನೀಡಿದೆ ಮತ್ತು ನಗರದ ಬಡವರನ್ನು ಏಳಿಗೆಗಾಗಿ ಮತ್ತು ಅವರನ್ನು ಸಬಲೀಕರಣಗೊಳಿಸಲು ಶ್ರಮಿಸಿದೆ” ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಇಂದು (15-09-2023) ಹೇಳಿದರು. ಸ್ವಚ್ಛತೆಯೇ ಸೇವೆ (ಸ್ವಚ್ಛತಾ ಹಿ ಸೇವಾ) – 2023 ಇದರ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವರು ಮಾತನಾಡುತ್ತಿದ್ದರು.

ಸ್ವಚ್ಛ ಭಾರತ್ ದಿವಸ್‌ ಗೆ ಪೂರ್ವಭಾವಿಯಾಗಿ, ಸ್ವಚ್ಛ ಭಾರತ್ ಮಿಷನ್-ಅರ್ಬನ್ ಮತ್ತು ಸ್ವಚ್ಛ ಭಾರತ್ ಮಿಷನ್- ಗ್ರಾಮೀಣ ಜಂಟಿಯಾಗಿ ವಾರ್ಷಿಕವಾಗಿ 15ನೇ ಸೆಪ್ಟೆಂಬರ್‌ನಿಂದ 2ನೇ ಅಕ್ಟೋಬರ್ 23ರ ನಡುವೆ ಹದಿನೈದು ದಿನಗಳನ್ನು ಸ್ವಚ್ಛತಾ ಹಿ ಸೇವಾ (ಎಸ್.ಹೆಚ್.ಎಸ್.) ಹೆಸರಲ್ಲಿ ಆಯೋಜಿಸಲಾಗುವುದು. ಭಾರತೀಯ ಸ್ವಚ್ಛತಾ ಲೀಗ್ 2.0, ಸಫಾಯಿಮಿತ್ರ ಸುರಕ್ಷಾ ಶಿಬಿರ ಮತ್ತು ಸಾಮೂಹಿಕ ಸ್ವಚ್ಛತಾ ಅಭಿಯಾನಗಳಂತಹ ವಿವಿಧ ಚಟುವಟಿಕೆಗಳ ಮೂಲಕ ದೇಶಾದ್ಯಂತ ಕೋಟಿಗಟ್ಟಲೆ ನಾಗರಿಕರ ಭಾಗವಹಿಸುವಿಕೆಯನ್ನು ವಾರ್ಷಿಕವಾಗಿ ಸಜ್ಜುಗೊಳಿಸುವ ಗುರಿಯನ್ನು ಈ ವಿಶೇಷ ಹದಿನೈದು ದಿನಗಳು ಹೊಂದಿರುತ್ತದೆ.

ಎಸ್.ಹೆಚ್.ಎಸ್.-2023 ಅನ್ನು ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಗಿರಿರಾಜ್ ಸಿಂಗ್ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಖಾತೆ ಸಚಿವ ಶ್ರೀ ಕೌಶಲ್ ಕಿಶೋರ್ ಅವರ ಸಮಾರಂಭದಲ್ಲಿ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ವಿನಿ ಮಹಾಜನ್ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಮನೋಜ್ ಜೋಶಿ ವಿಡಿಯೊ ಸಮಾವೇಶ ಮೂಲಕ ಸಮಾರಂಭದಲ್ಲಿ ಭಾಗವಹಿಸಿದರು.

