ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಎನ್.ಸಿ. ದೆಬ್ಬರ್ಮಾ ಅವರ ನಿಧನಕ್ಕೆ ಪ್ರಧಾನಮಂತ್ರಿಯವರ ಸಂತಾಪ

Posted On: 01 JAN 2023 7:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತ್ರಿಪುರಾ ಸಚಿವ ಮತ್ತು ರಾಜಕೀಯ ನಾಯಕ ಶ್ರೀ ಎನ್.ಸಿ. ದೆಬ್ಬರ್ಮಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.  

ಈ ಕುರಿತು ಟ್ವೀಟ್ ಮಾಡಿರುವ ಶ್ರೀ ಮೋದಿಯವರು:

"ಶ್ರೀ ಎನ್.ಸಿ. ದೆಬ್ಬರ್ಮಾಜೀ ಅವರನ್ನು ಜನರ ಯೋಗಕ್ಷೇಮಕ್ಕಾಗಿ ಸದಾ ಶ್ರಮಿಸಿದ ಕಠಿಣ ಪರಿಶ್ರಮಿ ತಳಮಟ್ಟದ ನಾಯಕರಾಗಿ ಮುಂದಿನ ತಲೆಮಾರಿನವರು ನೆನಪಿಸಿಕೊಳ್ಳುತ್ತಾರೆ.  ಅವರು ತ್ರಿಪುರಾದ ಪ್ರಗತಿಗೆ ಶ್ರೀಮಂತ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬ ಮತ್ತು ಅವರ ಬೆಂಬಲಿಗರಿಗೆ ಸಂತಾಪಗಳನ್ನು ಸೂಚಿಸಲು ಬಯಸುತ್ತೇನೆ. ಓಂ ಶಾಂತಿ."

***



(Release ID: 1887926) Visitor Counter : 118