ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೆನಡಾ ಪ್ರಧಾನಮಂತ್ರಿ ಅವರ ಭೇಟಿಯೊಂದಿಗೆ ಉಭಯ ರಾಷ್ಟ್ರಗಳ ನಡುವಿನ ನಿಜವಾದ ನವೀಕರಿಸಿದ ಪಾಲುದಾರಿಕೆಗೆ ಬಲವಾದ ಅಡಿಪಾಯವನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು

ಪ್ರಕಟಣಾ ದಿನಾಂಕ: 03 MAR 2026 10:16PM by PIB Bengaluru

ಕೆನಡಾದ ಪ್ರಧಾನಮಂತ್ರಿ ಮಾರ್ಕ್‌ ಕಾರ್ನೆ ಅವರ ಭಾರತ ಭೇಟಿ ಎರಡೂ ರಾಷ್ಟ್ರಗಳ ನಡುವಿನ ನೈಜ ನವೀಕೃತ ಪಾಲುದಾರಿಕೆಗೆ ಭದ್ರ ಬುನಾದಿ ಹಾಕಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಎರಡೂ ದೇಶಗಳ ಜನರ ವಿಶ್ವಾಸ, ಬೆಳವಣಿಗೆ, ನಾವಿನ್ಯತೆ ಮತ್ತು ಹಂಚಿಕೆಯ ಸಮೃದ್ಧಿಯಿಂದ ವ್ಯಾಖ್ಯಾನಿಸಲಾದ ಭವಿಷ್ಯವನ್ನು ನಿರ್ಮಿಸಲು ಒಗ್ಗೂಡಿ ಶ್ರಮಿಸಲು ಎದಿರು ನೋಡುತ್ತಿದ್ದೇನೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಕೆನಡಾದ ಪ್ರಧಾನಮಂತ್ರಿ ಅವರ ಎಕ್ಸ್‌ ಖಾತೆಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ;

"ನೀವು ಹೇಳಿದ್ದು ಸರಿ, ಪ್ರಧಾನಮಂತ್ರಿ ಕಾರ್ನೆ. ನಿಮ್ಮ ಭೇಟಿಯು ನೈಜವಾಗಿ ನವೀಕೃತ ಪಾಲುದಾರಿಕೆಗೆ ಬಲವಾದ ಅಡಿಪಾಯವನ್ನು ನಿರ್ಮಿಸಿದೆ.

ನಮ್ಮ ರಾಷ್ಟ್ರಗಳ ಜನರಿಗೆ ವಿಶ್ವಾಸ, ಬೆಳವಣಿಗೆ, ನಾವೀನ್ಯತೆ ಮತ್ತು ಹಂಚಿಕೆಯ ಸಮೃದ್ಧಿಯಿಂದ ವ್ಯಾಖ್ಯಾನಿಸಲಾದ ಭವಿಷ್ಯವನ್ನು ನಿರ್ಮಿಸಲು ನಿಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ.

@MarkJCarney’’ 

 

*****


(ಪ್ರಕಟಣೆ ಐ.ಡಿ.: 2235247) ವಿಸಿಟರ್ ಕೌಂಟರ್ : 59