ಗೃಹ ವ್ಯವಹಾರಗಳ ಸಚಿವಾಲಯ
ಕೋಲ್ಕತ್ತಾದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರವಾದಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನದಂದು ಅವರ 125 ಅಡಿ ಎತ್ತರದ ಪ್ರತಿಮೆಗೆ ಶಂಕುಸ್ಥಾಪನೆ ನೆರವೇರಿಸುವುದು ಕೇವಲ ಒಂದು ಸ್ಮಾರಕದ ಆರಂಭವನ್ನು ಮಾತ್ರವಲ್ಲದೆ, 'ಸೋನಾರ್ ಬಾಂಗ್ಲಾ' ನಿರ್ಮಿಸುವ ಸಂಕಲ್ಪದ ಆರಂಭವನ್ನು ಸೂಚಿಸುತ್ತದೆ
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಅಭಿನಂದನೆಗಳು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಮೂಲಕ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ "ಏಕ್ ವಿಧಾನ್, ಏಕ್ ಪ್ರಧಾನ್, ಏಕ್ ನಿಶಾನ್" ಸಂಕಲ್ಪವನ್ನು ಈಡೇರಿಸಿದ್ದಾರೆ; ಇಂದು ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಭವ್ಯ ಪ್ರತಿಮೆಯ ಜೊತೆಗೆ, ಭಾರತದ ಭದ್ರತೆಯ ಕುರಿತು ಸಂಶೋಧನೆಗೆ ಮೀಸಲಾದ 'ಶ್ಯಾಮ ಪ್ರಸಾದ್ ಮುಖರ್ಜಿ ಸಂಸ್ಥೆ'ಯನ್ನು ಸಹ ಸ್ಥಾಪಿಸಲಾಗುವುದು
ನಮ್ಮ ಪಕ್ಷದ ರೂಪದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಬಿತ್ತಿದ ಬೀಜವು ಇಂದು ಆಲದ ಮರವಾಗಿ ಬೆಳೆದಿದೆ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಬೇರೂರಿರುವ ಆಧುನಿಕ ಭಾರತವನ್ನು ನಿರ್ಮಿಸುವ ಅವರ ದೃಷ್ಟಿಕೋನವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಾಕಾರಗೊಳ್ಳುತ್ತಿದೆ
ಸ್ವತಂತ್ರ ಭಾರತದ ನೀತಿಗಳು ಭಾರತದ ಸ್ವಂತ ಮಣ್ಣಿನ ಸುಗಂಧದಲ್ಲಿ ಬೇರೂರಿರಬೇಕು ಎಂದು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ನಂಬಿದ್ದರು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆ ದಿಕ್ಕಿನಲ್ಲಿ ಬಲವಾದ ಆರಂಭವನ್ನು ಮಾಡಲಾಗಿದೆ
ಅಪರಾಧಿಗಳನ್ನು ಕಠಿಣವಾಗಿ ಮಟ್ಟಹಾಕುವ ಭರವಸೆಗೆ ಅನುಗುಣವಾಗಿ, ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಪಾಲನೆ (ತಿದ್ದುಪಡಿ) ಮಸೂದೆ, 2026 ಅನ್ನು ಅಂಗೀಕರಿಸಲಾಗಿದೆ ಮತ್ತು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು 'ದುರ್ಗಾ ಸುರಕ್ಷಾ ಸ್ಕ್ವಾಡ್' ಅನ್ನು ರಚಿಸಲಾಗಿದೆ
ಪಶ್ಚಿಮ ಬಂಗಾಳದಲ್ಲಿ ನುಸುಳುಕೋರರನ್ನು ಗುರುತಿಸಿ ಗಡೀಪಾರು ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ, ಭಾರತವನ್ನು ಇನ್ನಷ್ಟು ಸುರಕ್ಷಿತವಾಗಿಸಲು ನಾವು ಪ್ರತಿಯೊಬ್ಬ ನುಸುಳುಕೋರನನ್ನು ಗುರುತಿಸಿ ಹೊರಹಾಕುತ್ತೇವೆ
ಸಾಂಸ್ಕೃತಿಕ ರಾಷ್ಟ್ರೀಯತೆ ಇರಲಿ, ಅಖಂಡ ಭಾರತದ ಸಂಕಲ್ಪವಿರಲಿ ಅಥವಾ ‘ವಿಕಾಸ್ ಭಿ, ವಿರಾಸತ್ ಭಿ’ ಎಂಬ ದೃಷ್ಟಿಕೋನವಿರಲಿ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರೇ ಈ ಎಲ್ಲಾ ರಾಷ್ಟ್ರವಾದಿ ಆದರ್ಶಗಳ ಸಾಮಾನ್ಯ ಮೂಲವಾಗಿದ್ದಾರೆ
ಪಶ್ಚಿಮ ಬಂಗಾಳದಲ್ಲಿ ವರದಿ ಸಲ್ಲಿಕೆಯಾದ ತಕ್ಷಣ ಭ್ರಷ್ಟಾಚಾರದ ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ
प्रविष्टि तिथि:
06 JUL 2026 9:33PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮದಿನೋತ್ಸವದ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅವಧಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಡಿಯೋ ಸಂದೇಶವನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಶ್ರೀ ಶುಭೇಂದು ಅಧಿಕಾರಿ, ಕೇಂದ್ರ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಇತರ ಹಲವು ಗಣ್ಯರು ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಕಾಶ್ಮೀರವನ್ನು ಭಾರತದೊಂದಿಗೆ ಸಂಯೋಜಿಸಲು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಅತ್ಯುನ್ನತ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು. ನೆಹರೂ-ಲಿಯಾಖತ್ ಒಪ್ಪಂದವನ್ನು ಪ್ರತಿಭಟಿಸಿ ಡಾ. ಮುಖರ್ಜಿ ಅವರು ದೇಶದ ಮೊದಲ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು ಎಂದು ಅವರು ನೆನಪಿಸಿಕೊಂಡರು. ಭಾರತದ ನೀತಿಗಳು ದೇಶದ ನೈತಿಕತೆ ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸಬೇಕು ಎಂದು ಡಾ. ಮುಖರ್ಜಿ ದೃಢವಾಗಿ ನಂಬಿದ್ದರು ಎಂದು ಶ್ರೀ ಶಾ ಹೇಳಿದರು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ನಿಧನದ 63 ವರ್ಷಗಳ ನಂತರ, ಅವರ 125 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ಅವರ ಭವ್ಯವಾದ 125 ಅಡಿ ಎತ್ತರದ ಪ್ರತಿಮೆಗೆ ಶಿಲಾನ್ಯಾಸವನ್ನು ನೆರವೇರಿಸಲಾಗಿದೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಡಾ. ಮುಖರ್ಜಿ ಅವರು ಸ್ಥಾಪಿಸಿದ ಮತ್ತು ಅವರ ಸಿದ್ಧಾಂತದಿಂದ ಮಾರ್ಗದರ್ಶನ ಪಡೆದ ಪಕ್ಷವು ಇಂದು ಬಂಗಾಳದಲ್ಲಿ ಸರ್ಕಾರದಲ್ಲಿದ್ದು, ಅವರ ಪರಂಪರೆಗೆ ರಾಜ್ಯದಲ್ಲಿ ಅರ್ಹವಾದ ಗೌರವ ಸಿಗುತ್ತಿದೆ ಎಂದು ಅವರು ಹೇಳಿದರು. ಈ ಸಮಾರಂಭವು ಕೇವಲ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪ್ರತಿಮೆಯ ಶಿಲಾನ್ಯಾಸವಷ್ಟೇ ಅಲ್ಲ, 'ಸೋನಾರ್ ಬಾಂಗ್ಲಾ' ಸಂಕಲ್ಪದ ಈಡೇರಿಕೆಯ ತಳಹದಿಯಾಗಿದೆ ಎಂದು ಶ್ರೀ ಶಾ ಹೇಳಿದರು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಭವ್ಯ ಪ್ರತಿಮೆಯ ಜೊತೆಗೆ, ಭಾರತದ ಭದ್ರತೆಯ ಕುರಿತು ಸಂಶೋಧನೆಗೆ ಮೀಸಲಾದ 'ಶ್ಯಾಮ ಪ್ರಸಾದ್ ಮುಖರ್ಜಿ ಸಂಸ್ಥೆ'ಯನ್ನು ಸಹ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಗುರುದೇವ ರವೀಂದ್ರನಾಥ ಟ್ಯಾಗೋರ್, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದರು, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ರಾಜಾ ರಾಮಮೋಹನ್ ರಾಯ್ ಅವರು ಕಲ್ಪಿಸಿಕೊಂಡಿದ್ದ ಪುನರುಜ್ಜೀವನಗೊಂಡ ಬಂಗಾಳದ ದೃಷ್ಟಿಕೋನದ ಸಾಕ್ಷಾತ್ಕಾರವು ಇಂದು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಸಂದರ್ಭದಲ್ಲಿ ಪ್ರಾರಂಭವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಪಶ್ಚಿಮ ಬಂಗಾಳ ಸರ್ಕಾರವು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸುವ ಮೂಲಕ ಗೌರವಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತೀಯ ಭಾಷೆಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಡಾ. ಮುಖರ್ಜಿ ಅವರ ದೃಷ್ಟಿಕೋನವನ್ನು ಪಶ್ಚಿಮ ಬಂಗಾಳ ಸರ್ಕಾರವು ಶೀಘ್ರದಲ್ಲೇ ಈಡೇರಿಸಲಿದೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
F6YW.jpeg)
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜೀವನವು ನಿಜಕ್ಕೂ ಹಲವು ಆಯಾಮಗಳನ್ನು ಹೊಂದಿತ್ತು ಎಂದು ಶ್ರೀ ಅಮಿತ್ ಶಾ ಹೇಳಿದರು. ಡಾ. ಮುಖರ್ಜಿ ಅವರು ತಮ್ಮ ಜೀವಿತಾವಧಿಯುದ್ದಕ್ಕೂ ತಮ್ಮ ಆದರ್ಶಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡಿದರು ಎಂದು ಶ್ರೀ ಶಾ ತಿಳಿಸಿದರು. ಭಾರತೀಯ ಜನಸಂಘವನ್ನು ಸ್ಥಾಪಿಸುವ ಮೂಲಕ, ಡಾ. ಮುಖರ್ಜಿ ಅವರು ದೇಶದ ಎಲ್ಲಾ ರಾಷ್ಟ್ರವಾದಿ ಶಕ್ತಿಗಳನ್ನು ಒಗ್ಗೂಡಿಸುವ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ತಳಹದಿಯನ್ನು ಹಾಕುವ ಬೀಜವನ್ನು ಬಿತ್ತಿದರು ಎಂದು ಅವರು ಹೇಳಿದರು. ಇಂದು ಡಾ. ಮುಖರ್ಜಿ ಬಿತ್ತಿದ ಬೀಜವು ದೇಶಾದ್ಯಂತ ಪಸರಿಸಿರುವ ಬೃಹತ್ ಆಲದ ಮರವಾಗಿ ಬೆಳೆದಿದೆ ಎಂದು ಅವರು ಹೇಳಿದರು.