ಲೇಹ್ (ಲಡಾಖ್); ಪಿಂಪ್ರಿ( ಮಹಾರಾಷ್ಟ್ರ); ಮೀರತ್( ಉತ್ತರ ಪ್ರದೇಶ); ಲಖಿಂಪುರ( ಅಸ್ಸಾಂ) ನಗರಗಳ ಹಿರಿಯ ಅಧಿಕಾರಿಗಳು, ತಮ್ಮ ನಗರಗಳಲ್ಲಿನ ಸ್ವಚ್ಛತಾ ಸಂಬಂಧಿತ ವಿವಿಧ ಚಟುವಟಿಕೆಗಳ ಉತ್ತಮ ಅಭ್ಯಾಸಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ಎಸ್.ಹೆಚ್.ಎಸ್.-2023 ಕುರಿತು ವೀಡಿಯೊವನ್ನು ಪ್ರದರ್ಶಿಸಲಾಯಿತು. ಇದರ ಜೊತೆಗೆ ಎಸ್.ಹೆಚ್.ಎಸ್.-2023 ರ ಲಾಂಛನ, ಜಲತಾಣ ಮತ್ತು ನಾಗರಿಕರ ಮಾಹಿತಿಯ ಪೋರ್ಟಲ್ ಬಿಡುಗಡೆಗೆ ಮಾಡಲಾಯಿತು. 'ಇಂಡಿಯನ್ ಸ್ವಚ್ಛತಾ ಲೀಗ್ 2.0', 'ಸಫೈಮಿತ್ರ ಸುರಕ್ಷಾ ಶಿವರ್' ಲಾಂಛನಗಳು ಮತ್ತು 'ನಾಗರಿಕರ ಪೋರ್ಟಲ್' ಅನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಎಸ್.ಬಿ.ಎಂ.ಮತ್ತು ಎಸ್.ಹೆಚ್.ಎಸ್.-2023 ರ ಉದ್ಘಾಟನೆ ಕುರಿತು ಮಾತನಾಡಿದ ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು “ ಸ್ವಚ್ಛ ಭಾರತ್ ಮಿಷನ್‌ ನ ಮುಂಬರುವ ಒಂಬತ್ತನೇ ವಾರ್ಷಿಕೋತ್ಸವ ಮತ್ತು 'ಸ್ವಚ್ಛತಾ ಹಿ ಸೇವಾ' 2023 ಇದರ ಪ್ರಾರಂಭವು ನಮಗೆಲ್ಲರಿಗೂ ಸಂಭ್ರಮದ ಕ್ಷಣವಾಗಿದೆ. ನಮ್ಮ ನಗರಗಳನ್ನು ಸ್ವಚ್ಛವಾಗಿಡುವ ಕಾರಣಕ್ಕೆ ನಾವು ಪುನರುಚ್ಚರಿಸುತ್ತಾ ನಮ್ಮನ್ನು ನಾವಾಗಿಯೇ ನೆನಪಿಸಿಕೊಳ್ಳುವ ಸಮಯವಿದು. ಸ್ವಚ್ಛತಾ ಹಿ ಸೇವಾ ಹದಿನೈದು ದಿನಗಳ ಕಾರ್ಯಕ್ರಮ, ಇದರೊಂದಿಗೆ ನಾವು ಸ್ವಚ್ಛತೆಯ ಕಾರಣಕ್ಕಾಗಿ ನಮ್ಮನ್ನು ಪುನಃ ಸಮರ್ಪಿಸಿಕೊಳ್ಳುತ್ತೇವೆ” ಎಂದು ಹೇಳಿದರು.

