ಪ್ರಧಾನ ಮಂತ್ರಿಯವರ ಕಛೇರಿ

ಕಾರ್ಗಿಲ್ ವಿಜಯ್ ದಿನದ ಅಂಗವಾಗಿ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

Posted On: 26 JUL 2022 9:18AM by PIB Bengaluru

ನಮ್ಮ ರಾಷ್ಟ್ರವನ್ನು ರಕ್ಷಿಸಲು ಕಾರ್ಗಿಲ್‌ ನಲ್ಲಿ ಧೈರ್ಯದಿಂದ ಹೋರಾಡಿದ ಪರಾಕ್ರಮಿಗಳ ಪರಮೊಚ್ಚ ತ್ಯಾಗಕ್ಕಾಗಿ ಎಲ್ಲ ವೀರ ಯೋಧರಿಗೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಾರ್ಗಿಲ್ ವಿಜಯ್ ದಿನದಂದು ಗೌರವ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಕಾರ್ಗಿಲ್ ವಿಜಯ್ ದಿನವು ತಾಯಿ ಭಾರತಿಯ ಹೆಮ್ಮೆ ಮತ್ತು ವೈಭವದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ಮಾತೃಭೂಮಿಯ ರಕ್ಷಣೆಯಲ್ಲಿ ಶೌರ್ಯವನ್ನು ಪ್ರದರ್ಶಿಸಿದ ದೇಶದ ಎಲ್ಲಾ ವೀರ ಪುತ್ರರಿಗೆ ನನ್ನ ವಿನಮ್ರ ನಮನಗಳು. ಜೈ ಹಿಂದ್!’’.

 

*********



(Release ID: 1844850) Visitor Counter : 147