ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಒಡಿಶಾದ ಮುಂಡಲಿಯಲ್ಲಿ ಸಿ ಐ ಎಸ್‌ ಎಫ್‌ ನ 57ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಭಾಷಣ


ಶೌರ್ಯ, ಸಮರ್ಪಣೆ ಮತ್ತು ತ್ಯಾಗಕ್ಕೆ ಸಮಾನಾರ್ಥಕವಾಗಿರುವ ಸಿ ಐ ಎಸ್‌ ಎಫ್, ಆಧುನಿಕತೆಯನ್ನು ಅಳವಡಿಸಿಕೊಂಡಿದೆ ಮತ್ತು ರಾಷ್ಟ್ರದ ಭದ್ರತೆಯ ಗುರಾಣಿಯಾಗಿದೆ

56 ವರ್ಷಗಳನ್ನು ಪೂರೈಸಿರುವ ಸಿ ಐ ಎಸ್‌ ಎಫ್, ಕೈಗಾರಿಕಾ ಭದ್ರತೆಯ ಕ್ಷೇತ್ರದಲ್ಲಿ ಶೂನ್ಯದಿಂದ ಶಿಖರಕ್ಕೆ ಏರಿದ್ದು, ಭಾರತದ ಕೈಗಾರಿಕಾ ಅಭಿವೃದ್ಧಿಯ ದೂರದೃಷ್ಟಿಗೆ ಅನಿವಾರ್ಯವಾಗಿದೆ

ಸಂಸತ್ತು, ಪ್ರಮುಖ ರಾಷ್ಟ್ರೀಯ ಸಂಸ್ಥೆಗಳು ಮತ್ತು ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸುವಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಸಿ ಐ ಎಸ್‌ ಎಫ್, ಈಗ ದೇಶದ ಬಂದರುಗಳ ಭದ್ರತೆಯ ಜವಾಬ್ದಾರಿಯನ್ನೂ ಹೊರಲಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2047ರ ವೇಳೆಗೆ ದೇಶವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದಾರೆ ಮತ್ತು ಈ ಉದ್ದೇಶವನ್ನು ಸಾಧಿಸುವಲ್ಲಿ ಸಿ ಐ ಎಸ್‌ ಎಫ್ ವೇಗವರ್ಧಕದ ಪಾತ್ರವನ್ನು ವಹಿಸುತ್ತಿದೆ

ಭಾರತದಾದ್ಯಂತ 70 ವಿಮಾನ ನಿಲ್ದಾಣಗಳು ಸೇರಿದಂತೆ 361 ಪ್ರಮುಖ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವ ಸಿ ಐ ಎಸ್‌ ಎಫ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಡ್ರೋನ್ ಭದ್ರತೆಯ ನೋಡಲ್ ಏಜೆನ್ಸಿಯಾಗಿ ನೇಮಿಸಿದೆ

ಮುಂಬರುವ ದಿನಗಳಲ್ಲಿ, ಸಿ ಐ ಎಸ್‌ ಎಫ್ ಹೈಬ್ರಿಡ್ ಮಾದರಿಯಲ್ಲಿ ಖಾಸಗಿ ಕೈಗಾರಿಕಾ ಗುಂಪುಗಳಿಗೂ ಭದ್ರತೆಯನ್ನು ಒದಗಿಸಲಿದೆ

ನಕ್ಸಲಿಸಂ ಅಂತ್ಯ ಕಾಣುವ ಹಂತಕ್ಕೆ ಬರುವಲ್ಲಿ ಸಿ ಐ ಎಸ್ ಎಫ್ ಪ್ರಮುಖ ಪಾತ್ರ ವಹಿಸಿದೆ

ತಿರುಪತಿಯಿಂದ ಪಶುಪತಿನಾಥ ದೇವಾಲಯದವರೆಗೆ ಕೆಂಪು ಕಾರಿಡಾರ್ ನಿರ್ಮಿಸುವ ಕನಸು ಕಂಡಿದ್ದ ನಕ್ಸಲೀಯರನ್ನು ಮಾರ್ಚ್ 31, 2026 ರೊಳಗೆ ನಮ್ಮ ಭದ್ರತಾ ಪಡೆಗಳು ಸಂಪೂರ್ಣವಾಗಿ ಸೋಲಿಸಲಿವೆ