"ಗೌರವಾನ್ವಿತ ಪ್ರಧಾನ ಮಂತ್ರಿಗಳು 15 ಆಗಸ್ಟ್ 2014 ರಂದು ಕೆಂಪು ಕೋಟೆಯಯಲ್ಲಿ ಸ್ವಚ್ಛ ಭಾರತ್ ಮಿಷನ್ ಅನ್ನು ಘೋಷಿಸಿದಾಗ, ಇಂತಹ ದೊಡ್ಡ ಪ್ರಮಾಣದ ರೂಪಾಂತರ ಸಾಧ್ಯವಾಗಬಹುದೆಂದು ಹಿಂದೆಂದೂ ಯಾರೂ ಊಹಿಸಿರಲಿಲ್ಲ. ಅಲ್ಲಿಯವರೆಗೆ, ಬಹಳಷ್ಟು ವರ್ಷಗಳ ಕಾಲ ನೈರ್ಮಲ್ಯದ ಕಳಪೆ ಪ್ರದರ್ಶನದ ಹೊರತಾಗಿಯೂ, ಭಾರತವು ಮುಂದಿನ ಐದು ವರ್ಷಗಳಲ್ಲಿ ಬಯಲು ಶೌಚ ಮುಕ್ತ(ಒ.ಡಿ.ಎಫ್) ಗುರಿಯನ್ನು ಸಾಧಿಸಿತು. ಭಾರತದಲ್ಲಿನ ಎಲ್ಲಾ 4,884 ಯು.ಎಲ್.ಬಿ.ಗಳು (100%) ಈಗ ಬಯಲು ಶೌಚ ಮುಕ್ತ(ಒ.ಡಿ.ಎಫ್)ವಾಗಿದೆ” ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶಿ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದರು.

“73.62 ಲಕ್ಷ ಶೌಚಾಲಯಗಳನ್ನು (67. 1 ಲಕ್ಷ ವೈಯಕ್ತಿಕ /ಕೌಟುಂಬಿಕ ಗೃಹಗಳಲ್ಲಿನ ಶೌಚಾಲಯಗಳು ಮತ್ತು 6.52 ಲಕ್ಷ ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳು) ನಿರ್ಮಿಸುವ ಮೂಲಕ ನಾವು ನಗರಗಳ ಲಕ್ಷಾಂತರ ಬಡವರಿಗೆ ಘನತೆ ಮತ್ತು ಆರೋಗ್ಯವನ್ನು ಒದಗಿಸಿದ್ದೇವೆ. ಭಾರತದಲ್ಲಿ 95% ವಾರ್ಡ್‌ಗಳು 100% ಮನೆಯಿಂದ ನೇರವಾಗಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ. 88% ಕ್ಕಿಂತ ಹೆಚ್ಚು ವಾರ್ಡ್‌ಗಳು ತ್ಯಾಜ್ಯದ ಮೂಲ ಪ್ರತ್ಯೇಕತೆ ವ್ಯವಸ್ಥೆಯನ್ನು ಹೊಂದಿವೆ. ಒಂದು ವಿಶಿಷ್ಟ ಸರ್ಕಾರಿ ಕಾರ್ಯಕ್ರಮವಾದ ಸ್ವಚ್ಛ ಭಾರತ್ ಮಿಷನ್ ಬದಲಿಗೆ 'ಜನ ಆಂದೋಲನ'ವಾಗಿ ಮಾರ್ಪಾಡುಗೊಂಡು ವಿಕಸನಹಾಗೂ ವಿಸ್ತಾರಗೊಂಡ ಕಾರಣಕ್ಕೆ ಇದು ಸಾಧ್ಯವಾಯಿತು. ಪ್ರತಿ ಸರ್ಕಾರಿ ಯೋಜನೆಗಳಲ್ಲಿ ಮಾತ್ರವಲ್ಲದೆ ನಾಗರಿಕರ ಜೀವನ ವಿಧಾನದಲ್ಲಿಯೂ ಸ್ವಚ್ಛತಾ ಕಾರ್ಯವಿಂದು ಮೂಲ ಸಿದ್ಧಾಂತವಾಗಿ ಬದಲಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ದೇಶವನ್ನು ಬಯಲು ಶೌಚದ ಪಿಡುಗಿನಿಂದ ಮುಕ್ತಗೊಳಿಸಲಾಗಿದೆ. ನಮ್ಮ ಘನತ್ಯಾಜ್ಯ ನಿರ್ವಹಣೆ, ಮಿಷನ್‌ನ ಪ್ರಾರಂಭದಲ್ಲಿ ಬಹುತೇಕ ಅಸ್ತಿತ್ವದಲ್ಲಿ ಇರಲಿಲ್ಲ, ಈಗ ಪ್ರಭಾವಶಾಲಿ ಸಂದೇಶವಾಗಿ, 76% ರಷ್ಟು ಪರಿಣಾಮಕಾರಿಯಾಗಿದೆ ಮತ್ತು ಶೀಘ್ರದಲ್ಲೇ ನಾವು 100% ರಷ್ಟು ಸಾಧಿಸುತ್ತೇವೆ” ಎಂದು ಎಸ್‌.ಬಿ.ಎಂ. ತಂದಿರುವ ಪರಿವರ್ತನೆಯ ಈವರೆಗಿನ ಸಾಧನೆಗಳ ಕುರಿತು ಮಾತನಾಡಿದ ಕೇಂದ್ರ ಸಚಿವ ಶ್ರೀ ಪುರಿ ಅವರು ಹೇಳಿದರು.

