ಪ್ರಧಾನ ಮಂತ್ರಿಯವರ ಕಛೇರಿ

ಸಿಕಂದರಾಬಾದ್ ಲೋಕಸಭಾ ಕ್ಷೇತ್ರದಾದ್ಯಂತ ಆಯೋಜಿಸಲಾಗುತ್ತಿರುವ "ಆರೋಗ್ಯಕರ ಮಗು" ಪ್ರದರ್ಶನ ಅಭಿಯಾನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 24 FEB 2023 11:20AM by PIB Bengaluru

ಸಿಕಂದರಾಬಾದ್ ಲೋಕಸಭಾ ಕ್ಷೇತ್ರದಾದ್ಯಂತ ಆಯೋಜಿಸಲಾಗುತ್ತಿರುವ "ಆರೋಗ್ಯಕರ ಮಗು" ಪ್ರದರ್ಶನ ಅಭಿಯಾನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರ ಸರಣಿ ಟ್ವೀಟ್ ಸಂದೇಶಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.  

“ಸಿಕಂದರಾಬಾದ್ ಲೋಕಸಭಾ ಕ್ಷೇತ್ರದ ಪ್ರತಿ ಬಸ್ತಿಯಲ್ಲಿ - ಪ್ರತಿ ವಸಾಹತು ಮತ್ತು ವಸತಿ ಪ್ರದೇಶಗಳಲ್ಲಿ “ಆರೋಗ್ಯಕರ ಮಗು” ಪ್ರದರ್ಶನಕ್ಕಾಗಿ ದಾಖಲಾತಿ ಅರ್ಜಿಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಆರೋಗ್ಯವಂತ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಪ್ರಮಾಣಪತ್ರ ಹಾಗೂ 'ಪೋಷಣ್ ಕಿಟ್'ಗಳನ್ನು ನೀಡಿ ಗೌರವಿಸಲಾಯಿತು” ಎಂದು ಸಚಿವ ಶ್ರೀ ರೆಡ್ಡಿ ಅವರು ಟ್ವೀಟ್ ಸಂದೇಶಗಳ ಮೂಲಕ ತಿಳಿಸಿದ್ದಾರೆ. 

ಕೇಂದ್ರ ಸಚಿವರ ಸರಣಿ ಟ್ವೀಟ್ ಸಂದೇಶಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ಈ ರೀತಿ ಟ್ವೀಟ್ ಮಾಡಿದ್ದಾರೆ;

"ಇದು ಗುರುತಿಸಬಹುದಾದ ಅತ್ಯುತ್ತಮ ಪ್ರಯತ್ನವಾಗಿದೆ, ಇದು ಮಕ್ಕಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ."

*****



(Release ID: 1901966) Visitor Counter : 135