ಪ್ರಧಾನ ಮಂತ್ರಿಯವರ ಕಛೇರಿ

​​​​​​​ಖ್ಯಾತ ನಟ ಹಾಗೂ ಮಾಜಿ ಸಂಸದ ಶ್ರೀ ಇನ್ಸೆಂಟ್ ವರೀದ್ ತೆಕ್ಕೆಥಳ ನಿಧನಕ್ಕೆ ಪ್ರಧಾನಿ ಸಂತಾಪ

Posted On: 27 MAR 2023 10:05AM by PIB Bengaluru

ಖ್ಯಾತ ನಟ ಹಾಗೂ ಮಾಜಿ ಲೋಕಸಭಾ ಸದಸ್ಯ ಇನ್ಸೆಂಟ್ ವರೀದ್ ತೆಕ್ಕೆಥಳ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ತೀವ್ರ ಸಂತಾಪ ಸಲ್ಲಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,

"ಖ್ಯಾತ ನಟ ಹಾಗೂ ಮಾಜಿ ಸಂಸದ ಇನ್ಸೆಂಟ್ ವರೀದ್ ತೆಕ್ಕೆಥಳ ಅವರ ಅಗಲಿಕೆಯು ತೀವ್ರ ನೋವು ತಂದಿದೆ. ತಮ್ಮ ಅಭಿನಯ ಹಾಗೂ ಹಾಸ್ಯಗಳಿಂದ ರಂಜಿಸಿದ ಅವರನ್ನು ಪ್ರೇಕ್ಷಕರು ಸದಾ ಕಾಲ ಸ್ಮರಿಸಲಿದ್ದಾರೆ. ಅವರ ಕುಟುಂಬ ವರ್ಗದವರು ಹಾಗೂ ಅಭಿಮಾನಿಗಳಿಗೆ ಸಾಂತ್ವನ ಹೇಳುವ ಜತೆಗೆ ಅಗಲಿದ ಗಣ್ಯರ ಆತ್ಮಕ್ಕೆ ಶಾಂತಿ ಕೋರುತ್ತೇನೆ" ಎಂದು ಸಂತಾಪ ಸೂಚಿಸಿದ್ದಾರೆ.

 

***

 



(Release ID: 1911082) Visitor Counter : 120