ಸ್ವಚ್ಛ ಭಾರತ್ ಮಿಷನ್ - ಅರ್ಬನ್ 2.0 (ಎಸ್‌ಬಿಎಂ-ಯು 2.0) ಮೂಲಕ ಮಿಷನ್‌ ನ ನಗರ ಘಟಕವನ್ನು ಈಗ 2026 ರ ವರೆಗೆ ವಿಸ್ತರಿಸಲಾಗಿದೆ. ಇದು ನಮ್ಮ ಎಲ್ಲಾ ನಗರಗಳನ್ನು 'ಕಸ ಮುಕ್ತ' ಮಾಡಲು ಮತ್ತು ಪರಂಪರೆಯ ಕಸಗಳ ಡಂಪ್‌ಸೈಟ್‌ ಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಎಸ್‌ಬಿಎಂ-ಯು 2.0 ನ ಕೇಂದ್ರೀಕೃತ ಪ್ರದೇಶಗಳು ವಸ್ತು ರಿಕವರಿ ಸೌಲಭ್ಯಗಳು (ಎಂ.ಆರ್.ಎಫ್.), ತ್ಯಾಜ್ಯದಿಂದ ಶಕ್ತಿಯ ಸ್ಥಾವರಗಳು (ಡಬ್ಲ್ಯೂ.ಟಿ.ಇ. ಸ್ಥಾವರಗಳು), ನಿರ್ಮಾಣ ಮತ್ತು ಉರುಳಿಸುವಿಕೆಯ ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಪಡೆದ ಇಂಧನ (ಆರ್.ಡಿ.ಎಫ್) ಸ್ಥಾವರಗಳು, ವೈಜ್ಞಾನಿಕ ಭೂಕುಸಿತ ಸ್ಥಳಗಳು ಸೇರಿದಂತೆ ಹಲವಾರು ಅಂಶಗಳನ್ನು ಒಳಗೊಂಡಿದೆ. ಪ್ರತಿ ನಗರ, ಗ್ರಾಮ, ವಾರ್ಡ್ ಮತ್ತು ನೆರೆಹೊರೆಯವರು ತಮ್ಮ ಶ್ರಮದಾನವನ್ನು (ಸ್ವಯಂಪ್ರೇರಿತ ದುಡಿಮೆ) ಸ್ವಚ್ಛತಾ ಕಾರ್ಯಕ್ಕೆ ಕೊಡುಗೆ ನೀಡಲು ಪ್ರತಿಜ್ಞೆ ಮಾಡಿದ್ದಾರೆ. ನಮ್ಮ ನಗರಗಳು ಕಸದಿಂದ ಮುಕ್ತವಾಗಲು ಮತ್ತು ಪರಂಪರೆಯ ತ್ಯಾಜ್ಯದ ಪರಿಹಾರ ಮತ್ತು ಸಂಪೂರ್ಣ ಸ್ವಚ್ಛತಾ ಕಾರ್ಯ ವಾಸ್ತವವಾಗಲು ನಾವೆಲ್ಲರೂ ಪ್ರತಿಜ್ಞೆ ತೆಗೆದುಕೊಳ್ಳಬೇಕು ಎಂದು ತಮ್ಮ ಸಮಾರೋಪ ಭಾಷಣದಲ್ಲಿ ಸಚಿವರು ಹೇಳಿದರು.

