ಸಂಸ್ಕೃತಿ ಸಚಿವಾಲಯ

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸಲು ಮೇರಿ ಮಟ್ಟಿ ಮೇರಾ ದೇಶ್ ಅಭಿಯಾನ


ರಾಷ್ಟ್ರವ್ಯಾಪಿ ಜನ-ಭಾಗಿದಾರಿ ಕಾರ್ಯಕ್ರಮಗಳನ್ನು ಗ್ರಾಮದಿಂದ ರಾಷ್ಟ್ರಮಟ್ಟದವರೆಗೆ ಆಯೋಜಿಸಬೇಕು

ಗ್ರಾಮ ಪಂಚಾಯತಿಗಳಲ್ಲಿ ಶಿಲಾಫಲಕಗಳನ್ನು (ಸ್ಮಾರಕ ಫಲಕಗಳು) ಸ್ಥಾಪಿಸಲಾಗುವುದು

ಅಮೃತ ವಾಟಿಕಾ ರಚನೆಗಾಗಿ ಅಮೃತ ಕಲಶ ಯಾತ್ರೆಯಲ್ಲಿ ದೇಶದ ನಾನಾ ಮೂಲೆಗಳಿಂದ ಮಣ್ಣನ್ನು ದೆಹಲಿಗೆ ತರಲಾಗುವುದು.

Posted On: 03 AUG 2023 7:50PM by PIB Bengaluru

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ತಮ್ಮ ಮನ್ ಕಿ ಬಾತ್ ಪ್ರಸಾರದಲ್ಲಿ 'ಮೇರಿ ಮಟ್ಟಿ ಮೇರಾ ದೇಶ್' (ನಮ್ಮ ನೆಲ ನಮ್ಮ ದೇಶ) ಅಭಿಯಾನವನ್ನು ಘೋಷಿಸಿದರು. ಈ ಅಭಿಯಾನವು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಧೈರ್ಯಶಾಲಿಗಳನ್ನು ಗೌರವಿಸುವ ಗುರಿಯನ್ನು ಹೊಂದಿದೆ. ಕೆಚ್ಚೆದೆಯ ವೀರರನ್ನು ಸ್ಮರಿಸಲು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಅಭಿಯಾನವು ಒಳಗೊಂಡಿರುತ್ತದೆ. ಅವರನ್ನು ಸ್ಮರಿಸುವ ಶಿಲಾಫಲಕಗಳನ್ನು (ಸ್ಮಾರಕ ಫಲಕಗಳು) ಅಮೃತ ಸರೋವರದ ಸಮೀಪವಿರುವ ಗ್ರಾಮ ಪಂಚಾಯತ್ಗಳಲ್ಲಿ ಸ್ಥಾಪಿಸಲಾಗುವುದು. ಮಾಹಿತಿ ಮತ್ತು ಪ್ರಸಾರ ಮತ್ತು ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡರು.

ಸಂಸ್ಕೃತಿ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಮತ್ತು ಯುವ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀಮತಿ  ಮೀತಾ ರಾಜೀವ್ ಲೋಚನ್. ಪ್ರಸಾರ ಭಾರತಿ ಸಿಇಒ  ಶ್ರೀ ಗೌರವ್ ದ್ವಿವೇದಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ಅಪೂರ್ವ ಚಂದ್ರ ಅವರು, ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುವ ಆಜಾದಿ ಕಾ ಅಮೃತ್ ಮಹೋತ್ಸವದ ಸಮಾರೋಪ ಕಾರ್ಯಕ್ರಮವು ಮೇರಿ ಮಟ್ಟಿ ಮೇರಾ ದೇಶವಾಗಿದೆ ಎಂದು ಹೇಳಿದರು. 

