ಕೃಷಿ ಸಚಿವಾಲಯ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್ಬಿವೈ) ತನ್ನ 7ನೇ ವರ್ಷದ ಅನುಷ್ಠಾನಕ್ಕೆ ಪ್ರವೇಶಿಸಿದೆ
ಪಿಎಂಎಫ್ಬಿವೈ ಅಡಿಯಲ್ಲಿ36 ಕೋಟಿಗೂ ಹೆಚ್ಚು ರೈತರ ಅರ್ಜಿಗಳನ್ನು ವಿಮೆ ಮಾಡಲಾಗಿದೆ
ಯೋಜನೆಯಡಿ ಈಗಾಗಲೇ ಸುಮಾರು 1,07,059 ಕೋಟಿ ರೂ ಕ್ಲೈಮ್(ಹಕ್ಕಿನ ಹಣ) ಗಳನ್ನು ಪಾವತಿಸಲಾಗಿದೆ
‘ಮೇರಿ ಪಾಲಿಸಿ ಮೇರೆ ಹಾತ್’ - ರೈತರಿಗೆ ಬೆಳೆ ವಿಮಾ ಪಾಲಿಸಿಗಳನ್ನು ತಲುಪಿಸಲು ಮನೆ ಬಾಗಿಲಿಗೆ ವಿತರಣಾ ಅಭಿಯಾನವನ್ನು ಪ್ರಾರಂಭಿಸಲಾಗುವುದು
ಯೋಜನೆಗೆ ದಾಖಲಾದ ಸುಮಾರು ಶೇ.85 ರಷ್ಟು ರೈತರಲ್ಲಿಸಣ್ಣ ಮತ್ತು ಅತಿ ಸಣ್ಣ ರೈತರು
प्रविष्टि तिथि:
18 FEB 2022 4:45PM by PIB Bengaluru
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್ಬಿವೈ) ಮುಂಬರುವ ಖಾರಿಫ್ 2022 ಋುತುವಿನೊಂದಿಗೆ ತನ್ನ 7ನೇ ವರ್ಷದ ಅನುಷ್ಠಾನವನ್ನು ಯಶಸ್ವಿಯಾಗಿ ಪ್ರವೇಶಿಸಿದೆ. 2016ರ ಫೆಬ್ರವರಿ 18ರಂದು ಮಧ್ಯಪ್ರದೇಶದ ಸೆಹೋರ್ನಲ್ಲಿಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ ಘೋಷಣೆಯಿಂದ 6 ವರ್ಷಗಳ ಅನುಷ್ಠಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಭಾರತ ಸರ್ಕಾರದ ಪ್ರಮುಖ ಯೋಜನೆಯಾದ ಪಿಎಂಎಫ್ಬಿವೈ, ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟ/ಹಾನಿಯನ್ನು ಅನುಭವಿಸುವ ರೈತರಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ. ಪಿಎಂಎಫ್ಬಿವೈ ಅಡಿಯಲ್ಲಿ36 ಕೋಟಿಗೂ ಹೆಚ್ಚು ರೈತರ ಅರ್ಜಿಗಳನ್ನು ವಿಮೆ ಮಾಡಲಾಗಿದ್ದು, 2022ರ ಫೆಬ್ರವರಿ 4ರವರೆಗೆ 1,07,059 ಕೋಟಿ ರೂಪಾಯಿಗೂ ಹೆಚ್ಚು ಕ್ಲೈಮ್(ಹಕ್ಕಿನ ಹಣ) ಗಳನ್ನು ಈಗಾಗಲೇ ಯೋಜನೆಯ ಅಡಿಯಲ್ಲಿ ಪಾವತಿಸಲಾಗಿದೆ.

6 ವರ್ಷಗಳ ಹಿಂದೆ ಪ್ರಾರಂಭಿಸಲಾದ ಈ ಯೋಜನೆಯು 2020ರಲ್ಲಿ ರೈತರ ಸ್ವಯಂಪ್ರೇರಿತ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ. ಯಾವುದೇ ಘಟನೆ ಸಂಭವಿಸಿದ 72 ಗಂಟೆಗಳ ಒಳಗೆ ಬೆಳೆ ನಷ್ಟವನ್ನು ವರದಿ ಮಾಡಲು ಇದು ರೈತರಿಗೆ ಅನುಕೂಲಕರವಾಗಿದೆ - ಬೆಳೆ ವಿಮಾ ಅಪ್ಲಿಕೇಶನ್, ಸಿಎಸ್ಸಿ ಕೇಂದ್ರ ಅಥವಾ ಹತ್ತಿರದ ಕೃಷಿ ಅಧಿಕಾರಿಯ ಮೂಲಕ, ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಕ್ಲೈಮ್(ಹಕ್ಕಿನ ಹಣ) ಪ್ರಯೋಜನವನ್ನು ವಿದ್ಯುನ್ಮಾನವಾಗಿ ವರ್ಗಾಯಿಸಲಾಗುತ್ತದೆ.
