ಪ್ರಧಾನ ಮಂತ್ರಿಯವರ ಕಛೇರಿ

ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಕೇಂದ್ರ ಸಚಿವ ಪ್ರೊಫೆಸರ್ ವೈ.ಕೆ.ಅಲಾಘ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 06 DEC 2022 8:26PM by PIB Bengaluru

ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಕೇಂದ್ರದ ಮಾಜಿ ಸಚಿವ ಪ್ರೊಫೆಸರ್ ವೈ ಕೆ ಅಲಾಘ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಟ್ವೀಟ್ ಸಂದೇಶ ನೀಡಿದ್ದಾರೆ.

"ಪ್ರೊಫೆಸರ್ ವೈ.ಕೆ. ಅಲಾಘ್ ಅವರು ಗ್ರಾಮೀಣಾಭಿವೃದ್ಧಿ, ಪರಿಸರ ಮತ್ತು ಅರ್ಥಶಾಸ್ತ್ರದ ಬಗ್ಗೆ ಅತೀವ್ರ ಆಸಕ್ತಿ ಹೊಂದಿದ್ದರು ಮತ್ತು ಉತ್ಸುಕರಾಗಿದ್ದರು. ಸಾರ್ವಜನಿಕ ನೀತಿಯ ವಿವಿಧ ಅಂಶಗಳ ಬಗ್ಗೆ, ವಿಶೇಷವಾಗಿ ಗಮನ ಹರಿಸಿದ್ದರು, ಅವರ ನಿಧನದಿಂದ ತುಂಬಾ  ನೋವಾಗಿದೆ. ನಾನು ಅವರೊಂದಿಗೆ ನಡೆಸಿದ ಹಲವು ಸಮಾಲೋಚನೆಗಳನ್ನು ಇಂದಿಗೂ ಸ್ಮರಿಸುತ್ತೇನೆ ಮತ್ತು ಗೌರವಿಸುತ್ತೇನೆ. ಅವರ ಕುಟುಂಬ ಸದಸ್ಯರು ಮತ್ತು ಬಂಧು ಬಳಗದವರಿಗೆ ಈ ದುಃಖದ ಸಮಯದಲ್ಲಿ ಸಾಂತ್ವನ ತಿಳಿಸುತ್ತೇನೆ. ಅವರೊಂದಿಗೆ ನಾವಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ.  ಓಂ ಶಾಂತಿ"

***



(Release ID: 1881683) Visitor Counter : 86