ಪ್ರಧಾನ ಮಂತ್ರಿಯವರ ಕಛೇರಿ

ಮಹಾರಾಷ್ಟ್ರದ ಧುಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವ ಕಳೆದುಕೊಂಡವರಿಗೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ


ಪಿಎಂ ಎನ್‌ ಆರ್ ಎಫ್‌ ನಿಂದ ಧನ ಪರಿಹಾರ ಘೋಷಣೆ

Posted On: 04 JUL 2023 9:40PM by PIB Bengaluru

ಮಹಾರಾಷ್ಟ್ರದ ಧುಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರ ಅವಲಂಬಿತರಿಗೆ ಪ್ರಧಾನಮಂತ್ರಿ ಅವರು ಪಿಎಂ ಎನ್.ಆರ್.ಎಫ್‌ ನಿಂದ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ

ಪ್ರಧಾನಮಂತ್ರಿಯವರ ಕಚೇರಿ ತನ್ನ ಟ್ವೀಟ್‌ ನಲ್ಲಿ;

“ಮಹಾರಾಷ್ಟ್ರದ ಧುಲೆಯಲ್ಲಿನ ಅಪಘಾತ ದುಃಖ ತಂದಿದೆ. ಮೃತಪಟ್ಟವರ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡವರು ತ್ವರಿತವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ. ಮೃತಪಟ್ಟವರ ಅವಲಂಬಿತರಿಗೆ ಪಿಎಂ ಎನ್.ಆರ್.ಎಫ್‌ ನಿಂದ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ 50,000 ರೂಪಾಯಿ ನೀಡಲಾಗುವುದು; ಪಿಎಂ@ನರೇಂದ್ರಮೋದಿ” ಎಂದು ಹೇಳಿದೆ.

***



(Release ID: 1937517) Visitor Counter : 99