ಪ್ರಧಾನ ಮಂತ್ರಿಯವರ ಕಛೇರಿ

ತಮಿಳಿನ ಹೆಸರಾಂತ ಲೇಖಕ ತಿರು ಅಳಾ ವಲ್ಲಿಯಪ್ಪ ಅವರಿಗೆ ಅವರ ಜನ್ಮ ಶತಮಾನೋತ್ಸವದಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

Posted On: 07 NOV 2022 10:55AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳಿನ ಖ್ಯಾತ ಬರಹಗಾರ ತಿರು ಅಳಾ ವಲ್ಲಿಯಪ್ಪ ಅವರಿಗೆ ಅವರ ಜನ್ಮ ಶತಮಾನೋತ್ಸವದಂದು ಗೌರವ ನಮನ ಸಲ್ಲಿಸಿದ್ದಾರೆ.

ಈ ಕುರಿತು ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ. 

"ತಿರು ಅಳಾ ವಲ್ಲಿಯಪ್ಪ ಅವರ ಜನ್ಮಶತಮಾನೋತ್ಸವದಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ಅತ್ಯುತ್ತಮ ಬರವಣಿಗೆ ಮತ್ತು ಕಾವ್ಯಕ್ಕಾಗಿ ಮಾತ್ರವಲ್ಲದೆ ಮಕ್ಕಳಲ್ಲಿ ಇತಿಹಾಸ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಜನಪ್ರಿಯಗೊಳಿಸುವ ಅವರ ಪ್ರಯತ್ನಗಳಿಗಾಗಿ ಅವರನ್ನು ಸ್ಮರಿಸುತ್ತೇನೆ. ಅವರ ಪ್ರಯತ್ನಗಳು ಇಂದಿಗೂ ಹಲವಾರು ಜನರಿಗೆ ಸ್ಫೂರ್ತಿ ನೀಡುತ್ತಿವೆ." ಎಂದು ಪ್ರಧಾನಿ ಟ್ವೀಟ್ ನಲ್ಲಿ ಹೇಳಿದ್ದಾರೆ.

***



(Release ID: 1874181) Visitor Counter : 125