ಕೇಂದ್ರ ಗೃಹ ಸಚಿವರು ₹890 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಸಿ ಐ ಎಸ್‌ ಎಫ್‌ ನ ಮೂರು ವಸತಿ ಸಂಕೀರ್ಣಗಳಿಗೆ (ಕಾಮರೂಪ, ನಾಸಿಕ್ ಮತ್ತು ಸೆಹೋರ್) ಶಂಕುಸ್ಥಾಪನೆ ಮಾಡಿದರು ಮತ್ತು ಎರಡು ವಸತಿ ಸಂಕೀರ್ಣಗಳನ್ನು (ರಾಜರ್ಹತ್ ಮತ್ತು ದೆಹಲಿ) ಉದ್ಘಾಟಿಸಿದರು

ಪ್ರಕಟಣಾ ದಿನಾಂಕ: 06 MAR 2026 2:45PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಒಡಿಶಾದ ಮುಂಡಲಿಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿ ಐ ಎಸ್‌ ಎಫ್‌) ಯ 57ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೇಂದ್ರ ಗೃಹ ಸಚಿವರು ₹890 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ  ಸಿ ಐ ಎಸ್‌ ಎಫ್‌ ನ ಮೂರು ವಸತಿ ಸಂಕೀರ್ಣಗಳಿಗೆ (ಕಾಮರೂಪ, ನಾಸಿಕ್ ಮತ್ತು ಸೆಹೋರ್) ಶಂಕುಸ್ಥಾಪನೆ ಮಾಡಿದರು ಮತ್ತು ಎರಡು ವಸತಿ ಸಂಕೀರ್ಣಗಳನ್ನು (ರಾಜರ್ಹತ್ ಮತ್ತು ದೆಹಲಿ) ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ, ಕೇಂದ್ರ ಗೃಹ ಕಾರ್ಯದರ್ಶಿಗಳು, ಸಿ ಐ ಎಸ್ ಎಫ್ ಮಹಾನಿರ್ದೇಶಕರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಇಂದು 56 ವರ್ಷಗಳನ್ನು ಪೂರೈಸಿರುವ ಸಿ ಐ ಎಸ್ ಎಫ್ ಕೈಗಾರಿಕಾ ಭದ್ರತೆಯ ಕ್ಷೇತ್ರದಲ್ಲಿ ಶೂನ್ಯದಿಂದ ಶಿಖರಕ್ಕೆ ಏರಿದೆ, ಇದು ಪಡೆಯ ಸಮರ್ಪಣೆ ಮತ್ತು ಶೌರ್ಯದ ಗಾಥೆಯಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಬಲಿಷ್ಠ ರಾಷ್ಟ್ರೀಯ ಆರ್ಥಿಕತೆಯನ್ನು ನಿರ್ಮಿಸುವ ಮತ್ತು ಭಾರತವನ್ನು ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ದೂರದೃಷ್ಟಿಯನ್ನು ಕೈಗಾರಿಕಾ ಅಭಿವೃದ್ಧಿಯಿಲ್ಲದೆ ಸಾಕಾರಗೊಳಿಸಲು ಸಾಧ್ಯವಿಲ್ಲ ಮತ್ತು ಕೈಗಾರಿಕಾ ಬೆಳವಣಿಗೆಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ರಾಷ್ಟ್ರೀಯ ಮಟ್ಟದ ಕೈಗಾರಿಕಾ ಭದ್ರತಾ ಪಡೆಯ ಅಗತ್ಯವಿದೆ ಎಂದು ಅವರು ಹೇಳಿದರು. ಕಳೆದ 56 ವರ್ಷಗಳಲ್ಲಿ, ಸಿ ಐ ಎಸ್ ಎಫ್ ಸ್ಥಾಪನೆಯ ಉದ್ದೇಶಗಳನ್ನು ಪೂರೈಸುವುದರ ಜೊತೆಗೆ ಪ್ರತಿಯೊಂದು ರೀತಿಯ ಸವಾಲುಗಳಿಂದ ಕಲಿಯುತ್ತಾ ಕಾಲಕ್ಕೆ ತಕ್ಕಂತೆ ನಿರಂತರವಾಗಿ ವಿಕಸನಗೊಂಡಿದೆ ಎಂದು ಶ್ರೀ ಶಾ ತಿಳಿಸಿದರು. ಸಿ ಐ ಎಸ್ ಎಫ್ ತನ್ನ ಸಂಪ್ರದಾಯಗಳನ್ನು ಜೀವಂತವಾಗಿರಿಸಿಕೊಂಡು ಆಧುನಿಕತೆಯನ್ನು ಅಳವಡಿಸಿಕೊಂಡಿದೆ ಎಂದು ಅವರು ಹೇಳಿದರು. ಭಾರತದ ಇತಿಹಾಸದ ಶ್ರೀಮಂತ ಸಂಪ್ರದಾಯಗಳೊಂದಿಗೆ ಧೈರ್ಯ, ತ್ಯಾಗ ಮತ್ತು ಸಮರ್ಪಣೆಯನ್ನು ಸಂಯೋಜಿಸಿ, ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಸಿ ಐ ಎಸ್ ಎಫ್ ಪ್ರತಿಯೊಂದು ಸವಾಲನ್ನು ಎದುರಿಸುವ ಸಂಕಲ್ಪವನ್ನು ಪ್ರದರ್ಶಿಸಿದೆ ಎಂದು ಗೃಹ ಸಚಿವರು ಹೇಳಿದರು.

ಭಾರತದ ಕೈಗಾರಿಕಾ ಅಭಿವೃದ್ಧಿಯ ದೃಷ್ಟಿಕೋನವನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಿಲ್ಲದೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಿ ಐ ಎಸ್ ಎಫ್ ಯಾವಾಗಲೂ ರಾಷ್ಟ್ರದ ರಕ್ಷಣಾ ಕವಚವಾಗಿ ದೃಢವಾಗಿ ನಿಂತಿದೆ ಎಂದು ಅವರು ತಿಳಿಸಿದರು. ಎಲ್ಲಾ ಬಂದರುಗಳ ಭದ್ರತೆಯನ್ನು ಸಿ ಐ ಎಸ್‌ ಎಫ್‌ ಗೆ ವಹಿಸಲು ಇತ್ತೀಚೆಗೆ ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಶ್ರೀ ಶಾ ಹೇಳಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನರ ಮುಂದೆ ಎರಡು ಪ್ರಮುಖ ಸಂಕಲ್ಪಗಳನ್ನು ಇಟ್ಟಿದ್ದಾರೆ — 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಜಾಗತಿಕವಾಗಿ ಅಗ್ರ ಸ್ಥಾನವನ್ನು ಪಡೆಯುವುದು ಮತ್ತು 2027ರ ವೇಳೆಗೆ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವುದು. ಈ ಗುರಿಗಳನ್ನು ತಲುಪುವಲ್ಲಿ ಸಿ ಐ ಎಸ್ ಎಫ್ ವೇಗವರ್ಧಕದ ಪಾತ್ರವನ್ನು ವಹಿಸುತ್ತಿದೆ ಎಂದು ಶ್ರೀ ಶಾ ಹೇಳಿದರು.

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳ ತ್ಯಾಗವು ದೇಶವನ್ನು ಆರ್ಥಿಕವಾಗಿ ಬಲಪಡಿಸುವಲ್ಲಿ ಯಾವಾಗಲೂ ಪ್ರಮುಖ ಪಾತ್ರ ವಹಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸಿ ಐ ಎಸ್ ಎಫ್ ತನ್ನ ಕರ್ತವ್ಯಗಳಿಂದ ಎಂದಿಗೂ ಹಿಂದೆ ಸರಿದಿಲ್ಲ ಎಂದು ಅವರು ತಿಳಿಸಿದರು. 9 ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಗಳು, 2 ಅತ್ಯುತ್ತಮ ಬೆಟಾಲಿಯನ್ ಟ್ರೋಫಿಗಳು ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿನ ಪ್ರದರ್ಶನಕ್ಕಾಗಿ ಕ್ರೀಡಾಪಟುಗಳಿಗೆ ನೀಡಲಾದ ಪದಕಗಳು ಸಿ ಐ ಎಸ್ ಎಫ್ ಪ್ರತಿ ಕ್ಷೇತ್ರದಲ್ಲಿಯೂ ಉತ್ಕೃಷ್ಟತೆಯನ್ನು ನೀಡಲು ಸಿದ್ಧವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಕಳೆದ 56 ವರ್ಷಗಳಲ್ಲಿ ಸಿ ಐ ಎಸ್ ಎಫ್  ಶೌರ್ಯ ಮತ್ತು ವಿಶಿಷ್ಟ ಸೇವೆಗಾಗಿ 13,693 ಪದಕಗಳನ್ನು ಪಡೆಯುವ ಮೂಲಕ ತನ್ನ ದಕ್ಷತೆಯನ್ನು ಪ್ರದರ್ಶಿಸಿದೆ ಎಂದು ಶ್ರೀ ಶಾ ಹೇಳಿದರು.