ಕಳೆದ ವರ್ಷ ಆಯೋಜಿಸಲಾದ ಹರ್ ಘರ್ ತಿರಂಗಾ ಎಂಬ ರಾಷ್ಟ್ರವ್ಯಾಪಿ ಅಭಿಯಾನವು ಅಬ್ಬರದ ಯಶಸ್ಸನ್ನು ಕಂಡಿದೆ ಮತ್ತು ಈ ವರ್ಷ ಇನ್ನಷ್ಟು ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ‘ಮೇರಿ ಮಟ್ಟಿ ಮೇರಾ ದೇಶ್” ಅನ್ನು ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಹೊರತರಲಾಗುತ್ತಿದೆ ಎಂದು ಅವರು ಹೇಳಿದರು. ಫಲಕವನ್ನು ಧೈರ್ಯಶಾಲಿಗಳಿಗೆ ಗೌರವವಾಗಿ ಸ್ಥಾಪಿಸುವುದು, ಮಿಟ್ಟಿ ಕಾ ನಮನ್ ಮತ್ತು ವೀರೋನ್ ಕಾ ವಂದನ್ ಅಭಿಯಾನದ ಪ್ರಮುಖ ಅಂಶಗಳಾಗಿವೆ ಎಂದು ಅಪೂರ್ವ ಚಂದ್ರ ವಿವರಿಸಿದರು. 

ಹರ್ ಘರ್ ತಿರಂಗಾವನ್ನು ಈ ವರ್ಷವೂ ಆಯೋಜಿಸಲಾಗುವುದು ಆದರೆ ಮೇರಿ ಮಟ್ಟಿ ಮೇರಾ ದೇಶ್ಅಭಿಯಾನದ ಪ್ರಮುಖ ಅಂಶವಾಗಿದೆ. ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಅದನ್ನು ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯುವಲ್ಲಿ ಮಾಧ್ಯಮದ ಪಾತ್ರವನ್ನು ವಿವರಿಸಿದರು.

ಸಂಸ್ಕೃತಿ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಮಾತನಾಡಿ, ಈ ಅಭಿಯಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭದ್ರತಾ ಪಡೆಗಳಿಗೆ ಮೀಸಲಾಗಿರುವ ಶಿಲಾಫಲಕಗಳ ಸ್ಥಾಪನೆಯಂತಹ ಕಾರ್ಯಕ್ರಮಗಳು ಮತ್ತು ಪಂಚ ಪ್ರಾಣ ಪ್ರತಿಜ್ಞೆ, ವಸುಧಾ ವಂದನ, ವೀರೋನ್ ಕಾ ವಂದನ್ ಮುಂತಾದ ಉಪಕ್ರಮಗಳು ಇರುತ್ತವೆ. ಜತೆಗೆ ಶೌರ್ಯ, ತ್ಯಾಗವನ್ನು ಗೌರವಿಸ ಕಾರ್ಯಕ್ರಮವೂ ಇದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ, ಪಂಚಾಯತ್, ಬ್ಲಾಕ್, ಪಟ್ಟಣ, ನಗರ, ಮುನ್ಸಿಪಾಲಿಟಿ ಇತ್ಯಾದಿಗಳಿಂದ ಸ್ಥಳೀಯ ವೀರರ ತ್ಯಾಗದ ಮನೋಭಾವವನ್ನು ಅಭಿನಂದಿಸುವ ಶಿಲಾಫಲಕ ಅಥವಾ ಸ್ಮಾರಕ ಫಲಕಗಳನ್ನು ಸ್ಥಾಪಿಸಲಾಗುವುದು. ಆ ಪ್ರದೇಶಕ್ಕೆ ಸೇರಿದ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಹೆಸರುಗಳೊಂದಿಗೆ ಪ್ರಧಾನಿಯವರ ಸಂದೇಶವನ್ನು ಇದು ಹೊಂದಿರುತ್ತದೆ.

ಈ ಅಭಿಯಾನವು ಮಾರ್ಚ್ 12, 2021 ರಂದು ಪ್ರಾರಂಭವಾದ 'ಆಜಾದಿ ಕಾ ಅಮೃತ್ ಮಹೋತ್ಸವ'ದ ಸಮಾರೋಪ ಕಾರ್ಯಕ್ರಮವಾಗಿದೆ ಮತ್ತು ಭಾರತದಾದ್ಯಂತ ಆಯೋಜಿಸಲಾದ 2 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳೊಂದಿಗೆ ವ್ಯಾಪಕವಾದ ಸಾರ್ವಜನಿಕ ಭಾಗವಹಿಸುವಿಕೆಗೆ (ಜನ ಭಾಗಿದಾರಿ) ಸಾಕ್ಷಿಯಾಗಿದೆ ಎಂದು ಗೋವಿಂದ್ ಮೋಹನ್ ಹೇಳಿದರು. 9 ರಿಂದ 30 ಆಗಸ್ಟ್, 2023 ರವರೆಗೆ, 'ಮೇರಿ ಮಟ್ಟಿ ಮೇರಾ ದೇಶ್' ಅಭಿಯಾನವು ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ ಸ್ಥಳೀಯ ನಗರ ಸಂಸ್ಥೆಗಳು ಮತ್ತು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.