ರೈತರ ಸುಲಭ ದಾಖಲಾತಿಗಾಗಿ ಪಿಎಂಎಫ್ಬಿವೈಯ ರಾಷ್ಟ್ರೀಯ ಬೆಳೆ ವಿಮಾ ಪೋರ್ಟಲ್ (ಎನ್ಸಿಐಪಿ), ಬೆಳೆ ವಿಮೆ ಮೊಬೈಲ್ ಅಪ್ಲಿಕೇಶನ್ನೊಂದಿಗೆ ಭೂ ದಾಖಲೆಗಳ ಏಕೀಕರಣ, ಎನ್ಸಿಐಪಿ ಮೂಲಕ ರೈತ ಪ್ರೀಮಿಯಂ ರವಾನೆ, ಸಬ್ಸಿಡಿ ಬಿಡುಗಡೆ ಮಾಡ್ಯೂಲ್ ಮತ್ತು ಎನ್ಸಿಐಪಿ ಮೂಲಕ ಕ್ಲೈಮ್ ಬಿಡುಗಡೆ ಮಾಡ್ಯೂಲ್ ಈ ಯೋಜನೆಯ ಕೆಲವು ಪ್ರಮುಖ ಲಕ್ಷಣಗಳಾಗಿವೆ.

ರಾಜ್ಯ/ ಜಿಲ್ಲಾ ಮಟ್ಟದ ಕುಂದುಕೊರತೆ ಸಮಿತಿಯ ಮೂಲಕ, ಈ ಯೋಜನೆಯು ರೈತರು ತಮ್ಮ ಕುಂದುಕೊರತೆಗಳನ್ನು ತಳಮಟ್ಟದಲ್ಲಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಎರಡು ಬಾರಿ ವಾರ್ಷಿಕವಾಗಿ ಆಚರಿಸಲಾಗುವ ಬೆಳೆ ವಿಮಾ ವಾರ, ಪಿಎಂಎಫ್ಬಿವೈ ಪಾಠಶಾಲಾ, ಸಾಮಾಜಿಕ ಮಾಧ್ಯಮ ಪ್ರಚಾರಗಳು, ಟೋಲ್-ಫ್ರೀ ಸಹಾಯವಾಣಿ ಮತ್ತು ಇಮೇಲ್ ಸಂವಹನಗಳಂತಹ ಐಇಸಿ ಚಟುವಟಿಕೆಗಳ ಮೂಲಕ ರೈತರ ಕುಂದುಕೊರತೆಗಳನ್ನು ಅಂಗೀಕರಿಸುವುದು ಮತ್ತು ಪರಿಹರಿಸುವುದನ್ನು ಇದು ಒಳಗೊಂಡಿದೆ.
ಯೋಜನೆಗೆ ದಾಖಲಾದ ಸುಮಾರು ಶೇ. 85 ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರುವುದರಿಂದ ಈ ಯೋಜನೆಯು ಅತ್ಯಂತ ದುರ್ಬಲ ರೈತರಿಗೆ ಆರ್ಥಿಕ ನೆರವು ನೀಡಲು ಸಾಧ್ಯವಾಗಿದೆ. ಕೇಂದ್ರದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇತ್ತೀಚಿನ 2022-23ರ ಬಜೆಟ್ ಭಾಷಣದ ಬೆಳೆ ವಿಮೆಗಾಗಿ ಡ್ರೋನ್ಗಳ ಬಳಕೆಯ ಕುರಿತು ಘೋಷಿಸಿರುವುದು ನೆಲದ ಮೇಲೆ ಯೋಜನೆಯನ್ನು ಸುಗಮವಾಗಿ ಅನುಷ್ಠಾನಗೊಳಿಸಲು ತಂತ್ರಜ್ಞಾನದ ಏಕೀಕರಣವನ್ನು ಮತ್ತಷ್ಟು ಬಲಪಡಿಸುತ್ತಾರೆ.
ಈ ಯೋಜನೆಯು ಎಲ್ಲಾ ಅನುಷ್ಠಾನದ ರಾಜ್ಯಗಳಲ್ಲಿ ರೈತರಿಗೆ ಬೆಳೆ ವಿಮಾ ಪಾಲಿಸಿಗಳನ್ನು ‘ಮೇರಿ ಪಾಲಿಸಿ ಮೇರೆ ಹಾತ್’ ತಲುಪಿಸಲು ಮನೆ ಬಾಗಿಲಿಗೆ ವಿತರಣಾ ಚಾಲನೆಯನ್ನು ಪ್ರಾರಂಭಿಸುತ್ತದೆ ಎಂದು ಗಮನಿಸಬೇಕಾದ ಅಂಶವಾಗಿದೆ. ಎಲ್ಲಾ ರೈತರು ತಮ್ಮ ನೀತಿಗಳು, ಭೂ ದಾಖಲೆಗಳು, ಹಕ್ಕು ಪ್ರಕ್ರಿಯೆ ಮತ್ತು ಪಿಎಂಎಫ್ಬಿವೈ ಅಡಿಯಲ್ಲಿ ಕುಂದುಕೊರತೆ ಪರಿಹಾರದ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದಿದ್ದಾರೆ ಮತ್ತು ಸುಸಜ್ಜಿತರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಅಭಿಯಾನದ ಗುರಿಯನ್ನು ಹೊಂದಿದೆ.
***
(रिलीज़ आईडी: 1799427)
आगंतुक पटल : 549
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam