ಪ್ರಧಾನ ಮಂತ್ರಿಯವರ ಕಛೇರಿ
ಮಿಜೋರಂ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
20 FEB 2026 9:33AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಿಜೋರಂ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಮಿಜೋರಂನ ಬಲವಾದ ಸಮುದಾಯ ಮನೋಭಾವ ಮತ್ತು ದಯೆ-ಕರುಣೆಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಸೌಜನ್ಯಪೂರ್ಣ ಜನರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಪ್ರಶಂಸಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದುಕೊಂಡಿದ್ದಾರೆ;
“ಮಿಜೋರಂ ರಾಜ್ಯೋತ್ಸವದ ಅಂಗವಾಗಿ ಮಿಜೋರಂ ಜನತೆಗೆ ಹಾರ್ದಿಕ ಶುಭಾಶಯಗಳು.
ಅದ್ಭುತ ನೈಸರ್ಗಿಕ ಸೌಂದರ್ಯ ಮತ್ತು ಶಾಶ್ವತ ಸಾಂಸ್ಕೃತಿಕ ಪರಂಪರೆಗಾಗಿ ಮಿಜೋರಂ ಪ್ರಸಿದ್ಧವಾಗಿದೆ. ಇಲ್ಲಿನ ಬಲವಾದ ಸಮುದಾಯ ಮನೋಭಾವ ಮತ್ತು ಸೌಜನ್ಯಪೂರ್ಣ ಜನರು ದಯೆ ಮತ್ತು ಕರುಣೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತಾರೆ. ಪರಂಪರೆ, ಸಂಗೀತ ಮತ್ತು ದೈನಂದಿನ ಜೀವನದ ಇತರ ಅಂಶಗಳ ಮೂಲಕ ವ್ಯಕ್ತವಾಗುವ ಸಮೃದ್ಧ ಮಿಜೋ ಪರಂಪರೆ ಬಹಳ ಪ್ರೇರಣಾದಾಯಕವಾಗಿದೆ.
ಮುಂದಿನ ವರ್ಷಗಳಲ್ಲಿ ಮಿಜೋರಂ ಅಭಿವೃದ್ಧಿಯ ಮಾರ್ಗದಲ್ಲಿ ಮುಂದುವರಿದು ಹೊಸ ಮೈಲಿಗಲ್ಲುಗಳನ್ನು ಸಾಧಿಸಲಿ ಎಂದು ಹಾರೈಸುತ್ತೇನೆ.”
*****
(ಪ್ರಕಟಣೆ ಐ.ಡಿ.: 2230586)
ವಿಸಿಟರ್ ಕೌಂಟರ್ : 4