ಸ್ವಚ್ಛತಾ ಹಿ ಸೇವಾ’ ಕುರಿತು:

ಇಡೀ ರಾಷ್ಟ್ರವು ಮಹಾತ್ಮ ಗಾಂಧಿಯವರ ಜನ್ಮದಿನವನ್ನು, 2ನೇ ಅಕ್ಟೋಬರ್, 2023 ಅನ್ನು, ಸ್ವಚ್ಛ ಭಾರತ್ ದಿವಸ್‌ ಆಗಿ ಆಚರಿಸುತ್ತದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೇಂದ್ರ ಜಲ ಶಕ್ತಿ ಸಚಿವಾಲಯವು ಇತರ ಸಚಿವಾಲಯಗಳ ಸಹಯೋಗದೊಂದಿಗೆ 9 ವರ್ಷಗಳ ಸ್ವಚ್ಛ ಭಾರತ ಮಿಷನ್ ಯಶಸ್ಸಿನ ಸಂಭ್ರಮಾಚರಣೆಯನ್ನು 2ನೇ ಅಕ್ಟೋಬರ್, 2023 ರಂದು ಆಚರಿಸಲು 2023 ರ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ 'ಸ್ವಚ್ಛತಾ ಹಿ ಸೇವಾ' ಪಾಕ್ಷಿಕವನ್ನು ಆಯೋಜಿಸುತ್ತಿದೆ.

ಎಸ್.ಹೆಚ್.ಎಸ್.2023 ಇದರ ಥೀಮ್ "ಕಸ ಮುಕ್ತ ಭಾರತ" ಆಗಿದೆ. ಹದಿನೈದು ದಿನಗಳ ಭಾಗವಾಗಿ ಯೋಜಿಸಲಾದ ಕಾರ್ಯಕ್ರಮಗಳು ಭಾರತವನ್ನು ಸ್ವಚ್ಛ ಮತ್ತು ಕಸ ಮುಕ್ತಗೊಳಿಸಲು ಎಲ್ಲರ ಬದ್ಧತೆಯನ್ನು ಪುನರುಚ್ಚರಿಸುತ್ತವೆ.

ಎಸ್.ಹೆಚ್.ಎಸ್.2023 ಯೋಜನೆಗಾಗಿ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಸ್ವಯಂಪ್ರೇರಿತವಾಗಿ ಮತ್ತು ಶ್ರಮದಾನಗಳ ಮೂಲಕ ಹಾಗೂ ಸಫಾಯಿಮಿತ್ರರ ಕಲ್ಯಾಣದ ಮೂಲಕ ಗೋಚರವಾಗುವಂತೆ ಹೆಚ್ಚಿನ ಸ್ವಚ್ಛತೆಯನ್ನು ಸಾಧಿಸಲು ಗಮನಕೇಂದ್ರೀಕರಿಸಿದೆ. ಈ ನಿಟ್ಟಿನಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು, ಕಚೇರಿಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಕಡಲತೀರಗಳು, ಪ್ರವಾಸಿ ತಾಣಗಳು, ಮೃಗಾಲಯಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳು, ಐತಿಹಾಸಿಕ ಸ್ಮಾರಕಗಳು, ಪಾರಂಪರಿಕ ತಾಣಗಳು, ನದಿ ಮುಂಭಾಗಗಳು, ಘಾಟ್‌ಗಳು, ಚರಂಡಿಗಳು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಆಯೋಜಿಸಲಾಗುವುದು.

