ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಸರ್ಕಾರವು 16ನೇ ಹಣಕಾಸು ಆಯೋಗದ ಶಿಫಾರಸನ್ನು ಶೇಕಡಾ 41 ರಷ್ಟು ಭಾಗಿಸಬಹುದಾದ ಪೂಲ್‌ ನಿಂದ (ವರ್ಟಿಕಲ್ ಷೇರು ಡೆವಲ್ಯೂಷನ್) ರಾಜ್ಯಗಳ ಅಭಿವೃದ್ಧಿ ಪಾಲನ್ನು ಉಳಿಸಿಕೊಳ್ಳಲು ಒಪ್ಪಿಕೊಂಡಿದೆ


2026-27ನೇ ಹಣಕಾಸು ವರ್ಷಕ್ಕೆ ಹಣಕಾಸು ಆಯೋಗದ ಅನುದಾನವಾಗಿ ರಾಜ್ಯಗಳಿಗೆ ₹1.4 ಲಕ್ಷ ಕೋಟಿ ನೀಡಲಿದೆ 

ಪ್ರಕಟಣಾ ದಿನಾಂಕ: 01 FEB 2026 12:40PM by PIB Bengaluru

ಶೇಕಡಾ 41 ರಷ್ಟು ಲಂಬವಾದ ರಾಜ್ಯಗಳ ವಿಕೇಂದ್ರೀಕರಣ ಪಾಲನ್ನು ಉಳಿಸಿಕೊಳ್ಳಲು 16ನೇ ಹಣಕಾಸು ಆಯೋಗದ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿದೆ.

2026-27ರ ಕೇಂದ್ರ ಬಜೆಟ್ ಅನ್ನು ಇಂದು ಸಂಸತ್ತಿನಲ್ಲಿ ಮಂಡಿಸುತ್ತಾ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, "ಶೇಕಡಾ 41 ರಷ್ಟು ಲಂಬವಾದ ರಾಜ್ಯಗಳ ವಿಕೇಂದ್ರೀಕರಣ ಪಾಲನ್ನು ಉಳಿಸಿಕೊಳ್ಳಲು ಆಯೋಗದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆಯೋಗವು ಶಿಫಾರಸ್ಸು ಮಾಡಿದಂತೆ, 2026-27ನೇ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ ₹1.4 ಲಕ್ಷ ಕೋಟಿಯನ್ನು ಹಣಕಾಸು ಆಯೋಗದ ಅನುದಾನಗಳಾಗಿ ಒದಗಿಸಿದ್ದೇನೆ. ಇವುಗಳಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತು ವಿಪತ್ತು ನಿರ್ವಹಣಾ ಅನುದಾನಗಳು ಸೇರಿವೆ."

ಆಯೋಗವು ತನ್ನ ವರದಿಯನ್ನು ನವೆಂಬರ್ 17, 2025 ರಂದು ರಾಷ್ಟ್ರಪತಿಗಳಿಗೆ ಸಲ್ಲಿಸಿದೆ ಮತ್ತು ಸಂವಿಧಾನದ 281 ನೇ ವಿಧಿಯ ಅಡಿಯಲ್ಲಿ ಕಡ್ಡಾಯವಾಗಿ ಸಂಸತ್ತಿನಲ್ಲಿ ಆಯೋಗದ ಶಿಫಾರಸುಗಳ ಕುರಿತು ತೆಗೆದುಕೊಂಡ ಕ್ರಮಗಳ ವರದಿಯ ವಿವರಣಾತ್ಮಕ ಜ್ಞಾಪಕ ಪತ್ರದೊಂದಿಗೆ ಸರ್ಕಾರ ವರದಿಯನ್ನು ಮಂಡಿಸಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2221424) ವಿಸಿಟರ್ ಕೌಂಟರ್ : 95