ಪ್ರಧಾನ ಮಂತ್ರಿಯವರ ಕಛೇರಿ

ಜಾರ್ಖಂಡ್ ನ ಪತ್ರಾಟುವಿನಲ್ಲಿ ಶುದ್ಧ ನೀರು ಸರಬರಾಜಿನ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 17 MAY 2023 1:35PM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜಾರ್ಖಂಡ್ ನ ಪತ್ರಾಟುವಿನಲ್ಲಿ ಶುದ್ಧ ನೀರು ಪೂರೈಸುವ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ಜಾರ್ಖಂಡ್ ನ ಪತ್ರಾಟುವಿನಲ್ಲಿ  50 ಕೋಟಿ ರೂ. ವೆಚ್ಚದಲ್ಲಿ ಜಲ ಶುದ್ಧೀಕರಣ ಘಟಕ ಮತ್ತು ಜಲ  ಗೋಪುರ ಪೂರ್ಣಗೊಳಿಸಿರುವ ಬಗ್ಗೆ ಹಜಾರಿಬಾಗ್ ನ ಸಂಸತ್ ಸದಸ್ಯ ಶ್ರೀ ಜಯಂತ್ ಸಿನ್ಹಾ ಅವರು ಮಾಡಿದ್ದ ಟ್ವೀಟ್ ಅನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿಯವರು

"ಬಹಳ ಶ್ಲಾಘನೀಯ ಪ್ರಯತ್ನ! ಶುದ್ಧ ನೀರಿನ ಈ ಸೌಲಭ್ಯವು ಜಾರ್ಖಂಡ್ ನ ಪತ್ರಾಟುವಿನ ನಮ್ಮ ತಾಯಂದಿರು ಮತ್ತು ಸಹೋದರಿಯರ ಜೀವನವನ್ನು ಹೆಚ್ಚು ಸುಲಭಗೊಳಿಸಲಿದೆ." (“बहुत ही सराहनीय प्रयास! स्वच्छ पानी की यह सुविधा झारखंड में पतरातू की हमारी माताओं और बहनों के जीवन को बहुत आसान बनाने वाली है।”) ಎಂದು ಟ್ವೀಟ್ ಮಾಡಿದ್ದಾರೆ

 

*****



(Release ID: 1925035) Visitor Counter : 116