ಎಲ್ಲಾ ಪ್ರಮುಖ ಸ್ಥಳಗಳಿಂದ ಕಸ ತೆಗೆಯುವುದು, ತ್ಯಾಜ್ಯಗಳನ್ನು ತೆರವುಗೊಳಿಸುವುದು, ರಿಪೇರಿ, ಪೇಂಟಿಂಗ್, ಶುಚಿಗೊಳಿಸುವಿಕೆ ಮತ್ತು ಕಸದ ತೊಟ್ಟಿಗಳ ಸಂಗ್ರಹಣೆ ಮತ್ತು ಶೇಖರಣೆ, ಸಾರ್ವಜನಿಕ ಶೌಚಾಲಯಗಳು, ಕಸದ ಬಿಂದುಗಳು, ತ್ಯಾಜ್ಯ ಸಾಗಣೆ ವಾಹನಗಳು ಮತ್ತು ಮೆಟೀರಿಯಲ್ ರಿಕವರಿ ಸೌಲಭ್ಯಗಳಂತಹ ಎಲ್ಲಾ ನೈರ್ಮಲ್ಯ ಸ್ವತ್ತುಗಳ ಬ್ರ್ಯಾಂಡಿಂಗ್ ಅನ್ನು ಯೋಜನೆ ಒಳಗೊಂಡಿರುತ್ತದೆ. ಮಾರುಕಟ್ಟೆಗಳು, ಸಾರ್ವಜನಿಕ ಸ್ಥಳಗಳು ಮತ್ತು ಗೋಡೆಚಿತ್ರ/ವಾಲ್ ಪೇಂಟಿಂಗ್‌ಗಳು ಮತ್ತು ಡಸ್ಟ್‌ಬಿನ್‌ಗಳೊಂದಿಗೆ ಪ್ರವಾಸಿ ತಾಣಗಳು, ಸ್ವಚ್ಛತಾ ರಸಪ್ರಶ್ನೆಗಳು, ಪ್ಲಾಂಟೇಶನ್ ಡ್ರೈವ್‌ಗಳು, ಸ್ವಚ್ಛತಾ ಪ್ರತಿಜ್ಞೆಗಳು ಮತ್ತು ಸ್ವಚ್ಛತಾ ರನ್‌ ಗಳನ್ನು ಆಯೋಜಿಸುವುದು ಇತ್ಯಾದಿ ಸ್ವಚ್ಛತಾ ಚಟುವಟಿಕೆಗಳಲ್ಲಿ ಸೇರಿವೆ.

ಎಸ್.ಹೆಚ್.ಎಸ್. - 2023 ರ ಅಡಿಯಲ್ಲಿ ಆಯೋಜಿಸಬೇಕಾದ ಪ್ರಮುಖ ಚಟುವಟಿಕೆಗಳು ಈ ಕೆಳಗಿನಂತಿವೆ:

ಸ್ವಚ್ಛತಾ ಹಿ ಸೇವಾ - ಹದಿನೈದು ದಿನಗಳ ಕಾಲ ಸ್ವಚ್ಛತೆಯ ಕಾರ್ಯಚಟುವಟಿಕೆಯಾದೆ.

ಈ ಹದಿನೈದು ದಿನಗಳಲ್ಲಿ” ಸ್ವಚ್ಛತಾ “ ಪ್ರಮುಖ ಸುದ್ದಿಯಾಗಲಿದೆ, ಏಕೆಂದರೆ ಪ್ರತಿಯೊಬ್ಬರೂ ಕಸದ ವಿರುದ್ಧ ಬೃಹತ್ ಸ್ವಚ್ಛತಾ ಕಾರ್ಯಚಟುವಟಿಕೆ ಮಾಡಲಿದ್ದಾರೆ, ಮತ್ತು ನವೀನ ಮತ್ತು ವಿಶಿಷ್ಟ ವಿಧಾನಗಳ ಜಾಗೃತಿಗಾಗಿ 'ಟ್ವಿನ್ ಬಿನ್' ಮತ್ತು ಮೂಲ ಪ್ರತ್ಯೇಕತೆಗಾಗಿ ಪ್ರಯತ್ನ ಮಾಡಲಿದ್ದಾರೆ.