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಸ್ಥಾಪಿಸಿದ ಸಂಘಟನೆಯು ಇಂದು ದೇಶದ ಭೌಗೋಳಿಕ ವಿಸ್ತೀರ್ಣದ ಸುಮಾರು ಮೂರನೇ ಎರಡರಷ್ಟು ಭಾಗದಲ್ಲಿ ಮತ್ತು ಅದರ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗದಷ್ಟು ಜನರನ್ನು ತನ್ನ ನೀತಿಗಳಿಗೆ ಅನುಗುಣವಾಗಿ ಆಡಳಿತ ನಡೆಸುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಭಾರತೀಯ ಜನಸಂಘವನ್ನು ಸ್ಥಾಪಿಸುವಾಗ, ಕೇವಲ ಸರ್ಕಾರಗಳನ್ನು ಬದಲಾಯಿಸುವುದರಿಂದ ಭಾರತದ ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಡಾ. ಮುಖರ್ಜಿ ಸಂಕಲ್ಪ ಮಾಡಿದ್ದರು ಎಂದು ಅವರು ಹೇಳಿದರು. ಸ್ವತಂತ್ರ ಭಾರತದ ನೀತಿಗಳು ದೇಶದ ಸ್ವಂತ ಮಣ್ಣಿನ ನೈತಿಕತೆಯಿಂದ ಹೊರಹೊಮ್ಮಬೇಕೇ ಹೊರತು ಪಾಶ್ಚಿಮಾತ್ಯರ ಪ್ರಭಾವವನ್ನು ಹೊಂದಿರಬಾರದು ಎಂದು ಅವರು ನಂಬಿದ್ದರು. ಇಂದು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆತ್ಮ ಎಲ್ಲೇ ಇದ್ದರೂ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಮುನ್ನಡೆಯುತ್ತಿರುವುದನ್ನು ಕಂಡು ಖಂಡಿತವಾಗಿಯೂ ಆಶೀರ್ವದಿಸುತ್ತಿರುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಜೊತೆಗೆ ಅಭಿವೃದ್ಧಿಯೊಂದಿಗೆ ಪರಂಪರೆಯನ್ನು ಸಮನ್ವಯಗೊಳಿಸುವ ಮೂಲಕ ಆಧುನಿಕ ಭಾರತವನ್ನು ನಿರ್ಮಿಸುವ ಹಾದಿಯನ್ನು ಡಾ. ಮುಖರ್ಜಿ ತೋರಿಸಿದ್ದರು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಮಾರ್ಗದರ್ಶಿ ತತ್ವವನ್ನು ಅಳವಡಿಸಿಕೊಂಡು ಭಾರತದ ಅಭಿವೃದ್ಧಿಯ ಅಡಿಪಾಯವನ್ನು ಬಲಪಡಿಸಿದ್ದಾರೆ, ಇದರಿಂದಾಗಿ ದೇಶವು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಧ್ವಜವನ್ನು ವಿಶ್ವದಾದ್ಯಂತ ಅತ್ಯುನ್ನತವಾಗಿ ಹಾರಿಸುವುದನ್ನು ಖಚಿತಪಡಿಸಿಕೊಳ್ಳುವ ಜೊತೆಗೆ 2047 ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಸಾಧಿಸಬಹುದು ಎಂದು ಶ್ರೀ ಶಾ ತಿಳಿಸಿದರು.

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ದೇಶಕ್ಕಾಗಿ ಪರಮ ತ್ಯಾಗ ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. "ಏಕ್ ವಿಧಾನ್, ಏಕ್ ಪ್ರಧಾನ್, ಏಕ್ ನಿಶಾನ್" (ಒಂದು ಸಂವಿಧಾನ, ಒಂದು ಪ್ರಧಾನಿ, ಒಂದು ಬಾವುಟ) ಎಂಬ ಘೋಷಣೆಯನ್ನು ಕೂಗಿದ ಡಾ. ಮುಖರ್ಜಿ ಅವರು ಕಾಶ್ಮೀರದ ಜೈಲಿನಲ್ಲಿ ಅನುಮಾನಾಸ್ಪದ ಸಂದರ್ಭಗಳಲ್ಲಿ ನಿಧನರಾದರು, ಆದರೆ ಅಂದಿನ ಸರ್ಕಾರ ಅವರ ಸಾವಿನ ಬಗ್ಗೆ ತನಿಖೆಗೆ ಆದೇಶಿಸಲಿಲ್ಲ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಶ್ಮೀರದಿಂದ 370 ನೇ ವಿಧಿಯನ್ನು ಕಿತ್ತೊಗೆಯುವ ಮೂಲಕ ಡಾ. ಮುಖರ್ಜಿ ಅವರ ಸಂಕಲ್ಪವನ್ನು ಈಡೇರಿಸಿದ್ದಾರೆ. ಇಂದು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ.
