ಪಂಚಾಯತ್ ರಾಜ್ ಸಚಿವಾಲಯ

ದೇಶಾದ್ಯಂತ  ಕೋವಿಡ್ – 19 ಸಾಂಕ್ರಾಮಿಕ ರೋಗ ಪರೀಕ್ಷಿಸಲು ದೇಶದ ಎಲ್ಲ ಜಿಲ್ಲಾಡಳಿತಗಳು ಮತ್ತು ಗ್ರಾಮ ಪಂಚಾಯ್ತಿಗಳು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ

Posted On: 20 APR 2020 12:57PM by PIB Bengaluru

ದೇಶಾದ್ಯಂತ  ಕೋವಿಡ್ – 19 ಸಾಂಕ್ರಾಮಿಕ ರೋಗ ಪರೀಕ್ಷಿಸಲು ದೇಶದ ಎಲ್ಲ ಜಿಲ್ಲಾಡಳಿತಗಳು ಮತ್ತು ಗ್ರಾಮ ಪಂಚಾಯ್ತಿಗಳು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ

ಸಲಹಾ ಸಮೀತಿಗಳ ರಚನೆ; ರೋಗದ ಕುರಿತು ಜಾಗೃತಿ ಮೂಡಿಸುವ ಗೋಡೆ ಬರಹಗಳು, ಸ್ಥಳೀಯವಾಗಿ ಮಾಸ್ಕಗಳ ತಯಾರಿಕೆ ಮತ್ತು ವಿತರಣೆ, ಅಗತ್ಯವಿರುವವರಿಗೆ ಉಚಿತ ಊಟ ಮತ್ತು ಪಡಿತರ ವಿತರಣೆ ಮತ್ತು ಸಾರ್ವಜನಿಕ ಸ್ಥಳಗಳ ನೈರ್ಮಲ್ಯೀಕರಣ ಮುಂತಾದ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ
 

ದೇಶಾದ್ಯಂತ ಹರಡಿರುವ ಕೋವಿಡ್ – 19 ಸಾಂಕ್ರಾಮಿಕ ರೋಗ ಪರೀಕ್ಷಿಸಲು ದೇಶದ ಎಲ್ಲ ಜಿಲ್ಲಾಡಳಿತಗಳು ಮತ್ತು ಗ್ರಾಮ ಪಂಚಾಯತಿಗಳು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ. ಉತ್ತಮ ಅಭ್ಯಾಸಗಳ ಉದಾಹರಣೆಗಳಾಗಿ ಇತರರು ಪಾಲಿಸಬಹುದಾದ ಕೆಲವು ಉಪಕ್ರಮಗಳೆಂದರೆ –

  • ಮಧ್ಯ ಪ್ರದೇಶ: ಆಜೀವಿಕಾ ಯೋಜನೆ, ಗ್ರಾಮಪಂಚಾಯ್ತಿಗಳಿಗೆ ವಿತರಿಸಲೆಂದು ಮಾಸ್ಕ್ ಗಳನ್ನು ಹೊಲಿಯುವ ಕಾರ್ಯದಲ್ಲಿ ರಾಜಘಡ ಜಿಲ್ಲೆ ತೊಡಗಿಸಿಕೊಂಡಿದೆ. ಭೋಪಾಲ್ ಜಿಲ್ಲೆಯ ಹುಜೂರ್ ಹೋಬಳಿಯ ಆಚಾರ್ ಪುರ ಗ್ರಾಮ ಪಂಚಾಯ್ತಿಯ ಸರಪಂಚರು ಗ್ರಾಮಸ್ಥರಿಗೆ ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ನರಸಿಂಗ್ ಪುರ ಜಿಲ್ಲೆಯ ಚಿಚೋಲಿ ಬ್ಲಾಕ್ ನ ಖಮರಿಯಾ ಪಂಚಾಯತ್ ನಲ್ಲಿ ಗೋಡೆಗಳ ಮೇಲೆ ವರ್ಣಚಿತ್ರ ಬಿಡಿಸಲಾಗಿದೆ.

 

https://ci5.googleusercontent.com/proxy/tI9NoQtB_gwkm3Xvppi1hrSSF0z159H_85J1G0vGykpG31Og-3H2UvJnT_DOOivwiloy7dDSqcFB9lLmhNVNJ7Ke_zlyoDMfYYUyCjSngpfz6TzoJOZS=s0-d-e1-ft#https://static.pib.gov.in/WriteReadData/userfiles/image/image001NQN8.png https://ci5.googleusercontent.com/proxy/FGoIqgW1hfY71B2rbIrYRXVXftUpNCTt9Ej291Xa4ZYU3POsjHnUt53GKXu6glwZgT6YqyZOQzB_xoklxYtzN3XGVyIoYLqKgl78viG295bw28ircPQw=s0-d-e1-ft#https://static.pib.gov.in/WriteReadData/userfiles/image/image002Z2Q2.png

https://ci5.googleusercontent.com/proxy/Yk2yEkSoqTgPymri4pycW6NA8B0jJ4syxMfkdmVAcZiaPqkMNhSD8rBzV-YjOqFYfelavHm_O6TbGbf01vy_lKwE5OppTloQf1F2tY47MplRDjjEcLzT=s0-d-e1-ft#https://static.pib.gov.in/WriteReadData/userfiles/image/image00391CA.jpg 

