ಪ್ರಧಾನ ಮಂತ್ರಿಯವರ ಕಛೇರಿ

ಆಪರೇಷನ್ ಗಂಗಾ ಭಾರತದ ಅದಮ್ಯ ಉತ್ಸಾಹದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಿ

Posted On: 17 JUN 2023 3:02PM by PIB Bengaluru

 ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು, ಆಪರೇಷನ್ ಗಂಗಾ ಕುರಿತ ಹೊಸ ಸಾಕ್ಷ್ಯಚಿತ್ರವು ಕಾರ್ಯಾಚರಣೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಅನೇಕ ತಿಳುವಳಿಕೆಗಳನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ:

"ಸವಾಲು ಎಷ್ಟೇ ಕಠಿಣವಾಗಿದ್ದರೂ, ಜನರೊಂದಿಗೆ ನಿಲ್ಲುವ ನಮ್ಮ ದೃಢ ಸಂಕಲ್ಪವನ್ನು, ಆಪರೇಷನ್ ಗಂಗಾ ಸೂಚಿಸುತ್ತದೆ. ಇದು ಭಾರತದ ಅದಮ್ಯ ಉತ್ಸಾಹದ ಮನೋಭಾವವನ್ನು  ಪ್ರತಿಬಿಂಬಿಸುತ್ತದೆ. ಈ ಸಾಕ್ಷ್ಯಚಿತ್ರವು, ಆಪರೇಷನ್ ಗಂಗಾ ಕುರಿತಾಗಿ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ." ಎಂದಿದ್ದಾರೆ.

*****



(Release ID: 1933107) Visitor Counter : 122