ಇಂದು ಇಲ್ಲಿ 890 ಕೋಟಿ ರೂಪಾಯಿ ಮೌಲ್ಯದ 5 ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ರಾಜರ್ಹತ್ ಮತ್ತು ಮೈದಾನಗಢಿಯಲ್ಲಿನ ವಸತಿ ಸಂಕೀರ್ಣಗಳು ಪೂರ್ಣಗೊಂಡಿದ್ದು, ಇದು ನಮ್ಮ ಯೋಧರು ಮತ್ತು ಅವರ ಕುಟುಂಬಗಳಿಗೆ ಸೌಲಭ್ಯಗಳನ್ನು ಒದಗಿಸುತ್ತವೆ ಎಂದು ಅವರು ಹೇಳಿದರು. ಇಂದು ಸಿ ಐ ಎಸ್‌ ಎಫ್‌ ನ ವಾರ್ಷಿಕ ಜರ್ನಲ್ ಆದ ‘ಸೆಂಟಿನೆಲ್’ ಅನ್ನು ಸಹ ಇಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಇಂದು ಸಿ ಐ ಎಸ್ ಎಫ್ ಭಾರತದಾದ್ಯಂತ 70 ವಿಮಾನ ನಿಲ್ದಾಣಗಳ ಜೊತೆಗೆ ದೇಶದ 361 ಪ್ರಮುಖ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಡ್ರೋನ್ ಭದ್ರತೆಯಲ್ಲಿ ಸಿ ಐ ಎಸ್‌ ಎಫ್‌ ಗೆ ನೋಡಲ್ ಏಜೆನ್ಸಿಯ ಪಾತ್ರವನ್ನು ಸಹ ನೀಡಲಾಗಿದೆ ಎಂದು ಅವರು ತಿಳಿಸಿದರು. ಕಳೆದ 1 ವರ್ಷದಲ್ಲಿ, ಕರ್ತವ್ಯ ಭವನ, ಸೇವಾ ತೀರ್ಥ, ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ನವಿ ಮುಂಬೈ ವಿಮಾನ ನಿಲ್ದಾಣ, ಲೆಂಗ್ಪುಯಿ ವಿಮಾನ ನಿಲ್ದಾಣ, ಜವಾಹರಪುರ ಶಾಖೋತ್ಪನ್ನ ವಿದ್ಯುತ್ ಯೋಜನೆ, ಭಾಕ್ರಾ ಅಣೆಕಟ್ಟು ಯೋಜನೆ ಮುಂತಾದ ಅನೇಕ ಯೋಜನೆಗಳ ಭದ್ರತೆಯನ್ನು ಸಿ ಐ ಎಸ್‌ ಎಫ್‌ ಗೆ ವಹಿಸಲಾಗಿದೆ ಎಂದು ಅವರು ಹೇಳಿದರು.

