ಗೃಹ ವ್ಯವಹಾರಗಳ ಸಚಿವಾಲಯ

ಭಾರತದ ಮಾಜಿ ರಾಷ್ಟ್ರಪತಿ ಭಾರತರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ


“ಪ್ರಣಬ್ ದಾ ಅವರು ದೇಶಕ್ಕೆ ಸಂಪೂರ್ಣ ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಿದ ಅತ್ಯಂತ ಅನುಭವಿ ನಾಯಕರಾಗಿದ್ದರು; ಅವರ ವಿಶಿಷ್ಠ ವೃತ್ತಿ ಜೀವನ ಇಡೀ ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ”

“ಪ್ರಣಬ್ ದಾ ಅವರ ಜೀವನ ಅವರ ನಿಸ್ವಾರ್ಥ ಸೇವೆ ಮತ್ತು ನಮ್ಮ ತಾಯ್ನಾಡಿಗೆ ನೀಡಿದ ಅನನ್ಯ ಕೊಡುಗೆ ಸದಾ ಸ್ಮರಣೀಯ. ಅವರ ನಿಧನದಿಂದ ಭಾರತೀಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ.”

Posted On: 31 AUG 2020 7:34PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಭಾರತದ ಮಾಜಿ ರಾಷ್ಟ್ರಪತಿ ಭಾರತರತ್ನ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಟ್ವೀಟ್ ನಲ್ಲಿ ಅಮಿತ್ ಶಾ ಅವರುಭಾರತದ ಮಾಜಿ ರಾಷ್ಟ್ರಪತಿ ಭಾರತರತ್ನ ಪ್ರಣಬ್ ಮುಖರ್ಜಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದಾನೆ,’’ ಎಂದು ತಿಳಿಸಿದ್ದಾರೆ.

ಅತ್ಯುನ್ನತ ಶ್ರದ್ಧೆಯೊಂದಿಗೆ ದೇಶ ಸೇವೆ ಮಾಡಿದ ಅವರು ಅಪಾರ ಅನುಭವ ಹೊಂದಿದ್ದ ನಾಯಕರಾಗಿದ್ದರು. ಪ್ರಣಬ್ ದಾ ಅವರ ವಿಶಿಷ್ಟ ವೃತ್ತಿ ಜೀವನ ಇಡೀ ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆಎಂದು ಗೃಹ ಸಚಿವರು ತಿಳಿಸಿದ್ದಾರೆ.

ಪ್ರಣಬ್ ದಾ ಅವರ ಜೀವನ ಅವರ ನಿಸ್ವರ್ಥ ಸೇವೆಗಾಗಿ ಮತ್ತು ತಾಯ್ನಾಡಿಗೆ ಅವರು ನೀಡಿದ ಮರೆಯಲಾರದ ಕೊಡುಗೆಗಾಗಿ ಸದಾ ಸ್ಮರಿಸಲ್ಪಡುತ್ತದೆ. ಅವರ ಅಗಲಿಕೆಯಿಂದ ದೇಶದ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದೊಂದಿಗೆ ಮತ್ತು ಅವರ ಅನುಯಾಯಿಗಳೊಂದಿಗೆ ನನ್ನ ಪ್ರಾಮಾಣಿಕ ಸಂತಾಪವಿದೆ. ಓಂ. ಶಾಂತಿಎಂದು ಶ್ರೀ ಅಮಿತ್ ಶಾ ಅವರು ತಿಳಿಸಿದ್ದಾರೆ.

***



(Release ID: 1650139) Visitor Counter : 225