7500 ಕಲಶದಲ್ಲಿ ದೇಶದ ಮೂಲೆ ಮೂಲೆಗಳಿಂದ ‘ಅಮೃತ ಕಲಶ ಯಾತ್ರೆ” ನಡೆಸಿ, ದೆಹಲಿಯಲ್ಲಿ ‘ಅಮೃತ ವಾಟಿಕ’ನಿರ್ಮಿಸಲು ‘ಅಮೃತ ವಾಟಿಕಾ’ವನ್ನು ‘ಏಕ ಭಾರತ ಶ್ರೇಷ್ಠ ಭಾರತ’ದ ಬದ್ಧತೆಯ ಪ್ರತೀಕವಾಗಿಸುತ್ತದೆ ಎಂದು ವಿವರಿಸಿದರು. .

ಹೆಚ್ಚಿನ ವಿವರಗಳನ್ನು ನೀಡಿದ ಸಂಸ್ಕೃತಿ ಕಾರ್ಯದರ್ಶಿ, ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಲು (ಜನ್ ಭಾಗಿದಾರಿ) ವೆಬ್ಸೈಟ್ ಅನ್ನು ಪ್ರಾರಂಭಿಸಲಾಗಿದೆ, https://merimaatimeradesh.gov.in, ಅಲ್ಲಿ ಜನರು ಮಣ್ಣು ಅಥವಾ ಮಣ್ಣಿನ ದೀಪವನ್ನು ಹಿಡಿದು ಸೆಲ್ಫಿಗಳನ್ನು ಅಪ್ಲೋಡ್ ಮಾಡಬಹುದು. ಹಾಗೆ ಮಾಡುವ ಮೂಲಕ, ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು, ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕಲು, ನಮ್ಮ ಶ್ರೀಮಂತ ಪರಂಪರೆಯ ಬಗ್ಗೆ ಹೆಮ್ಮೆಪಡಲು, ಏಕತೆ ಮತ್ತು ಒಗ್ಗಟ್ಟನ್ನು ಎತ್ತಿಹಿಡಿಯಲು, ನಾಗರಿಕರಾಗಿ ಕರ್ತವ್ಯಗಳನ್ನು ಪೂರೈಸಲು ಮತ್ತು ರಕ್ಷಿಸುವವರನ್ನು ಗೌರವಿಸಲು ಅವರು ಪಂಚ ಪ್ರಾಣದ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ರಾಷ್ಟ್ರ ಪ್ರತಿಜ್ಞೆಯನ್ನು ತೆಗೆದುಕೊಂಡ ನಂತರ, ಭಾಗವಹಿಸುವಿಕೆಯ ಡಿಜಿಟಲ್ ಪ್ರಮಾಣಪತ್ರವನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಬಹುದು. 

ಕಳೆದ ವರ್ಷ, “ಹರ್ ಘರ್ ತಿರಂಗ” ಕಾರ್ಯಕ್ರಮವು ಎಲ್ಲರ ಭಾಗವಹಿಸುವಿಕೆಯಿಂದಾಗಿ ದೊಡ್ಡ ಯಶಸ್ಸು ಕಂಡಿತು. ಈ ವರ್ಷವೂ ಹರ್ ಘರ್ ತಿರಂಗಾವನ್ನು 2023 ಆಗಸ್ಟ್ 13 ರಿಂದ 15 ರವರೆಗೆ ಆಚರಿಸಲಾಗುತ್ತದೆ. ಭಾರತೀಯರು ಎಲ್ಲೆಡೆ ರಾಷ್ಟ್ರಧ್ವಜವನ್ನು ಹಾರಿಸಬಹುದು, ತಿರಂಗದೊಂದಿಗೆ ಸೆಲ್ಫಿ ಕ್ಲಿಕ್ ಮಾಡಬಹುದು ಮತ್ತು ಹರ್ ಘರ್ ತಿರಂಗ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬಹುದು. (hargartiranga.com).

