ಪ್ರಧಾನ ಮಂತ್ರಿಯವರ ಕಛೇರಿ

ಪರೋಪಕಾರಿ ಮತ್ತು ಮಾನವತಾವಾದಿ ಬಿಲ್ಕಿಸ್ ಈಧಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ

Posted On: 16 APR 2022 6:40PM by PIB Bengaluru

 ಪರೋಪಕಾರಿ ಮತ್ತು ಮಾನವತಾವಾದಿ ಬಿಲ್ಕಿಸ್ ಈಧಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾನವೀಯ ಕೆಲಸಕ್ಕಾಗಿ ಈಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದು, ಇವರ ಸೇವೆ ಜಗತ್ತಿನಾದ್ಯಂತ ಮುಟ್ಟಿದೆ ಎಂದು ಹೇಳಿದ್ದಾರೆ.

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು,  

“ಬಲ್ಕಿಸ್ ಈಧಿ ನಿಧನಕ್ಕೆ ನನ್ನ ಪ್ರಾಮಾಣಿಕ ಸಂತಾಪಗಳು. ಮಾನವೀಯ ಕೆಲಸಕ್ಕಾಗಿ ಈಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದು, ಇವರ ಕರ್ತವ್ಯ ಜಗತ್ತಿನಾದ್ಯಂತ ಮುಟ್ಟಿದೆ. ಭಾರತದ ಜನತೆ ಕೂಡ ಈಕೆಯನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹೇಳಿದ್ದಾರೆ.

 

*****



(Release ID: 1817422) Visitor Counter : 137