 

  • ತಮಿಳು ನಾಡು : ಪಂಚಾಯತ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತಿರುಪ್ಪುರ್ ಬ್ಲಾಕ್ ನ ಮಂಗಳಂ ಪಂಚಾಯತ್ ಪ್ರದೇಶದಲ್ಲಿ ನೈರ್ಮಲ್ಯೀಕರಣ ಮಾಡಲಾಗುತ್ತಿದೆ.

https://ci4.googleusercontent.com/proxy/7MnmurWf0ppWvWCeaf1yKs3fjtW3yJQjYQ4eVipCmEQMzYrI0O3h7SSdzTpEKVFffSDgoo_BCfrZkv7FxTpDfvHY-92jTGA-ODyHWb_FIEPBwyKm5YCN=s0-d-e1-ft#https://static.pib.gov.in/WriteReadData/userfiles/image/image005SXR0.jpg https://ci4.googleusercontent.com/proxy/9Dbb-CbeEp7soYSVWY2PArrAwDDv76PHOrLr2TtCLp3LXboVgJ-w7p5x5hgRzfM2xXqSESOS7HCDU_srznfRICfL23A2Kh1N0SaTqlnnGaH6Ba2PJVQ6=s0-d-e1-ft#https://static.pib.gov.in/WriteReadData/userfiles/image/image006H6WP.jpg

https://ci4.googleusercontent.com/proxy/_3gRRQ935noP757xW_BZV-X4EHI-t9tINl4aprEbfJVPbkmfWpD1LCoJPszFeNIrJeE3Pv82_7_bFrmv-AfbFHDMHqGsCFVRR3RWMaU4qc0FOHVatKXy=s0-d-e1-ft#https://static.pib.gov.in/WriteReadData/userfiles/image/image0073YL9.jpg

  • ನಾಗಾಲ್ಯಾಂಡ್ : ರಾಜ್ಯ ಸರ್ಕಾರದ ಮುಖ್ಯ ಕಾರ್ದರ್ಶಿ ಶ್ರೀ ತೆಮ್ಜೆನ್ ಟಾಯ್(ಐಎಎಸ್) ಅವರ ನೇತೃತ್ವದಲ್ಲಿ 17 ಮಾರ್ಚ್ 2020 ರಂದು ಕೋವಿಡ್ – 19 ಬಗ್ಗೆ ವಿಶೇಷ ಸಲಹಾ ಗುಂಪನ್ನು (ಎಸ್ ಎ ಜಿ) ರಚಿಸಲಾಗಿದೆ ಮತ್ತು ಇದರ ಮೂಲಕ ನಾಗಾಲ್ಯಾಂಡ್ ರಾಜ್ಯದಲಲ್ಇ ಕೋವಿಡ್ – 19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಿದ್ಧತೆ ಮತ್ತು ಸರ್ಕಾರಕ್ಕೆ ಸಲಹೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.

ದೀಮಾಪುರ್ ನ ಕುಬುಟು ಬ್ಲಾಕ್ ನ ಸೊಝುಕು ಗ್ರಾಮದಲ್ಲಿ ಎಸ್ ಹೆಚ್ ಜಿ ಕ್ಸಾಕ್ಯೂ ಅವರ ನೇತೃತ್ವದಲ್ಲಿ ವಸತಿ ಇಲ್ಲದ ಜನರಿಗೆ ಗ್ರಾಮ ಮಟ್ಟದಲ್ಲಿ ಆಹಾರವನ್ನು ಬೇಯಿಸಿ ನೀಡಲಾಗುತ್ತಿದೆ ಮತ್ತು ದೀಮಾಪುರ್ ನ ಚುಮುಕೆಡಿಮಾ ಬ್ಲಾಕ್ ನ ಸಿಗ್ನಲ್ ಅಂಗಾಮಿ ಗ್ರಾಮದಲ್ಲಿ ಸ್ಥಳೀಯ ಸಂಸ್ಥೆಯೊಂದು ದಿನಗೂಲಿ ಕಾರ್ಮಿಕರಿಗೆ 10 ಕೆಜಿ ಅಕ್ಕಿಯನ್ನು ವಿತರಿಸುತ್ತಿದೆ. 

***



(Release ID: 1616484) Visitor Counter : 281