ಪ್ರಧಾನ ಮಂತ್ರಿಯವರ ಕಛೇರಿ

ಅರುಣ್ ಜೇಟ್ಲಿ ಅವರ ಮೊದಲ ಪುಣ್ಯತಿಥಿ: ಪ್ರಧಾನಿ ಸ್ಮರಣೆ

ಪ್ರಕಟಣಾ ದಿನಾಂಕ: 24 AUG 2020 11:59AM by PIB Bengaluru

ಅರುಣ್ ಜೇಟ್ಲಿ ಅವರ ಮೊದಲ ಪುಣ್ಯತಿಥಿಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೇಟ್ಲಿ ಅವರನ್ನು ಸ್ಮರಿಸಿದ್ದಾರೆ.

ಪ್ರಧಾನಮಂತ್ರಿ ತಮ್ಮ ಟ್ವೀಟ್ ಸಂದೇಶದಲ್ಲಿ “ಕಳೆದ ವರ್ಷ ಇದೇ ದಿನ, ನಾವು ಶ್ರೀ ಅರುಣ್ ಜೇಟ್ಲಿ ಅವರನ್ನು ಕಳೆದುಕೊಂಡೆವು,  ಮಿತ್ರನನ್ನು ಕಳೆದುಕೊಂಡಿರುವುದು, ನನ್ನನ್ನು ತುಂಬಾ ಕಾಡುತ್ತಿದೆ.

ಭಾರತಕ್ಕೆ ಅರುಣ್ ಜೇಟ್ಲಿ ಅವರ ಪರಿಶ್ರಮದ ಸೇವೆ, ವಿಡಂಬನೆ, ವಿವೇಕ ಮತ್ತು ಕಾನೂನು ಪಾಂಡಿತ್ಯ ಹಾಗೂ ಆತ್ಮೀಯ ವ್ಯಕ್ತಿತ್ವ ದಂತಕತೆಯಾಗಿದೆ’’ಎಂದು ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1648209) ವಿಸಿಟರ್ ಕೌಂಟರ್ : 247