ನೆಹರೂ-ಲಿಯಾಖತ್ ಒಪ್ಪಂದವನ್ನು ಅಧ್ಯಯನ ಮಾಡಿದ ನಂತರ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಭಾರತದಲ್ಲಿ ಉಳಿದುಕೊಂಡ ಮುಸ್ಲಿಮರ ಕಳಕಳಿಗಳನ್ನು ಪರಿಹರಿಸುತ್ತಿರುವಾಗ, ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) ಉಳಿದಿದ್ದ ಹಿಂದೂಗಳ ಕಲ್ಯಾಣ ಮತ್ತು ರಕ್ಷಣೆಗಾಗಿ ಯಾವುದೇ ಅವಕಾಶವನ್ನು ಮಾಡಿಲ್ಲ ಎಂದು ಗಮನಿಸಿದ್ದರು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ತಿಳಿಸಿದರು. ಈ ಒಪ್ಪಂದವು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ ಎಂದು ಡಾ. ಮುಖರ್ಜಿ ನಂಬಿದ್ದರು ಮತ್ತು ಈ ಕಾರಣಕ್ಕಾಗಿಯೇ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು ಎಂದು ಶ್ರೀ ಶಾ ಹೇಳಿದರು. ಇಂದು ಡಾ. ಮುಖರ್ಜಿ ಅವರು ಸ್ಥಾಪಿಸಿದ ಪಕ್ಷದ ನೇತೃತ್ವದ ಸರ್ಕಾರವು ಸಂತ್ರಸ್ತ ಹಿಂದೂಗಳಿಗೆ ಪೌರತ್ವವನ್ನು ನೀಡಲು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಜಾರಿಗೆ ತಂದಿದೆ ಎಂದು ಶ್ರೀ ಶಾ ಹೇಳಿದರು. 370ನೇ ವಿಧಿಯನ್ನು ರದ್ದುಗೊಳಿಸಲಾಗಿದೆ, ನಿರಾಶ್ರಿತ ಹಿಂದೂಗಳಿಗೆ ಪೌರತ್ವ ನೀಡುವ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ದೇಶದ ಸಂಪೂರ್ಣ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಭಾರತದ ಮಣ್ಣಿನಿಂದ ಪ್ರತಿಯೊಬ್ಬ ನುಸುಳುಕೋರನನ್ನು ಗುರುತಿಸಿ ಹೊರಹಾಕುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
02F3.jpeg)
ವಂದೇ ಮಾತರಂ ಗೀತೆಯ ಸಂಯೋಜನೆಯ 150ನೇ ವಾರ್ಷಿಕೋತ್ಸವ ಮತ್ತು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮದಿನೋತ್ಸವ ಒಂದೇ ವರ್ಷದಲ್ಲಿ ಒದಗಿ ಬಂದಿರುವುದು ವಿಧಿಯ ಮಹತ್ವದ ಸಂಕೇತವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದರು. ವಂದೇ ಮಾತರಂ ಗೀತೆಯ ಪೂರ್ಣ ಪ್ರಸ್ತುತಿ ಈಗ ಪ್ರಾರಂಭವಾಗಿದೆ ಮತ್ತು ಹೊಸ ಪೀಳಿಗೆಯು ಭಾರತ ಮಾತೆಯ ಎಲ್ಲಾ ರೂಪಗಳಿಗೆ ಹೆಮ್ಮೆಯಿಂದ ಗೌರವ ಸಲ್ಲಿಸಲಿದೆ ಎಂದು ಅವರು ಹೇಳಿದರು.