ಬಂದರು ಭದ್ರತೆಯನ್ನು ವಹಿಸಿಕೊಂಡ ನಂತರ, ಸಿ ಐ ಎಸ್ ಎಫ್ ದೇಶದ ವಿಶಾಲವಾದ ಕಡಲ ಗಡಿಯಲ್ಲಿರುವ ಬಂದರುಗಳನ್ನು ಸಹ ರಕ್ಷಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಾಲ್ಕು ವರ್ಷಗಳ ಹಿಂದೆ, ನಾವು ಸಿ ಐ ಎಸ್ ಎಫ್ ಅನ್ನು ಹೈಬ್ರಿಡ್ ಮಾದರಿಯನ್ನು ಅಭಿವೃದ್ಧಿಪಡಿಸಲು ಮತ್ತು ಖಾಸಗಿ ಕೈಗಾರಿಕಾ ಗುಂಪುಗಳಿಗೂ ಭದ್ರತೆಯನ್ನು ಒದಗಿಸಲು ಕೇಳಿದ್ದೆವು, ಅದನ್ನು ಅತ್ಯಂತ ಆಧುನಿಕ ಉಪಕರಣಗಳೊಂದಿಗೆ ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ ಸಿ ಐ ಎಸ್ ಎಫ್ ಹೈಬ್ರಿಡ್ ಮಾದರಿಯಲ್ಲಿ ಖಾಸಗಿ ಕೈಗಾರಿಕಾ ಗುಂಪುಗಳಿಗೂ ಭದ್ರತೆ ನೀಡಲಿದೆ ಎಂದು ಶ್ರೀ ಶಾ ತಿಳಿಸಿದರು.

ಮಾರ್ಚ್ 31, 2026ರ ವೇಳೆಗೆ ದೇಶವನ್ನು ನಕ್ಸಲಿಸಂನಿಂದ ಮುಕ್ತಗೊಳಿಸುವುದು ಮೋದಿ ಸರ್ಕಾರದ ಸಂಕಲ್ಪವಾಗಿದೆ ಮತ್ತು ಇದರಲ್ಲಿ ಸಿ ಐ ಎಸ್ ಎಫ್ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಒಡಿಶಾ, ಛತ್ತೀಸಗಢ ಮತ್ತು ತೆಲಂಗಾಣದಲ್ಲಿ ನಕ್ಸಲ್ ನಿಗ್ರಹಧಿ ಕಾರ್ಯಾಚರಣೆಗಳಲ್ಲಿ ಸಿ ಐ ಎಸ್ ಎಫ್ ತನ್ನ ಪಾತ್ರವನ್ನು ನಿರ್ವಹಿಸಿದೆ. ಮಾರ್ಚ್ 31ರ ವೇಳೆಗೆ ದೇಶವು ನಕ್ಸಲಿಸಂನಿಂದ ಸಂಪೂರ್ಣ ಮುಕ್ತವಾಗಲಿದೆ ಮತ್ತು ತಿರುಪತಿಯಿಂದ ಪಶುಪತಿನಾಥದವರೆಗೆ ಕೆಂಪು ಕಾರಿಡಾರ್ ನಿರ್ಮಿಸುವ ಕನಸು ಕಾಣುತ್ತಿರುವವರು ಸಂಪೂರ್ಣವಾಗಿ ಸೋಲಿಸಲ್ಪಡುತ್ತಾರೆ ಮತ್ತು ನಮ್ಮ ಭದ್ರತಾ ಪಡೆಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲಿವೆ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ಮೋದಿಯವರ ನೇತೃತ್ವದಲ್ಲಿ ಇದು ನಮ್ಮ ಭದ್ರತಾ ಪಡೆಗಳ ಅತಿ ದೊಡ್ಡ ಸಾಧನೆಯಾಗಿದೆ ಎಂದು ಶ್ರೀ ಶಾ ಹೇಳಿದರು. ಇಂದು ನಾವು ದೇಶವನ್ನು ನಕ್ಸಲಿಸಂನಿಂದ ಮುಕ್ತಗೊಳಿಸುವ ಹಂತದಲ್ಲಿದ್ದೇವೆ ಎಂದು ಅವರು ಹೇಳಿದರು. ಇಡೀ ದೇಶವನ್ನು ಅಭಿವೃದ್ಧಿಪಡಿಸುವುದು ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ಪ್ರಧಾನ ಮಂತ್ರಿ ಮೋದಿ ಅವರ ಗುರಿಯಾಗಿದೆ ಮತ್ತು ಇದಕ್ಕಾಗಿ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ತಿಳಿಸಿದರು. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಗೃಹ ಸಚಿವಾಲಯವು ಗಡಿಗಳಲ್ಲಿ ಮತ್ತು ಗಡಿಯೊಳಗೆ ತನ್ನ ಪಾತ್ರವನ್ನು ನಿರ್ವಹಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಗೃಹ ಸಚಿವರು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2235930) ವಿಸಿಟರ್ ಕೌಂಟರ್ : 52