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಮೀತಾ ರಾಜೀವ್ ಲೋಚನ್ ಮಾತನಾಡಿ  ರಾಷ್ಟ್ರವ್ಯಾಪಿ ಅಭಿಯಾನದ ವಿವರಗಳನ್ನು https://yuva.gov.in/meri_maati_mera_desh ಪೋರ್ಟಲ್ನಲ್ಲಿ ಪ್ರವೇಶಿಸಬಹುದು ಎಂದು ಮಾಹಿತಿ ನೀಡಿದರು. 

ಪೋರ್ಟಲ್ನಲ್ಲಿ ಮೇರಿ ಮಟ್ಟಿ ಮೇರಾ ದೇಶ್ ಅಭಿಯಾನದಡಿಯಲ್ಲಿ ವಿವಿಧ ಚಟುವಟಿಕೆಗಳ ಬಗ್ಗೆ ಸೂಕ್ತ ಮಾಹಿತಿ ಇರುವುದಲ್ಲದೆ, ಯುವಕರು ಈ ವೆಬ್ಸೈಟ್ನಲ್ಲಿ ಸೆಲ್ಫಿ ಮತ್ತು ಸಸಿಗಳನ್ನು ನೆಡುವಂತಹ ತಮ್ಮ ಚಟುವಟಿಕೆಗಳನ್ನು ಅಪ್ಲೋಡ್ ಮಾಡುವ ಮೂಲಕ ಈ ಪೋರ್ಟಲ್ ಮೂಲಕ ಅಭಿಯಾನಕ್ಕೆ ಸೇರಿಕೊಳ್ಳಬಹುದು. ಯುವಜನರು ಉತ್ಸಾಹದಿಂದ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಮತ್ತು ನಮ್ಮ ಬ್ರೇವ್ಹಾರ್ಟ್ಸ್ ಮತ್ತು ನಮ್ಮ ತಾಯಿನಾಡಿಗೆ ಗೌರವ ಸಲ್ಲಿಸಲು ರಾಷ್ಟ್ರವ್ಯಾಪಿ ಪ್ರಯತ್ನದಲ್ಲಿ ತಮ್ಮ ಸುತ್ತಲಿನ ಎಲ್ಲರೂ ತೊಡಗಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು.

ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಶ್ರೀ ಗೌರವ್ ದ್ವಿವೇದಿ ಅವರು ಆಕಾಶವಾಣಿ, ದೂರದರ್ಶನ ಮತ್ತು ಪ್ರಸಾರ ಭಾರತಿಯ ಇತರ ಡಿಜಿಟಲ್ ವೇದಿಕೆಗಳ ಮೂಲಕ ಮೇರಿ ಮಟ್ಟಿ ಮೇರಾ ದೇಶ್ ಅಭಿಯಾನದ ಮಾಧ್ಯಮ ಪ್ರಸಾರದ ವಿವರಗಳನ್ನು ನೀಡಿದರು.

“ಮೇರಿ ಮಟ್ಟಿ ಮೇರಾ ದೇಶ್” ಅಭಿಯಾನವು ಆಗಸ್ಟ್ 9 ರಂದು ಪ್ರಾರಂಭವಾಗಲಿದ್ದು, 15 ಆಗಸ್ಟ್ 2023 ರಂದು ಸ್ವಾತಂತ್ರ್ಯ ದಿನದವರೆಗೆ ನಿಗದಿತ ಕಾರ್ಯಕ್ರಮಗಳೊಂದಿಗೆ. ನಂತರದ ಈವೆಂಟ್ಗಳು 16ನೇ ಆಗಸ್ಟ್, 2023 ರಿಂದ ಬ್ಲಾಕ್, ಮುನ್ಸಿಪಾಲಿಟಿ/ಕಾರ್ಪೊರೇಷನ್ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುತ್ತವೆ. ಸಮಾರೋಪ ಸಮಾರಂಭವನ್ನು 2023 ರ ಆಗಸ್ಟ್ 30 ರಂದು ನವದೆಹಲಿಯ ಕರ್ತವ್ಯ ಪಥದಲ್ಲಿ ಗಣ್ಯರ ಸಮ್ಮುಖದಲ್ಲಿ ನಿಗದಿಪಡಿಸಲಾಗಿದೆ.

****



(Release ID: 1945612) Visitor Counter : 167