ಹಣಕಾಸು ಸಚಿವಾಲಯ
azadi ka amrit mahotsav

ದೇವಾಲಯದ ಚಿನ್ನದ ಹಿಡುವಳಿಗಳ ನಗದೀಕರಣ ಕುರಿತ ಸುಳ್ಳು ಹೇಳಿಕೆಗಳ ಬಗ್ಗೆ ಸ್ಪಷ್ಟೀಕರಣ

ಪ್ರಕಟಣಾ ದಿನಾಂಕ: 19 MAY 2026 9:37AM by PIB Bengaluru

ದೇವಾಲಯದ ಚಿನ್ನದ ನಿಕ್ಷೇಪಗಳಿಗೆ ಬದಲಾಗಿ ಭಾರತ ಸರ್ಕಾರವು ದೇವಾಲಯಗಳಿಗೆ ಚಿನ್ನದ ಬಾಂಡ್ ಗಳನ್ನು ನೀಡಲು ಯೋಜಿಸುತ್ತಿದೆ ಅಥವಾ ದೇವಾಲಯದ ಚಿನ್ನದ ಹಿಡುವಳಿಗಳನ್ನು ನಗದೀಕರಿಸುವ ಪ್ರಸ್ತಾಪವನ್ನು ಅನುಮೋದಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಕೆಲವು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ಹರಿದಾಡುತ್ತಿವೆ.

ದೇಶಾದ್ಯಂತ ದೇವಾಲಯದ ಟ್ರಸ್ಟ್ ಗಳು ಅಥವಾ ಯಾವುದೇ ಧಾರ್ಮಿಕ ಸಂಸ್ಥೆಗಳು ಹೊಂದಿರುವ ಚಿನ್ನದ ಹಣಗಳಿಕೆ ಯೋಜನೆಯನ್ನು ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ ಎಂಬ ಊಹಾಪೋಹಗಳು ಮತ್ತು ವದಂತಿಗಳು ಸಂಪೂರ್ಣವಾಗಿ ಸುಳ್ಳು, ದಾರಿತಪ್ಪಿಸುವ ಮತ್ತು ಯಾವುದೇ ಆಧಾರ ರಹಿತವಾಗಿವೆ.

ದೇವಾಲಯದ ಗೋಪುರಗಳು, ಬಾಗಿಲುಗಳು ಅಥವಾ ಇತರ ದೇವಾಲಯಗಳ ರಚನೆಗಳ ಮೇಲಿನ ಚಿನ್ನದ ಫಲಕಗಳನ್ನು "ಭಾರತದ ಕಾರ್ಯತಂತ್ರದ ಚಿನ್ನದ ಮೀಸಲುಗಳು" ಎಂದು ಪರಿಗಣಿಸಲಾಗುವುದು ಎಂದು ಸೂಚಿಸುವ ಹೇಳಿಕೆಗಳು ಸುಳ್ಳು, ದಾರಿತಪ್ಪಿಸುವ ಮತ್ತು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ಸ್ಪಷ್ಟಪಡಿಸಲಾಗಿದೆ.

ಇಂತಹ ವದಂತಿಗಳನ್ನು ನಂಬಬಾರದು ಅಥವಾ ಪ್ರಸಾರ ಮಾಡಬಾರದು ಎಂದು ನಾಗರಿಕರಿಗೆ ವಿನಂತಿಸಲಾಗಿದೆ. ಪರಿಶೀಲಿಸದ ಮಾಹಿತಿಯನ್ನು ಹರಡುವುದು ಅನಗತ್ಯ ಗೊಂದಲವನ್ನು ಸೃಷ್ಟಿಸುತ್ತದೆ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸಬಹುದು.

ಅಧಿಕೃತ ಮಾರ್ಗಗಳ ಮೂಲಕ ನೀಡಲಾದ ಅಧಿಕೃತ ಸಂವಹನಗಳನ್ನು ಮಾತ್ರ ಅವಲಂಬಿಸುವಂತೆ ಸರ್ಕಾರವು ಎಲ್ಲಾ ನಾಗರಿಕರನ್ನು ಒತ್ತಾಯಿಸುತ್ತದೆ. ನೀತಿ ನಿರ್ಧಾರಗಳು ಅಥವಾ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಧಿಕೃತ ಪತ್ರಿಕಾ ಪ್ರಕಟಣೆಗಳು, ಸರ್ಕಾರಿ ವೆಬ್ ಸೈಟ್ ಗಳು ಮತ್ತು ಪರಿಶೀಲಿಸಿದ ಸಾರ್ವಜನಿಕ ಸಂವಹನ ವೇದಿಕೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ.

 

*****


(ಪ್ರಕಟಣೆ ಐ.ಡಿ.: 2262677) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil , Malayalam