ಎಸ್.ಹೆಚ್.ಎಸ್. -2023 ರ ಭಾಗವಾಗಿ, ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು, ಸಾರ್ವಜನಿಕ ಕ್ಷೇತ್ರದ ಘಟಕಗಳು, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ವಿವಿಧ ಸ್ಥಳಗಳಲ್ಲಿ ಬೃಹತ್ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸುತ್ತವೆ. ಅಂತರ-ವಲಯ ಚಟುವಟಿಕೆಗಳು ಪ್ರವಾಸೋದ್ಯಮ ಸಚಿವಾಲಯದ ಅಡಿಯಲ್ಲಿ ಹೆಚ್ಚಿನ ಪಾದಯಾತ್ರೆಯ ಪ್ರವಾಸಿ ತಾಣಗಳು / ಯಾತ್ರಾ ಸ್ಥಳಗಳನ್ನು ಸ್ವಚ್ಛಗೊಳಿಸುವುದು, ಪ್ರತಿ ರೈಲ್ವೆ ಹಳಿಯೂ ಸ್ವಚ್ಛ('ಹರ್ ಪತ್ರಿ ಸಾಫ್ ಸುತಾರಿ') , ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಮತ್ತು ರೈಲ್ವೆಯ ಪಕ್ಕದ ಪ್ರದೇಶಗಳ ಸ್ವಚ್ಛತಾ ಚಟುವಟಿಕೆಗಳು ನಡೆಯಲಿವೆ. ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯಗಳು ಮತ್ತು ಶಾಲಾ ವಿದ್ಯಾರ್ಥಿಗಳು ಸ್ವಚ್ಛತಾ ಚಟುವಟಿಕೆಗಳಲ್ಲಿ ಒಳಗೊಂಡಿರುತ್ತಾರೆ. ಎಸ್.ಹೆಚ್.ಎಸ್. ಚಟುವಟಿಕೆಗಳಿಗಾಗಿ, ಪೆಟ್ರೋಲ್ ಪಂಪ್‌ಗಳಾದ್ಯಂತ ಸ್ವಚ್ಛತೆ ಮತ್ತು ಜಾಗೃತಿ ಡ್ರೈವ್‌ಗಳನ್ನು ಕೂಡಾ ಆಯೋಜಿಸಲಾಗುತ್ತದೆ.

ಇಂಡಿಯನ್ ಸ್ವಚ್ಛತಾ ಲೀಗ್ 2.0

'ಇಂಡಿಯಾ ಸ್ವಚ್ಛತಾ ಲೀಗ್' ನ ಎರಡನೇ ಆವೃತ್ತಿಯು ರಾಷ್ಟ್ರವನ್ನು ನೂತನ ಸ್ವಚ್ಛತಾ ಹಾದಿಯಲ್ಲಿ ಸಾಗಿಸಲು ಸಿದ್ಧವಾಗಿದೆ. ಯುವಕರ ನೇತೃತ್ವದಲ್ಲಿ, 'ಇಂಡಿಯಾ ಸ್ವಚ್ಛತಾ ಲೀಗ್' (ಐ.ಎಸ್.ಎಲ್ ) ಇದರ ಈ ಸೀಸನ್ 2 ಇನ್ನಷ್ಟು ಉತ್ತೇಜಕ ಮತ್ತು ಸಂತಸದಾಯಕ ಸ್ವಚ್ಛತಾ ಲೀಗ್ ಆಗಲಿದೆ ಎಂಬ ಭರವಸೆ ನೀಡುತ್ತಿದೆ. ಯುವಕರ ನೇತೃತ್ವದ ನಾಗರಿಕ ತಂಡಗಳ ಮೂಲಕ ಕಸದ ವಿರುದ್ಧದ ಹೋರಾಟವನ್ನು ಗೆಲ್ಲಲು 4,000 ಕ್ಕೂ ಹೆಚ್ಚು ನಗರ ತಂಡಗಳು ಸೆಪ್ಟೆಂಬರ್ 17, 2023 ರಂದು ಈಗಾಗಲೇ ಸಿದ್ಧವಾಗಿವೆ. ಈ ವರ್ಷ, ನಗರ ತಂಡಗಳು ಬೀಚ್‌ಗಳು, ಬೆಟ್ಟಗಳು ಮತ್ತು ಪ್ರವಾಸಿ ಸ್ಥಳಗಳನ್ನು ಸ್ವಚ್ಛಗೊಳಿಸಲು ಪಥಸಂಚಲನ ಮಾಡುತ್ತಿವೆ. ಐ.ಎಸ್.ಎಲ್ 2.0 - ಈ ಹದಿನೈದು ದಿನಗಳಲ್ಲಿ ಸ್ವಚ್ಛತೆಗಾಗಿ ನಿರಂತರ ಜವಾಬ್ದಾರಿ ಹೊರವ ಯುವ ಗುಂಪುಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕಾರ್ಯಕ್ಕೆ ಯುವ ಸ್ವಚ್ಛತಾ ಲೀಗ್ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ

ಸಫಾಯಿಮಿತ್ರ ಸುರಕ್ಷಾ ಶಿಬಿರ

ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲು, ಸಫಾಯಿಮಿತ್ರ ಸುರಕ್ಷಾ ಶಿಬಿರ ರೂಪದಲ್ಲಿ ಏಕ ಗವಾಕ್ಷಿ ಕಲ್ಯಾಣ ಶಿಬಿರಗಳನ್ನು ರಾಷ್ಟ್ರದ ವಿವಿಧ ನಗರಗಳಲ್ಲಿ ಸೆಪ್ಟೆಂಬರ್ 17, 2023 ರಿಂದ ಆಯೋಜಿಸಲಾಗುವುದು. 2023 ರಿಂದ. ನೈರ್ಮಲ್ಯ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಕಲ್ಯಾಣ ಯೋಜನೆಗಳನ್ನು ಸಮನ್ವಯ ಮಾಡಲು ಮತ್ತು ಅವರ ಯೋಗಕ್ಷೇಮ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಈ ಶಿಬಿರಗಳು ಹೊಂದಿವೆ. ಘನತ್ಯಾಜ್ಯ ನಿರ್ವಹಣೆ ಮತ್ತು ಉಪಯೋಗಿಸಿದ ನೀರು ನಿರ್ವಹಣೆಯಲ್ಲಿರುವ ಎಲ್ಲಾ ನೈರ್ಮಲ್ಯ ಕಾರ್ಮಿಕರನ್ನು ಗುರಿಯಾಗಿಸುವುದು ಶಿಬಿರದ ಉದ್ದೇಶವಾಗಿದೆ. ಸಾಮೂಹಿಕ ಜಾಗೃತಿ ಮುಟ್ಟಿಸುವುದು, ಆರೋಗ್ಯ ತಪಾಸಣೆ, ಯೋಗ ಶಿಬಿರಗಳು ಮತ್ತು ವಿವಿಧ ಸಚಿವಾಲಯಗಳೊಂದಿಗೆ ಒಮ್ಮುಖವಾಗಿ ಕೇಂದ್ರ ಮತ್ತು ರಾಜ್ಯ ಯೋಜನೆಗಳ ವಿವಿಧ ಕಲ್ಯಾಣ ಪ್ರಯೋಜನಗಳನ್ನು ವಿಸ್ತರಿಸುವ ಪ್ರಮುಖ ಚಟುವಟಿಕೆಗಳು ಕೂಡಾ ಈ ಶಿಬಿರ ಕೇಂದ್ರೀಕರಿಸುತ್ತದೆ.

 

*****

 



(Release ID: 1957859) Visitor Counter : 346