ಪ್ರಧಾನ ಮಂತ್ರಿಯವರ ಕಛೇರಿ

ಹೆಸರಾಂತ ರಂಗಕರ್ಮಿ ಇಬ್ರಾಹಿಂ ಅಲ್ ಖಾಜಿ ನಿಧನಕ್ಕೆ ಪ್ರಧಾನಿ ಸಂತಾಪ

Posted On: 04 AUG 2020 6:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಂಗಭೂಮಿಯ ಹೆಸರಾಂತ ರಂಗಕರ್ಮಿ ಇಬ್ರಾಹಿಂ ಅಲ್ ಖಾಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಶ್ರೀ ಇಬ್ರಾಹಿಂ ಅಲ್ ಖಾಜಿ ಅವರು ರಂಗಭೂಮಿಯನ್ನು ಜನಪ್ರಿಯಗೊಳಿಸಲು ಮತ್ತು ದೇಶಾದ್ಯಂತ ಲಭ್ಯವಾಗಿಸಲು ಮಾಡಿದ ಪ್ರಯತ್ನಗಳಿಂದ ಸ್ಮರಿಸಲ್ಪಡುತ್ತಾರೆ. ಕಲೆ ಮತ್ತು ಸಾಂಸ್ಕೃತಿಕ ಜಗತ್ತಿಗೆ ಅವರು ನೀಡಿದ ಕೊಡುಗೆಗಳು ಗಣನೀಯ. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ನನ್ನ ಸಂವೇದನೆ ಇದೆ. ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ." ಎಂದು ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.

***



(Release ID: 1643485) Visitor Counter : 215