ಸಾಂಸ್ಕೃತಿಕ ರಾಷ್ಟ್ರೀಯತೆ ಇರಲಿ, ಅಖಂಡ ಭಾರತದ ಸಂಕಲ್ಪವಿರಲಿ ಅಥವಾ ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಮುನ್ನಡೆಸುವ ದೃಷ್ಟಿಕೋನವಿರಲಿ, ಈ ಎಲ್ಲಾ ರಾಷ್ಟ್ರವಾದಿ ಆದರ್ಶಗಳ ಸಾಮಾನ್ಯ ಮೂಲವು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಸಿದ್ಧಾಂತವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಡಾ. ಮುಖರ್ಜಿ ಅವರು ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ಧೈರ್ಯ ಮತ್ತು ನಿಷ್ಠುರತೆಯಿಂದ ವ್ಯಕ್ತಪಡಿಸುತ್ತಿದ್ದರು ಎಂದು ಶ್ರೀ ಶಾ ಹೇಳಿದರು. ಡಾ. ಮುಖರ್ಜಿ ಅವರ ಆಲೋಚನೆಗಳು ಎಷ್ಟು ಶಾಶ್ವತವಾದ ಶಕ್ತಿಯನ್ನು ಹೊಂದಿವೆ ಎಂದರೆ ಇಂದು ಅವರ ಸಿದ್ಧಾಂತವು ದೇಶದ ಮುಂದೆ ಪ್ರಕಾಶಮಾನವಾಗಿ ಬೆಳಗುತ್ತಿದೆ ಮತ್ತು ಲಕ್ಷಾಂತರ ಪ್ರಕಾಶಮಾನವಾದ ಸೂರ್ಯರಂತೆ ಜಗತ್ತನ್ನು ಬೆಳಗಿಸುತ್ತಿದೆ ಎಂದು ಅವರು ಹೇಳಿದರು.
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125 ನೇ ಜನ್ಮ ದಿನಾಚರಣೆಯಲ್ಲಿ ಬಂಗಾಳದ ಜನರು ಬದಲಾವಣೆಯನ್ನು ತಂದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. ನಮ್ಮ ಪಕ್ಷ ಸರ್ಕಾರ ರಚಿಸಿದ ಕೆಲವೇ ದಿನಗಳಲ್ಲಿ ಹಲವು ಭರವಸೆಗಳನ್ನು ಈಡೇರಿಸಲಾಗಿದೆ. ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರ ನಾಯಕತ್ವದಲ್ಲಿ ಅನ್ನಪೂರ್ಣ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಉಜ್ವಲ 3.0 ಅನ್ನು ಹೊರತರಲಾಗಿದೆ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪ್ರಯಾಣವು ನೈಜವಾಗಿ ಚಾಲನೆಯಲ್ಲಿದೆ. ಲಖ್ ಪತಿ ದೀದಿ ಮಿಷನ್ ಅನ್ನು ಪ್ರಾರಂಭಿಸಲಾಗಿದೆ. ಆಯುಷ್ಮಾನ್ ಭಾರತ್ ಅಡಿಯಲ್ಲಿ ಬಡವರಿಗೆ ₹5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಸಹ ಜಾರಿಗೆ ತರಲಾಗಿದೆ. ಉತ್ತರ ಬಂಗಾಳದಲ್ಲಿ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಪ್ರಾರಂಭವಾಗಿದೆ. ಬಿಎಸ್ಎಫ್ ಬೇಲಿ ಹಾಕುವ ಕಾರ್ಯಕ್ಕಾಗಿ ಜಮೀನು ಹಸ್ತಾಂತರಿಸುವ ಕೆಲಸ ಪೂರ್ಣಗೊಂಡಿದೆ. ಭ್ರಷ್ಟಾಚಾರ ಪ್ರಕರಣಗಳ ತನಿಖೆಗಾಗಿ ನ್ಯಾಯಮೂರ್ತಿ ಬ್ರಿಜೇಂದ್ರ ನಾಥ್ ನೇತೃತ್ವದಲ್ಲಿ ಸಮಿತಿಯೊಂದನ್ನು ಸಹ ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಬಂಗಾಳದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವವರು ಸಮಿತಿಯ ವರದಿ ಸಲ್ಲಿಕೆಯಾದ ತಕ್ಷಣ ಪ್ರತಿಯೊಂದು ಪೈಸೆ ತೀರಿಸಲು ಸಿದ್ಧರಾಗಿರಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಬಂಗಾಳದ ಬಡ ಜನರು ಇದಕ್ಕಾಗಿ ಕಾಯುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಗಾಗಿ ಸಮಿತಿಯೊಂದನ್ನು ಸಹ ರಚಿಸಲಾಗಿದೆ. ಈ ಹಿಂದೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಗೆ ಅನುಮತಿ ನೀಡುತ್ತಿರಲಿಲ್ಲ, ಆದರೆ ಈಗ ಬಂಗಾಳ ಸರ್ಕಾರ ಅಂತಹ ಎಲ್ಲಾ ಪ್ರಕರಣಗಳಲ್ಲಿ ಅನುಮೋದನೆ ನೀಡಿದೆ. ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕಾಗಿ ಸಮಿತಿಯೊಂದನ್ನು ಸಹ ರಚಿಸಲಾಗಿದೆ ಮತ್ತು ನಾವು ಅದನ್ನು ಜಾರಿಗೆ ತರುತ್ತೇವೆ. ಪಶ್ಚಿಮ ಬಂಗಾಳ ಸಾರ್ವಜನಿಕ ಸುವ್ಯವಸ್ಥೆ ಪಾಲನೆ (ತಿದ್ದುಪಡಿ) ಮಸೂದೆ 2026 ಅನ್ನು ಅಂಗೀಕರಿಸಲಾಗಿದೆ. ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಾವು ಭರವಸೆ ನೀಡಿದ್ದೆವು. ಈ ಮಸೂದೆಯು ಆ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿದೆ ಎಂದು ಶ್ರೀ ಶಾ ತಿಳಿಸಿದರು.
ರಾಜ್ಯದಲ್ಲಿ ನುಸುಳುಕೋರರನ್ನು ಗುರುತಿಸಿ ಗಡೀಪಾರು ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. ತಾಯಂದಿರು ಮತ್ತು ಸಹೋದರಿಯರ ಸುರಕ್ಷತೆಗಾಗಿ 'ದುರ್ಗಾ ಸುರಕ್ಷಾ ಸ್ಕ್ವಾಡ್' ಅನ್ನು ರಚಿಸಲಾಗಿದೆ. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ರಾಜ್ಯದಲ್ಲಿಯೇ ಮುಖ್ಯಮಂತ್ರಿ ಶ್ರೀ ಶುಭೇಂದು ಅಧಿಕಾರಿಯವರು ಅವರಿಗೆ ಭವ್ಯವಾದ ಸ್ಮಾರಕವನ್ನು ನಿರ್ಮಿಸಿದ್ದಾರೆ, ಆ ಮೂಲಕ ಮುಂಬರುವ ಪೀಳಿಗೆಗೆ ಪ್ರೇರಣೆ ನೀಡಿದ್ದಾರೆ. ರಾಷ್ಟ್ರವಾದಿ ಚಿಂತನೆಯುಳ್ಳ ಸರ್ಕಾರ ಅಧಿಕಾರಕ್ಕೆ ಬಂದಾಗ, ಸಂಘಟನೆಯ ಸಿದ್ಧಾಂತದ ಮೇಲೆ ಮುನ್ನಡೆಯುವ ಸರ್ಕಾರ ರಚನೆಯಾದಾಗ, ವೈಯಕ್ತಿಕ ಹಿತಾಸಕ್ತಿ ಮತ್ತು ವಂಶಾಡಳಿತ ರಾಜಕಾರಣಕ್ಕಿಂತ ಮಿಗಿಲಾಗಿ ಸರ್ಕಾರವು ಬೆಳೆದಾಗ ಮಾತ್ರ ಇಂತಹ ಕೆಲಸಗಳು ಸಾಧ್ಯವಾಗುತ್ತವೆ. ಬಂಗಾಳದ ಜನರ ಕಲ್ಯಾಣಕ್ಕಾಗಿ ಶ್ರೀ ಶುಭೇಂದುಜಿ ಅವರು ನಮ್ಮ ಪ್ರಣಾಳಿಕೆಯನ್ನು ಅತ್ಯಂತ ವೇಗವಾಗಿ ಜಾರಿಗೆ ತರಲು ಪ್ರಾರಂಭಿಸಿದ್ದಾರೆ. ಇದು ಬಂಗಾಳದ ಜನರಿಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ದೊಡ್ಡ ಆಶಾದಾಯಕ ಕಿರಣವಾಗಿದೆ. ಇಂದು ಇಡೀ ದೇಶವೇ ಬಂಗಾಳದ ಕಡೆಗೆ ಅಪಾರ ಭರವಸೆಯಿಂದ ನೋಡುತ್ತಿದೆ. ಬಂಗಾಳವು ಹಲವು ವರ್ಷಗಳ ಕಾಲ ಧಾರ್ಮಿಕ, ಸದ್ಧಾಂತಿಕ, ಸಾಹಿತ್ಯಿಕ ಮತ್ತು ರಾಷ್ಟ್ರವಾದಿ ಕ್ಷೇತ್ರಗಳಲ್ಲಿ ಇಡೀ ದೇಶಕ್ಕೆ ನಾಯಕತ್ವವನ್ನು ನೀಡಿತ್ತು. ದೀರ್ಘಕಾಲದವರೆಗೆ, ವಿರೋಧ ಪಕ್ಷದ ಆಡಳಿತದಲ್ಲಿ, ಬಂಗಾಳದ ಆ ಮನೋಭಾವವನ್ನು ಹತ್ತಿಕ್ಕಲಾಗಿತ್ತು. ಆದಾಗ್ಯೂ, ಸಸ್ಯ ಮತ್ತು ಬೀಜವು ಬಲವಾಗಿದ್ದರೆ, ಅವರಿಗೆ ಅವಕಾಶ ಸಿಕ್ಕ ತಕ್ಷಣ ಅವು ಮತ್ತೊಮ್ಮೆ ಬೃಹತ್ ಆಲದ ಮರವಾಗುತ್ತವೆ. ಮುಖ್ಯಮಂತ್ರಿ ಶುಭೇಂದು ಜಿ ಅವರ ನಾಯಕತ್ವದಲ್ಲಿ 'ಸೋನಾರ್ ಬಾಂಗ್ಲಾ' ನಿರ್ಮಾಣವು ಪ್ರಾರಂಭವಾಗಿದ್ದು ಮಾತ್ರವಲ್ಲದೆ, ಅದನ್ನು ವಾಸ್ತವವನ್ನಾಗಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಶ್ರೀ ಶಾ ಹೇಳಿದರು.
ಬಂಗಾಳ, ಕಾಶ್ಮೀರ ಮತ್ತು ಅಸ್ಸಾಂ ಅನ್ನು ಉಳಿಸಿದ ವ್ಯಕ್ತಿಗೆ — ಇದುವರೆಗೆ ಯಾರೂ ಸ್ಮಾರಕ ನಿರ್ಮಿಸುವ ಬಗ್ಗೆ ಯೋಚಿಸಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಶ್ರೀ ಶುಭೇಂದು ಅಧಿಕಾರಿಯವರ ಸರ್ಕಾರವು ಐದು ವರ್ಷಗಳಲ್ಲಿ ಪ್ರತಿಯೊಂದು ಭರವಸೆಯನ್ನು ಈಡೇರಿಸಲಿದೆ ಮತ್ತು ‘ಸೋನಾರ್ ಬಾಂಗ್ಲಾ’ ನಿರ್ಮಾಣಕ್ಕೆ ಅಡಿಪಾಯ ಹಾಕಲಿದೆ ಎಂದು ಅವರು ಹೇಳಿದರು.
*****
(रिलीज़ आईडी: 2281902)
आगंतुक पटल : 13